ಕರ್ನಾಟಕ ಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿವೆ ತೃತೀಯಲಿಂಗಿಗಳ ಮಕ್ಕಳಿಗಾಗಿ ಆಶ್ರಯ ಮನೆಗಳು

ಎರಡು ವರ್ಷಗಳ ಹಿಂದೆ ಅಂಗೀಕರಿಸಲ್ಪಟ್ಟ ದೇಶದಲ್ಲಿಯೇ ಮೊದಲು ತೃತೀಯಲಿಂಗಿಗಳ ಮಕ್ಕಳಿಗಾಗಿ ಆಶ್ರಯ ಮನೆಗಳು ಯೋಜನೆಗೆ ಕರ್ನಾಟಕ ಸರ್ಕಾರದಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ. ಈ ಸಬಂಧ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಧಿಕಾರಿಗಳು 2023 ರಲ್ಲಿ ಚಾಲನೆ ಸಿಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ಎರಡು ವರ್ಷಗಳ ಹಿಂದೆ ಅಂಗೀಕರಿಸಲ್ಪಟ್ಟ ದೇಶದಲ್ಲಿಯೇ ಮೊದಲು ತೃತೀಯಲಿಂಗಿಗಳ ಮಕ್ಕಳಿಗಾಗಿ ಆಶ್ರಯ ಮನೆಗಳು ಯೋಜನೆಗೆ ಕರ್ನಾಟಕ ಸರ್ಕಾರದಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ. ಈ ಸಬಂಧ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಧಿಕಾರಿಗಳು 2023 ರಲ್ಲಿ ಚಾಲನೆ ಸಿಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

2020 ರಲ್ಲಿ ತೃತೀಯಲಿಂಗಿಗಳ ಮಕ್ಕಳಿಗಾಗಿ ಆಶ್ರಯ ಮನೆಗಳನ್ನು ಪ್ರಾರಂಭಿಸುವ ರಾಜ್ಯ ಸರ್ಕಾರದ ಯೋಜನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಅನುಮೋದನೆ ನೀಡಿದೆ. ಇಂತಹ ಆಶ್ರಯ ಮನೆಗಳನ್ನು ಪ್ರಾರಂಭಿಸುವ ಉದ್ದೇಶವು ಬೆದರಿಕೆ ಅಥವಾ ಹಿಂಸೆಗೆ ಬಲಿಯಾದ ಮಕ್ಕಳಿಗೆ ಸುರಕ್ಷಿತ ಸ್ಥಳವನ್ನು ಒದಗಿಸುವುದಾಗಿದೆ. ಆರೈಕೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳಿಗೆ ಈ ಆಶ್ರಯ ಮನೆಗಳಲ್ಲಿ ವಸತಿ ಕಲ್ಪಿಸುವುದಾಗಿದೆ.

ಸಂಯೋಜಿತ ಮಕ್ಕಳ ರಕ್ಷಣಾ ಯೋಜನೆಯ ಯೋಜನಾ ಉಸ್ತುವಾರಿ ನಿವೇದಿತಾ ಎಸ್, ತೃತೀಯಲಿಂಗಿ ಮಕ್ಕಳಿಗಾಗಿ ಸರ್ಕಾರ ನಡೆಸುವ ಆಶ್ರಯ ಮನೆಗಳಿಲ್ಲ ಎಂದು ವಿವರಿಸಿದರು. 'ಚಿಕ್ಕ ವಯಸ್ಸಿನಲ್ಲಿ ಅವರಿಗೆ ವಿಶೇಷ ಕಾಳಜಿ ಬೇಕು. ಅವರು ತಮ್ಮ ಗುರುತಿಗಾಗಿ ಹಿಂಸೆಗೆ ಒಳಗಾಗುತ್ತಾರೆ ಮತ್ತು ಕಿರುಕುಳಕ್ಕೆ ಒಳಗಾಗುತ್ತಾರೆ. ಸಾಮಾನ್ಯವಾಗಿ ಅವರು ಸಾಮಾನ್ಯ ಆಶ್ರಯ ಮನೆಗಳಲ್ಲಿ ಇತರ ಮಕ್ಕಳೊಂದಿಗೆ ಅಸುರಕ್ಷಿತ ಜೀವನವನ್ನು ಅನುಭವಿಸುತ್ತಾರೆ. ಅಂತಹ ಮಕ್ಕಳಿಗಾಗಿ ಪ್ರತ್ಯೇಕ ಮನೆಗಳನ್ನು ಸ್ಥಾಪಿಸುವ ಅಗತ್ಯವಿದ್ದು, ಇದುವೇ ಮೊದಲನೆಯದು' ಎಂದು ಅವರು ಹೇಳಿದರು.

ಸದ್ಯಕ್ಕೆ ಬೆಂಗಳೂರಿನಲ್ಲಿ ಎರಡು ಆಶ್ರಯ ಮನೆಗಳನ್ನು ಸ್ಥಾಪಿಸಲಾಗುವುದು. ಕೆಲವು ಆಡಳಿತಾತ್ಮಕ ವಿಳಂಬಗಳಿವೆ ಮತ್ತು ಪ್ರಸಕ್ತ ಹಣಕಾಸು ವರ್ಷ ಮುಗಿಯುವ ಮೊದಲು ಎಲ್ಲಾ ಅನುಮೋದನೆಗಳು ಸಿಕ್ಕರೆ, ಮನೆಗಳು ವರ್ಷದ ನಂತರ ಚಾಲನೆಗೊಳ್ಳುವ ನಿರೀಕ್ಷೆಯಿದೆ ಎಂದು ನಿವೇದಿತಾ ಹೇಳಿದರು.

ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್‌ನ ವಕೀಲರ ನಿರ್ದೇಶಕಿ ಕವಿತಾ ರತ್ನ ಮಾತನಾಡಿ, ತೃತೀಯಲಿಂಗಿಗಳ ಸಮುದಾಯಕ್ಕೆ ಸಂಬಂಧಿಸಿದ ನಿಷೇಧಗಳನ್ನು ಕೊನೆಗೊಳಿಸುವ ಅಗತ್ಯವಿದೆ. ಅವರನ್ನು ಮೊದಲ ಸ್ಥಾನದಲ್ಲಿ ಸಾಮಾಜಿಕವಾಗಿ ಒಪ್ಪಿಕೊಳ್ಳಬೇಕು ಮತ್ತು ಅವರಿಗೆ ಕಾಳಜಿಯನ್ನು ಒದಗಿಸಲು ಸಂಸ್ಥೆಯು ಕೊನೆಯ ಮಾರ್ಗವಾಗಿರಬೇಕು ಎಂದರು.

ಮಕ್ಕಳು ತಮ್ಮ ಕುಟುಂಬದಿಂದ ದೂರವಾದರೆ ಒಂಟಿತನ ಅನುಭವಿಸುತ್ತಾರೆ ಎಂದು ಅವರು ಹೇಳಿದರು. ಸಮಾಜದಲ್ಲಿ ತೃತೀಯಲಿಂಗಿಗಳ ಸಮುದಾಯ ಒಳಗೊಳ್ಳುವ ವಾತಾವರಣವನ್ನು ಸೃಷ್ಟಿಸುವ ಅವಶ್ಯಕತೆಯಿದೆ ಮತ್ತು ಆಶ್ರಯವನ್ನು ಮೀರಿ, ಸಲಹೆ, ಮಾರ್ಗದರ್ಶನ, ವೃತ್ತಿಪರ ತರಬೇತಿ ಮತ್ತು ಶಿಕ್ಷಣವನ್ನು ಸಹ ಒದಗಿಸುವ ಅಗತ್ಯವಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com