ನಿಧಿ ಆಸೆ ತೋರಿಸಿ ವಂಚನೆ ಆರೋಪ, ಜ್ಯೋತಿಷಿ ಕಿಡ್ನ್ಯಾಪ್: ಗೃಹ ಸಚಿವ ಜಿ ಪರಮೇಶ್ವರ್ ಮಧ್ಯಪ್ರವೇಶದ ಬಳಿಕ ರಕ್ಷಣೆ!

ನಿಧಿ ಆಸೆ ತೋರಿಸಿ 16 ಲಕ್ಷ ಹಣ ಪಡೆದಿದ್ದ ಜ್ಯೋತಿಷಿಯನ್ನು ಕಿಡ್ನಾಪ್​ (Kidnap) ಮಾಡಿದ್ದ ಆರೋಪಿಗಳನ್ನು  ಗೃಹ ಸಚಿವ ಜಿ ಪರಮೇಶ್ವರ್ ಮಧ್ಯಪ್ರವೇಶದ ಬಳಿಕ ಪೊಲೀಸರು ಬಂಧಿಸಿದ್ದಾರೆ.
ನಿಧಿ ಆಸೆ ತೋರಿಸಿ ವಂಚಿಸಿದ ಜ್ಯೋತಿಷಿ ಅಪಹರಣ
ನಿಧಿ ಆಸೆ ತೋರಿಸಿ ವಂಚಿಸಿದ ಜ್ಯೋತಿಷಿ ಅಪಹರಣ
Updated on

ತುಮಕೂರು: ನಿಧಿ ಆಸೆ ತೋರಿಸಿ 16 ಲಕ್ಷ ಹಣ ಪಡೆದಿದ್ದ ಜ್ಯೋತಿಷಿಯನ್ನು ಕಿಡ್ನಾಪ್​ (Kidnap) ಮಾಡಿದ್ದ ಆರೋಪಿಗಳನ್ನು  ಗೃಹ ಸಚಿವ ಜಿ ಪರಮೇಶ್ವರ್ ಮಧ್ಯಪ್ರವೇಶದ ಬಳಿಕ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆ ಪಾವಗಡ ಪೊಲೀಸರು ಕಾರ್ಯಾಚರಣೆ ನಡೆಸಿ ಕಿಡ್ನಾಪ್​ ಟೀಂ ಬಂಧಿಸಿದ್ದಾರೆ. ಬೆಂಗಳೂರಿನ ಕಮಲಾನಗರದ ಶಿವರಾಜ್​(32), ಅನಂತಕೃಷ್ಣ(21), ಆಂಧ್ರ ಮೂಲದ ಕೋತಲಗುಟ್ಟದ ನರೇಶ್(25) ಬಂಧಿತರು. ಮತ್ತೋರ್ವ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳನ್ನು ಅರೆಸ್ಟ್ ಮಾಡಿ ಜ್ಯೋತಿಷಿ ರಾಮಣ್ಣನನ್ನು ರಕ್ಷಿಸಲಾಗಿದೆ.

ಮೂಲಗಳ ಪ್ರಕಾರ ಜ್ಯೋತಿಷಿ ರಾಮಣ್ಣನವರು ನಿಧಿ ನಿಕ್ಷೇಪ ತೋರಿಸುವುದಾಗಿ ನಂಬಿಸಿ 16 ಲಕ್ಷ ರೂ. ಹಣ ಪಡೆದುಕೊಂಡಿದ್ದರು ಎನ್ನಲಾಗಿತ್ತು. ಆದರೆ ನಿಧಿಯೂ ತೋರಿಸದೇ, ಹಣವೂ ವಾಪಸ್ ನೀಡದೇ ಇದ್ದ ಹಿನ್ನೆಲೆ ಹಣ ಕೊಟ್ಟಿದ್ದವರೇ ಜ್ಯೋತಿಶಿ ರಾಮಣ್ಣ ಅವರನ್ನು ಕಿಡ್ನಾಪ್ ಮಾಡಿದ್ದರು. ಬೈಕ್​ನಲ್ಲಿ ಹೊರಟಿದ್ದ ಜ್ಯೋತಿಷಿ ರಾಮಣ್ಣ‌ರನ್ನು ಎರಡು ಕಾರುಗಳಲ್ಲಿ ಚೇಸ್ ಮಾಡಿ ಪಾವಗಡ ಅರಣ್ಯ ಇಲಾಖೆ ಕಚೇರಿ ಎದುರು ಕಿಡ್ನಾಪ್ ಮಾಡಲಾಗಿತ್ತು. ಬಳಿಕ ರಾಮಣ್ಣನ ಪುತ್ರನಿಗೆ ಕರೆ ಮಾಡಿ 16 ಲಕ್ಷ ಕೊಟ್ಟು ನಿಮ್ಮ ತಂದೆಯನ್ನ ಕರೆದುಕೊಂಡು ಹೋಗಿ ಎಂದು ಬೆದರಿಕೆ ಹಾಕಿದ್ದರು. ಪಾವಗಡ ಪಟ್ಟಣದ ಹೊರವಲಯದಲ್ಲಿರುವ ರಾಮಣ್ಣ ಸ್ವಾಮಿ (55) ಅವರನ್ನು ನವೆಂಬರ್ 2 ರಂದು ತಮ್ಮ ಹುಟ್ಟೂರಾದ ರಾಜವಂತಿ ಗ್ರಾಮಕ್ಕೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ಆರೋಪಿಗಳು ಅಪಹರಿಸಿದ್ದರು.

ನಿಮ್ಮ ತಂದೆ 16 ಲಕ್ಷ ಸಾಲ ಪಡೆದಿದ್ದರು, ಅದನ್ನು ನೀಡಿ ತಂದೆ ಬಿಡಿಸಿಕೊಂಡು ಹೋಗಿ ಎಂದಿದ್ದರು. ಆತಂಕಕ್ಕೊಳಗಾದ ಕುಟುಂಬಸ್ಥರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಬೆಂಗಳೂರಿನ ಉಳ್ಳಾಲ ಬಳಿ ರಾಮಣ್ಣನ ರಕ್ಷಣೆ ಮಾಡಿದ್ದಾರೆ. ಹಾಗೂ ಆರೋಪಿಗಳನ್ನು ಬಂಧಿಸಿದ್ದಾರೆ.

ಗೃಹ ಸಚಿವ ಜಿ ಪರಮೇಶ್ವರ್ ಮಧ್ಯ ಪ್ರವೇಶ
ಅಪಹರಣದಿಂದ ಭಯಭೀತರಾದ ರಾಮಣ್ಣನ ಕುಟುಂಬ ಸದಸ್ಯರು ಆಂಧ್ರಪ್ರದೇಶದ ಮಾಜಿ ಸಚಿವ ಎನ್ ರಘುವೀರಾ ರೆಡ್ಡಿ ಅವರನ್ನು ಸಹಾಯಕ್ಕಾಗಿ ಸಂಪರ್ಕಿಸಿದರು, ಅವರು ಡಾ ಜಿ ಪರಮೇಶ್ವರ ಅವರೊಂದಿಗೆ ಮಾತನಾಡಿದ್ದು, ಪರಮೇಶ್ವರ್ ಅವರು ಪೊಲೀಸರಿಗೆ ಕರೆ ಮಾಡಿದ ನಂತರ ಪೊಲೀಸರು ಅಪಹರಣಕಾರರನ್ನು ಹಿಡಿಯಲು ತಂಡವನ್ನು ರಚಿಸಿದರು.

ಹಿರಿಯ ಕಾಂಗ್ರೆಸ್ ನಾಯಕರಾದ ರಘುವೀರಾ ರೆಡ್ಡಿ ಅವರು ಈ ಪ್ರದೇಶದಲ್ಲಿ ಜನಪ್ರಿಯರಾಗಿದ್ದಾರೆ ಮತ್ತು ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪರಮೇಶ್ವರ ಅವರ ಸಹಾಯವನ್ನು ತೆಗೆದುಕೊಳ್ಳುತ್ತಿದ್ದರು. ನವೆಂಬರ್ 3 ರಂದು ಸಂಜೆ, ಪೊಲೀಸರ ತಂಡವು ಅಪಹರಣಕಾರರನ್ನು ಪತ್ತೆಹಚ್ಚಿ ಜ್ಯೋತಿಷಿಯನ್ನು ರಕ್ಷಿಸಿತು. ಆರೋಪಿಗಳಾದ ಕಮಲನಗರದ ಶಿವರಾಜ್ (32), ಬೆಂಗಳೂರಿನ ಚಿಕ್ಕಬಾಣಾವರದ ಅನಂತಕೃಷ್ಣ (21) ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರ ತಾಲೂಕಿನ ಕೊತ್ತಲಗುಡ್ಡದ ನರೇಶ್ (25) ಎಂಬುವರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ.

ಮಾಟಮಂತ್ರಕ್ಕೆ ಹೆಸರಾಗಿದ್ದ ಜ್ಯೋತಿಷಿಯು ಆಂಧ್ರಪ್ರದೇಶದ ಗಡಿಯನ್ನು ಹಂಚಿಕೊಳ್ಳುವ ಪಾವಗಡ ಪ್ರದೇಶದಲ್ಲಿ ನಿಧಿ ಬೇಟೆಗೆ ಕುಖ್ಯಾತಿ ಪಡೆದಿರುವ ನಿಧಿಗೆ ಮಾರ್ಗದರ್ಶನ ನೀಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com