ದ್ರಾಕ್ಷಿ ಸಂಗ್ರಹಿಸಿಡಲು ಕೋಲ್ಡ್ ಸ್ಟೋರೆಜ್ ಕೊರತೆ; ರಾಜ್ಯಕ್ಕೆ ಸಾವಿರಾರು ಕೋಟಿ ರೂ. ವ್ಯಾಪಾರ ನಷ್ಟ: ಜೆಡಿಎಸ್

ದ್ರಾಕ್ಷಿ ಸಂಗ್ರಹಿಸಿಡಲು ಅಗತ್ಯವಾಗಿರುವ ಕೋಲ್ಡ್ ಸ್ಟೋರೆಜ್ ಗಳ ಅಲಭ್ಯತೆಯಿಂದಾಗಿ ನಮ್ಮ ರಾಜ್ಯವು ಸಾವಿರಾರು ಕೋಟಿ ರೂ. ಗಳ ವ್ಯಾಪಾರ-ವಹಿವಾಟು ಕಳೆದುಕೊಳ್ಳುತ್ತಿದೆ. ಇದರಿಂದಾಗಿ ಬೆಳೆಗಾರರು ಅನಿವಾರ್ಯವಾಗಿ ಹಣ್ಣನ್ನು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾರೆ ಎಂದು ಜೆಡಿಎಸ್ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ದ್ರಾಕ್ಷಿ ಸಂಗ್ರಹಿಸಿಡಲು ಅಗತ್ಯವಾಗಿರುವ ಕೋಲ್ಡ್ ಸ್ಟೋರೆಜ್ ಗಳ ಅಲಭ್ಯತೆಯಿಂದಾಗಿ ನಮ್ಮ ರಾಜ್ಯವು ಸಾವಿರಾರು ಕೋಟಿ ರೂ. ಗಳ ವ್ಯಾಪಾರ-ವಹಿವಾಟು ಕಳೆದುಕೊಳ್ಳುತ್ತಿದೆ. ಇದರಿಂದಾಗಿ ಬೆಳೆಗಾರರು ಅನಿವಾರ್ಯವಾಗಿ ಹಣ್ಣನ್ನು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾರೆ ಎಂದು ಜೆಡಿಎಸ್ ಹೇಳಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್,  ರಾಜ್ಯದಲ್ಲಿ ವರ್ಷಕ್ಕೆ ಬೆಳೆಯುವ ದ್ರಾಕ್ಷಿಯಲ್ಲಿ 73%ನಷ್ಟು ವಿಜಯಪುರ ಜಿಲ್ಲೆಯೊಂದರಿಂದಲೇ ಬರುತ್ತಿದೆ. ಕೋಲ್ಡ್ ಸ್ಟೋರೆಜ್ ಗಳಿಲ್ಲದಿರುವುದರಿಂದ ರೈತರು ದ್ರಾಕ್ಷಿಯನ್ನು ಜಿಲ್ಲೆಯಿಂದ ನೆರೆ ರಾಜ್ಯಕ್ಕೆ ಕಳಿಸುತ್ತಿದ್ದಾರೆ ಎಂದು ಪಕ್ಷದ ಶಾಸಕ ದೇವನಾಂದ್ ಚವ್ಹಾಣ್ ಅವರು ಸದನದಲ್ಲಿ ಪ್ರಶ್ನಿಸುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಈ ಕಡೆ ಗಮನಹರಿಸಬೇಕಿದೆ ಎಂದು ಒತ್ತಾಯಿಸಿದೆ. 

ಇಷ್ಟು ದೊಡ್ಡ ಮೊತ್ತದ ವ್ಯಾಪಾರ ನಮ್ಮ ರಾಜ್ಯದಲ್ಲೆ ನಡೆದರೆ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಳ್ಳಬಹುದು. ಬೆಳೆಗಾರರಿಗೆ ಹೆಚ್ಚಿನ‌ ಆದಾಯ ಸಿಗುತ್ತದೆ. ರಾಜ್ಯ ಸರ್ಕಾರದ ಖಜಾನೆಗೆ ತೆರಿಗೆ ಹರಿದು ಬರಲಿದೆ. ಈ ನಿಟ್ಟಿನಲ್ಲಿ‌ ಸರ್ಕಾರ ಇಷ್ಟೊತ್ತಿಗಾಗಲೆ, ಕೋಲ್ಡ್ ಸ್ಟೋರೆಜ್ ಗಳನ್ನು ನಿರ್ಮಿಸಬೇಕಿತ್ತು ಎಂದು ಜೆಡಿಎಸ್ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com