ಕರ್ನಾಟಕ ವಿಧಾನಸಭೆ ಚುನಾವಣೆ: ರಾಜ್ಯದವರಾಗಿದ್ದು ಗುಜರಾತ್‌ನಲ್ಲಿ ತಪ್ಪದೇ ಮತದಾನ ಮಾಡಿದ ಅನುಭವಿ ನೀಡಿದ ಸಲಹೆ

96 ವರ್ಷದ ಅವರು, 17 ಲೋಕಸಭೆ ಚುನಾವಣೆಗಳಲ್ಲಿ ಮತ್ತು 1952ರಿಂದ ಹಲವಾರು ಇತರ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದಾರೆ. ಗುಜರಾತ್ ಸರ್ಕಾರದ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ಆಗಿ ನಿವೃತ್ತರಾದ ಸುಬ್ರಹ್ಮಣ್ಯಂ ಅವರು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕದ ಆರ್‌ಜಿ ಸುಬ್ರಮಣ್ಯಂ ಅವರು ಎಲ್ಲಾ ಮತದಾರರಿಗೆ ಮನವಿ ಮಾಡಿದ್ದು, ನಿಮ್ಮ ಮತವನ್ನು ವ್ಯರ್ಥ ಮಾಡಬೇಡಿ. ಪ್ರತಿಯೊಬ್ಬರೂ ಮತದಾನದ ಮೌಲ್ಯವನ್ನು ತಿಳಿದುಕೊಳ್ಳಬೇಕು ಎಂದಿದ್ದಾರೆ. 96 ವರ್ಷದ ಅವರು, 17 ಲೋಕಸಭೆ ಚುನಾವಣೆಗಳಲ್ಲಿ ಮತ್ತು 1952ರಿಂದ ಹಲವಾರು ಇತರ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದಾರೆ. ಗುಜರಾತ್ ಸರ್ಕಾರದ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ಆಗಿ ನಿವೃತ್ತರಾದ ಸುಬ್ರಹ್ಮಣ್ಯಂ ಅವರು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಸ್ವತಂತ್ರ ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ಅವರು ಎಂದಿಗೂ ಮತದಾನವನ್ನು ತಪ್ಪಿಸಿಲ್ಲ.

ಕರ್ನಾಟಕದ 7 ಲಕ್ಷ ಹೊಸ ಮತದಾರರಿಗೆ ಅವರು ವಿಶೇಷ ಮನವಿಯೊಂದನ್ನು ಮಾಡಿದ್ದು, ತಮ್ಮ ಚುನಾಯಿತ ಪ್ರತಿನಿಧಿಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು. ಹೊಸ ಮತದಾರರು ಮತದಾನ ಮಾಡಲು ಏಪ್ರಿಲ್ 10 ಕೊನೆಯ ದಿನಾಂಕವಾಗಿದ್ದು, ಏಪ್ರಿಲ್ 10ಕ್ಕೆ 18 ವರ್ಷ ತುಂಬಲಿರುವ ಯುವಕರು ಆದಷ್ಟು ಬೇಗ ನೋಂದಣಿ ಮಾಡಿಕೊಳ್ಳುವಂತೆ ಸುಬ್ರಹ್ಮಣ್ಯಂ ಮನವಿ ಮಾಡಿದರು.

ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಪದವಿ ಪಡೆದ ಸುಬ್ರಮಣ್ಯಂ ಅವರು 1951 ರಲ್ಲಿ ಬಾಂಬೆ-ಗುಜರಾತ್ ರಾಜ್ಯದಲ್ಲಿ ನೀರಾವರಿ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡರು. 1952ರ ಮೊದಲ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದರು. 1986 ರಲ್ಲಿ ನಿವೃತ್ತರಾದ ನಂತರ, 1988ರಲ್ಲಿ ಅವರ ಕುಟುಂಬದೊಂದಿಗೆ ಸುಬ್ರಮಣ್ಯಂ ಬೆಂಗಳೂರಿಗೆ ತೆರಳಿದರು. 

'ನಾನು ಗುಜರಾತ್ ರಾಜ್ಯದಲ್ಲಿ 1986 ರವರೆಗೆ 17 ಲೋಕಸಭಾ ಚುನಾವಣೆಗಳು ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದೇನೆ ಮತ್ತು ನಿವೃತ್ತಿಯ ನಂತರ ನಾನು ಕರ್ನಾಟಕಕ್ಕೆ ತೆರಳಿದೆ ಮತ್ತು ಇಲ್ಲಿನ ಪುರಸಭೆ ಮತ್ತು ರಾಜ್ಯ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದೇನೆ' ಎಂದು ಸುಬ್ರಮಣ್ಯಂ ಟಿಎನ್ಐಇಗೆ ತಿಳಿಸಿದರು. ದಶಕಗಳಿಂದ ದೇಶವು ಹಿಡಿದಿರುವ ರಾಜಕೀಯ ಹಾದಿಯನ್ನು ಗುರುತಿಸಿರುವ ಅವರು ಈಗ ಮೇ 10 ರ ಚುನಾವಣೆಯಲ್ಲಿ ಮತ ಚಲಾಯಿಸಲು ಸಜ್ಜಾಗಿದ್ದಾರೆ.

2013 ಮತ್ತು 2018 ರ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಶೇ 55 ಕ್ಕೆ ತಲುಪಿದ ಬೆಂಗಳೂರು ನಗರದಲ್ಲಿ ನಾಗರಿಕರ ನಿರಾಸಕ್ತಿಯ ಬಗ್ಗೆ ಪ್ರತಿಕ್ರಿಯಿಸಿದ ಸುಬ್ರಹ್ಮಣ್ಯಂ, 'ಚುನಾವಣೆಯ ದಿನ ರಜೆ. ಆದರೆ, ಬೆಂಗಳೂರಿನ ಜನರು ಹೊರಗೆ ಬಂದು ಮತ ಚಲಾಯಿಸಲು ಹಿಂಜರಿಯುತ್ತಾರೆ. ಇದು ಬದಲಾಗಬೇಕು. ಪ್ರತಿ ಬೂತ್‌ಗೆ 1,000 ಮತದಾರರಿದ್ದಾರೆ ಮತ್ತು ಹತ್ತಿರದ ಮತಗಟ್ಟೆಯನ್ನು ತಲುಪಲು ಮತ್ತು ಮತ ಚಲಾಯಿಸಲು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈಗ, ಚುನಾವಣಾ ಆಯೋಗವು ಮತದಾನ ಕೇಂದ್ರದಲ್ಲಿ ನೈಜ-ಸಮಯದ ಸರತಿ ಸಾಲುಗಳನ್ನು ಮತ್ತು ಹತ್ತಿರದ ಪಾರ್ಕಿಂಗ್ ಸ್ಥಳಗಳನ್ನು ಪರಿಶೀಲಿಸುವ ಆಯ್ಕೆಯನ್ನು ನೀಡಿದೆ. ಜನರು ಇದನ್ನು ಸದುಪಯೋಗಪಡಿಸಿಕೊಂಡು ಮತ ಚಲಾಯಿಸಬೇಕು ಎಂದರು.

ಸುಬ್ರಹ್ಮಣ್ಯಂ ಅವರು ತಮ್ಮ ಪತ್ನಿ ಆರ್.ಎಸ್.ಲಲಿತಾ, ಪುತ್ರಿಯರಾದ ಡಾ.ಜಯಶ್ರೀ ಮತ್ತು ಡಾ.ಜ್ಯೋತಿ ಮನ್ನಾರಿ ಅವರನ್ನು ಮತ ಚಲಾಯಿಸಲು ಪ್ರೇರೇಪಿಸಿದ್ದಾರೆ ಮತ್ತು ಕುಟುಂಬವು ಮೇ 10ರ ಪ್ರಜಾಸತ್ತಾತ್ಮಕ ಆಚರಣೆಯನ್ನು ಎದುರು ನೋಡುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com