ಮೈಸೂರು: ಕೆಆರ್ ಎಸ್ ನ ಹಿನ್ನೀರಿನಲ್ಲಿ ಈಜಲು ಹೋಗಿದ್ದ ಮೂವರು ಪದವಿ ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟಿದ್ದಾರೆ.
ನಗರದ ಸಂತ ಜೋಸೆಫ್ ಕಾಲೇಜಿನಲ್ಲಿ ಬಿಸಿಎ ಎರಡನೇ ವರ್ಷದಲ್ಲಿ ಓದುತ್ತಿದ್ದ ರಾಮಕೃಷ್ಣನಗರದ ವರುಣ್, ಪಡುವಾರಳ್ಳಿಯ ಪ್ರವೀಣ್ ಹಾಗೂ ಬಲ್ಲೇನಹಳ್ಳಿಯ ಭರತ್ ಮೃತಪಟ್ಟ ವಿದ್ಯಾರ್ಥಿಗಳು.
ಮೀನಾಕ್ಷಿಪುರದಲ್ಲಿರುವ ಕೃಷ್ಣರಾಜಸಾಗರ ಹಿನ್ನೀರಿನಲ್ಲಿ ಈಜಾಡಲು ಪ್ರವೀಣ್, ಭರತ್, ವರುಣ್ ಮತ್ತಿತರ ಸ್ನೇಹಿತರೊಂದಿಗೆ ತೆರಳಿದ್ದರು. ಈಜಾಡುವಾಗ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಇಲವಾಲ ಪೊಲೀಸರು ಪರಿಶೀಲನೆ ನಡೆಸಿದರು.
Advertisement