ತೃತೀಯ ಲಿಂಗಿಗಳು ಮತದಾನ ಮಾಡದಿದ್ದರೆ, ಹಕ್ಕುಗಳನ್ನು ಕೇಳಲು ಅವರಿಗೆ ಯಾವುದೇ ಅಧಿಕಾರವಿಲ್ಲ: ಜೋಗತಿ ಮಂಜಮ್ಮ

ಒಂದು ವೇಳೆ ತೃತೀಯ ಲಿಂಗಿಗಳು ಮತದಾನ ಮಾಡದಿದ್ದರೆ, ಅವರ ಹಕ್ಕುಗಳನ್ನು ಕೇಳಲು ಅವರಿಗೆ ಯಾವುದೇ ಅಧಿಕಾರವಿಲ್ಲ. ನಾನು ಹೋದಲ್ಲೆಲ್ಲಾ ನಮ್ಮ  ಸಮುದಾಯದ ಸದಸ್ಯರಿಗೆ ಇದನ್ನು ಹೇಳುತ್ತಿದ್ದೇನೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಜೋಗತಿ ಮಂಜಮ್ಮ ಹೇಳಿದ್ದಾರೆ.
ಜೋಗತಿ ಮಂಜಮ್ಮ
ಜೋಗತಿ ಮಂಜಮ್ಮ

ಬೆಂಗಳೂರು: ಒಂದು ವೇಳೆ ತೃತೀಯ ಲಿಂಗಿಗಳು ಮತದಾನ ಮಾಡದಿದ್ದರೆ, ಅವರ ಹಕ್ಕುಗಳನ್ನು ಕೇಳಲು ಅವರಿಗೆ ಯಾವುದೇ ಅಧಿಕಾರವಿಲ್ಲ. ನಾನು ಹೋದಲ್ಲೆಲ್ಲಾ ನಮ್ಮ ಸಮುದಾಯದ ಸದಸ್ಯರಿಗೆ ಇದನ್ನು ಹೇಳುತ್ತಿದ್ದೇನೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಜೋಗತಿ ಮಂಜಮ್ಮ ಹೇಳಿದ್ದಾರೆ.

ರಾಜ್ಯ ಚುನಾವಣಾ ಐಕಾನ್ ತೃತೀಯಲಿಂಗಿ ಜೋಗತಿ ಮಂಜಮ್ಮ ಅವರನ್ನು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಆಯ್ಕೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ತೃತೀಯಲಿಂಗಿಯೊಬ್ಬರಿಗೆ ಈ ಗೌರವ ಲಭಿಸಿದೆ.

ಯಾವುದೇ ಮುಖ್ಯವಾಹಿನಿಯ ಚಟುವಟಿಕೆಯಲ್ಲಿ ನಮ್ಮ ಸಮುದಾಯವನ್ನು ಸೇರಿಸಿದಾಗ ನಮಗೆ ಒಳ್ಳೆಯದಾಗುತ್ತದೆ. ಈ ತಿಂಗಳ ಆರಂಭದಲ್ಲಿ ಅವರು ನನ್ನನ್ನು ತಮ್ಮ ಕಚೇರಿಗೆ ಆಹ್ವಾನಿಸಿದಾಗ ಮತ್ತು ನಾನು ಐಕಾನ್ ಆಗಿ ಆಯ್ಕೆಯಾಗಿದ್ದೇನೆ ಎಂದು ಹೇಳಿದಾಗ, ನನ್ನ ಜವಾಬ್ದಾರಿ ಪ್ರಜ್ಞೆ ನನಗೆ ತಿಳಿಯಿತು. ನನ್ನ ಸಮುದಾಯದ ಜನರು ಹೊರಗೆ ಬಂದು ಮತ ಚಲಾಯಿಸುವುದನ್ನು ನಾನು ಖಚಿತಪಡಿಸುತ್ತೇನೆ. ಚುನಾವಣೆಗಳು ಪವಿತ್ರ, ಜನರು ಹೊರಗೆ ಹೋಗಿ ಮತ ಚಲಾಯಿಸದಿದ್ದರೆ, ಅವರು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಅಗೌರವ ತೋರಿಸುತ್ತಿದ್ದಾರೆ ಎಂದರ್ಥ ಎಂದು ಜೋಗತಿ ಮಂಜಮ್ಮ ಹೇಳಿದ್ದಾರೆ.

ಈ ಬಾರಿ 41,000ಕ್ಕೂ ಹೆಚ್ಚು ತೃತೀಯಲಿಂಗಿಗಳು ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ. ಮಂಜಮ್ಮ ಅವರು ಸುಮಾರು 16 ವರ್ಷ ವಯಸ್ಸಿನವರಾಗಿದ್ದಾಗ ಮನೆ ತೊರೆದರು ಮತ್ತು 1991 ರಲ್ಲಿ 34 ವರ್ಷದವರಾಗಿದ್ದಾಗ ಮತದಾರರ ಗುರುತಿನ ಚೀಟಿಯನ್ನು ಪಡೆದರು. ಅದೂ ಕೂಡ ನಾನು ಒಂದೇ ಸ್ಥಳದಲ್ಲಿ ಉಳಿಯದೆ ಮತ್ತು ಯಾವಾಗಲೂ ಪ್ರಯಾಣಿಸುತ್ತಿದ್ದ ಕಾರಣ. ನನಗೆ ಮನೆ ಇರಲಿಲ್ಲ, ಚುನಾವಣೆಯ ಕಲ್ಪನೆಯೂ ಇರಲಿಲ್ಲ. ನಾನು ಜಾನಪದ ಕಲೆಗಳನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದ ನಂತರ ಮತ್ತು ಪತ್ರಿಕೆಗಳನ್ನು ಓದಲು ಪ್ರಾರಂಭಿಸಿದ ನಂತರವೇ ಅದರ ಮೌಲ್ಯವನ್ನು ಅರಿತು ನನ್ನ ಮತದಾರರ ಗುರುತಿನ ಚೀಟಿಯನ್ನು ಪಡೆದುಕೊಂಡೆ ಎಂದು ಅವರು ಹೇಳಿದರು. ಅದರಲ್ಲಿ ಆಕೆಯ ಲಿಂಗವನ್ನು ಮಹಿಳೆ ಎಂದು ಉಲ್ಲೇಖಿಸಲಾಗಿದೆ.

65 ವರ್ಷ ವಯಸ್ಸಿನ ಮಂಜಮ್ಮ ಕಳೆದ 32 ವರ್ಷಗಳಿಂದ ಮತದಾನ ಮಾಡುತ್ತಿದ್ದಾರೆ. ಪಂಚಾಯಿತಿ ಇರಲಿ ಅಥವಾ ಲೋಕಸಭೆ ಇರಲಿ, ನಾನು ಒಂದೇ ಒಂದು ಚುನಾವಣೆಯನ್ನು ತಪ್ಪಿಸಿಲ್ಲ. ಮತದಾನದ ದಿನದಂದು ನನ್ನ ಊರಿನ ಹೊರಗೆ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿರಾಕರಿಸಿದ್ದೇನೆ. ನನ್ನ ಹಳ್ಳಿಯಲ್ಲಿರುವ ನನ್ನ ಸಮುದಾಯದವರಿಗೂ ಮತದಾನ ಮಾಡುವಂತೆ ತಾಕೀತು ಮಾಡಿದ್ದೇನೆ. ಇಂದಿಗೂ ನಾನು ನನ್ನ ಸಮುದಾಯದವರಿಗೆ ಮತದಾರರ ಗುರುತಿನ ಚೀಟಿ ಕೊಡಿಸುವಲ್ಲಿ ಸಕ್ರಿಯವಾಗಿದ್ದೇನೆ ಎಂದು ಅವರು ಹೇಳಿದರು. ಇದೀಗ ಆಕೆಗೆ ಟ್ರಾನ್ಸ್‌ಜೆಂಡರ್ ಎಂದು ನಮೂದಿಸಿರುವ ಕಾರ್ಡ್ ಸಿಕ್ಕಿದೆ.

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕಗೊಂಡ ಮೊದಲ ಟ್ರಾನ್ಸ್ ವುಮನ್ ಮಂಜಮ್ಮ ಅವರು ಬಳ್ಳಾರಿಯ ಕಲ್ಲುಕಂಬ ಗ್ರಾಮದಿಂದ ಬಂದವರು. ಮಂಜುನಾಥ ಶೆಟ್ಟಿ ಎಂದು ಹೆಸರಿಸಲ್ಪಟ್ಟ ಅವರು ತನ್ನ ನಡವಳಿಕೆಯಲ್ಲಿ ಬದಲಾವಣೆಗಳನ್ನು ಕಾಣಲಾರಂಭಿಸಿದರು. ಅಂತಿಮವಾಗಿ ಮನೆಯಿಂದ ಹೊರಬಂದು  ಹೊಸಪೇಟೆಗೆ ಹೋದರು, ಅಲ್ಲಿಆಕೆ ಚೌಡಕಿ ಪದ (ಜಾನಪದ ಕಲೆ) ಕಲಿತು 2021 ರಲ್ಲಿ ಪದ್ಮಶ್ರೀ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com