ಒಡಿಶಾ ರೈಲು ದುರಂತ: ಬೆಂಗಳೂರು ರೈಲ್ವೆ ವಿಭಾಗದಿಂದ ಸುರಕ್ಷತೆಗೆ ಆದ್ಯತೆ, ಅಧಿಕಾರಿಗಳಿಂದ ಹೆಚ್ಚುವರಿ ಗಂಟೆಗಳ ಕರ್ತವ್ಯ!

ಒಡಿಶಾದಲ್ಲಿ ಇತ್ತೀಚೆಗೆ ಸಂಭವಿಸಿದ ರೈಲು ಅಪಘಾತದ ನಂತರ ಬೆಂಗಳೂರು ರೈಲ್ವೆ ವಿಭಾಗವು ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಕೆಲಸ ಮಾಡುತ್ತಿದೆ. ವಿಭಾಗದ ಅಧಿಕಾರಿಗಳು ಕಳೆದ ಹದಿನೈದು ದಿನಗಳಿಂದ ತಮ್ಮ ಕರ್ತವ್ಯದ ಅವಧಿ ಮೀರಿ ಕೆಲಸ ಮಾಡುತ್ತಿದ್ದು, ಸುರಕ್ಷತೆಯಲ್ಲಿ ಯಾವುದೇ ರಾಜಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ತ್ರಿವಳಿ ರೈಲು ಅಪಘಾತ ಸಂಭವಿಸಿದ ಸ್ಥಳ
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ತ್ರಿವಳಿ ರೈಲು ಅಪಘಾತ ಸಂಭವಿಸಿದ ಸ್ಥಳ
Updated on

ಬೆಂಗಳೂರು: ಒಡಿಶಾದಲ್ಲಿ ಇತ್ತೀಚೆಗೆ ಸಂಭವಿಸಿದ ರೈಲು ಅಪಘಾತದ ನಂತರ ಬೆಂಗಳೂರು ರೈಲ್ವೆ ವಿಭಾಗವು ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಕೆಲಸ ಮಾಡುತ್ತಿದೆ. ವಿಭಾಗದ ಅಧಿಕಾರಿಗಳು ಕಳೆದ ಹದಿನೈದು ದಿನಗಳಿಂದ ತಮ್ಮ ಕರ್ತವ್ಯದ ಅವಧಿ ಮೀರಿ ಕೆಲಸ ಮಾಡುತ್ತಿದ್ದು, ಸುರಕ್ಷತೆಯಲ್ಲಿ ಯಾವುದೇ ರಾಜಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಒಡಿಶಾ ರೈಲು ದುರಂತದ ನಂತರ ಅಪಘಾತಗಳನ್ನು ತಡೆಗಟ್ಟಲು ರೈಲ್ವೆಯ ರಾಷ್ಟ್ರವ್ಯಾಪಿ ಪ್ರಯತ್ನದ ಭಾಗವಾಗಿದೆ. 

ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಅವರು ಟಿಎನ್ಐಇ ಜೊತೆಗೆ ಮಾತನಾಡಿ, 'ನಾವು ಯಾವಾಗಲೂ ಕಡ್ಡಾಯ ತಪಾಸಣೆಗಳನ್ನು ಮಾಡುತ್ತೇವೆ. ಕಡ್ಡಾಯ ತಪಾಸಣೆಗಳು ಈಗ ವಾರಕ್ಕೆ 3 ಅಥವಾ 4 ಬಾರಿಗೆ ಏರಿಕೆಯಾಗಿದೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದು ಕೇವಲ ತಪಾಸಣೆಗಳ ಸಂಖ್ಯೆಯಲ್ಲ. ಆದರೆ, ಹೆಚ್ಚುವರಿ ಸುರಕ್ಷತಾ ಕ್ರಮವಾಗಿ ಎಲ್ಲಾ ವಲಯಗಳಲ್ಲಿ ಪ್ರಕ್ರಿಯೆಯನ್ನು ತೀವ್ರಗೊಳಿಸಲಾಗಿದೆ' ಎಂದರು.

ಅಧಿಕಾರಿಗಳು ತಾವು ನಡೆಸುತ್ತಿರುವ ತಪಾಸಣೆಗಳ ಕುರಿತು ಸಾಮಾನ್ಯವಾಗಿ ಟಿಪ್ಪಣಿಗಳನ್ನು ಸಲ್ಲಿಸುತ್ತಾರೆ. ಇದು ಅವರು ಮಾಡಿದ ಕೆಲಸದ ಬಗ್ಗೆ ವಲಯ ಮಟ್ಟದಲ್ಲಿ ತೋರಿಸಿರುವ ಹೆಚ್ಚಿನ ಆಸಕ್ತಿಯನ್ನು ಸೂಚಿಸುತ್ತದೆ. 'ಅಧಿಕಾರಿಗಳಿಗೆ ವಲಯ ಮಟ್ಟದಲ್ಲಿ ತಾವು ಮಾಡಿರುವ ಕೆಲಸಗಳ ಬಗ್ಗೆ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ವೈಯಕ್ತಿಕವಾಗಿ ಕೇಳಲಾಗುತ್ತದೆ. ಈಗ ರೈಲ್ವೆಯಲ್ಲಿ ಸುರಕ್ಷತೆಗೆ ಆದ್ಯತೆ ನೀಡಲು ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ' ಎಂದು ಮೂಲಗಳು ತಿಳಿಸಿವೆ.

'ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲು ಅನೇಕ ಅಧಿಕಾರಿಗಳು ಕರ್ತವ್ಯದ ಸಮಯವನ್ನು ಮೀರಿ ತಮ್ಮನ್ನು ತಾವು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕರ್ತವ್ಯದ ಅಜಾಗರೂಕತೆಯನ್ನು ಯಾವಾಗಲೂ ಕಟ್ಟುನಿಟ್ಟಾಗಿ ನೋಡಲಾಗುತ್ತಿತ್ತು ಮತ್ತು ಈಗ ಹೆಚ್ಚು ಕಠಿಣವಾಗಿದೆ' ಎಂದು ಮೂಲವು ಸೇರಿಸಿದೆ. 'ಫೂಟ್ ಪ್ಲೇಟ್' ತಪಾಸಣೆಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಲೋಕೋ ಕ್ಯಾಬಿನ್‌ನಲ್ಲಿ ಪ್ರಯಾಣಿಸುವ ಮೂಲಕ ಹಿರಿಯ ಅಧಿಕಾರಿಗಳು ತಪಾಸಣೆ ನಡೆಸುತ್ತಾರೆ ಮತ್ತು ಲೋಕೋ ಪೈಲಟ್‌ಗಳು ಎಲ್ಲಾ ಸುರಕ್ಷತಾ ಮಾನದಂಡಗಳಿಗೆ ಬದ್ಧರಾಗಿದ್ದಾರೆಯೇ ಎಂದು ಮೇಲ್ವಿಚಾರಣೆ ಮಾಡುತ್ತಾರೆ' ಎಂದು ಅವರು ಹೇಳಿದರು. 

ಇಲ್ಲಿಯವರೆಗಿನ ತಪಾಸಣೆ ವೇಳೆ ಯಾವುದೇ ಲೋಪದೋಷ ಪತ್ತೆಯಾಗಿದೆಯೇ ಎಂಬ ಪ್ರಶ್ನೆಗೆ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ನಕಾರಾತ್ಮಕ ಉತ್ತರ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com