ಬೆಂಗಳೂರು: ರಾಜ್ಯದ ಅನೇಕ ಭಾಗಗಳಲ್ಲಿ ಇನ್ಫ್ಲುಯೆಂಜಾ ಮಾದರಿಯ ಅನೇಕ ಪ್ರಕರಣಗಳು ವರದಿಯಾಗುತ್ತಿದ್ದು, ಹೊಸ ಆತಂಕಕ್ಕೆ ಕಾರಣವಾಗಿದೆ. ದೀರ್ಘಕಾಲದ ಅನಾರೋಗ್ಯ ಮತ್ತು ಬಿಟ್ಟೂಬಿಡದೆ ಕಾಡುವ ಕೆಮ್ಮಿ, ನೆಗಡಿ, ಜ್ವರದಿಂದ ಜನರು ನರಳುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕದ 2 ವರ್ಷಗಳ ಹೋರಾಟದ ಬಳಿಕ ಈಗಷ್ಟೇ ಚೇತರಿಸಿಕೊಂಡಿದ್ದ ಜನರಲ್ಲಿ ಇದೀಗ ಅನಾರೋಗ್ಯದ ಪ್ರಕರಣಗಳಲ್ಲಿನ ಹೆಚ್ಚಳ ಆತಂಕವನ್ನು ಹೆಚ್ಚಿಸಿದೆ.
ರಾಜ್ಯದಲ್ಲಿ ಜ್ವರ ಹಾಗೂ ಫ್ಲೂ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಕೋವಿಡ್ 19 ಸೋಂಕನ್ನೇ ಹೋಲುವ ಲಕ್ಷಣಗಳು ಜನರ ನಿದ್ದೆಗೆಡಿಸಿವೆ. ಇನ್ಫ್ಲೂಯೆಂಜಾ ಎ ಉಪವಿಧದ ಎಚ್3ಎನ್2 ವೈರಸ್ ಈ ಸಮಸ್ಯೆಗೆ ಕಾರಣ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್3ಎನ್2 ಇನ್ಫ್ಲುಯೆಂಜಾ ಹರಡುವುದನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ರಾಜ್ಯ ಆರೋಗ್ಯ ಇಲಾಖೆಯು ಮಾರ್ಗಸೂಚಿಯೊಂದನ್ನು ಹೊರಡಿಸಿದೆ.
Advertisement