ಕಲಬುರಗಿ: ಮಳೆಯಲ್ಲಿ ವಿದ್ಯುತ್ ತಗುಲಿ ಒಂದೇ ಕುಟುಂಬದ ತಾಯಿ, ಇಬ್ಬರು ಮಕ್ಕಳು ಸಾವು

ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಧನಗರಗಲ್ಲಿಯಲ್ಲಿ ತಡರಾತ್ರಿ ಸಂಭವಿಸಿದೆ.
ಝರಣಮ್ಮ-ಮಹೇಶ-ಸುರೇಶ
ಝರಣಮ್ಮ-ಮಹೇಶ-ಸುರೇಶ
Updated on

ಚಿಂಚೋಳಿ: ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಧನಗರಗಲ್ಲಿಯಲ್ಲಿ ತಡರಾತ್ರಿ ಸಂಭವಿಸಿದೆ.

ಮೃತರು 44 ವರ್ಷದ ತಾಯಿ ಝರಣಮ್ಮ ಅಂಬಣ್ಣ ಬಸಗೊಂಡ ಮತ್ತು ಇಬ್ಬರು ಮಕ್ಕಳಾದ 20 ವರ್ಷದ ಮಹೇಶ ಅಂಬಣ್ಣ ಬಸಗೊಂಡ 18 ವರ್ಷದ ಸುರೇಶ ಅಂಬಣ್ಣ ಬಸಗೊಂಡ ಮೃತ ದುರ್ದೈವಿಗಳು. ಘಟನೆಯಲ್ಲಿ ಮೃತ ಝರಣಮ್ಮ ಪತಿ ಅಂಬಣ್ಣಗೆ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.

ಚಿಂಚೋಳಿಯಲ್ಲಿ ನಿನ್ನೆ ರಾತ್ರಿ ಧಾರಾಕಾರ ಮಳೆ ಸುರಿದಿದ್ದು ಗಾಳಿಗೆ ಮನೆಯ ಮುಂದೆ ವಿದ್ಯುತ್ ತಂತಿ ತುಂಡಾಗಿ ನೀರಿನಲ್ಲಿ ಬಿದ್ದಿತ್ತು. ದನದ ಮೇವು ಮಳೆಗೆ ನೆನೆಯದಿರಲೆಂದು ಅದನ್ನು ಮುಚ್ಚಲು ಕಳೆದ ತಡರಾತ್ರಿ ಹೊರಬಂದಿದ್ದಾಗ ಕರೆಂಟ್ ಶಾಕ್ ಹೊಡೆದಿದೆ. 

ಹೊರಗೆ ಹೋದವರು ಇನ್ನು ಬರಲಿಲ್ಲ ಎಂದು ನೋಡಲು ಬಂದಿದ್ದಾಗ ಒಬ್ಬಬ್ಬರೇ ಕರೆಂಟ್ ಶಾಕ್ ಗೆ ಬಲಿಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com