ಹೊಸಪೇಟೆ: ಚರಂಡಿಗೆ ಬಿದ್ದ ಮಗು ಸಾವು, ಪಾಲಿಕೆಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದ ಹೈಕೋರ್ಟ್

ತೆರೆದ ಚರಂಡಿಗೆ ಬಿದ್ದು ಆರು ವರ್ಷದ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರ ಪಾಲಿಕೆಗೆ ಕರ್ನಾಟಕ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ತೆರೆದ ಚರಂಡಿಗೆ ಬಿದ್ದು ಆರು ವರ್ಷದ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರ ಪಾಲಿಕೆಗೆ ಕರ್ನಾಟಕ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ಜುಲೈ 2013 ರಲ್ಲಿ ತೆರೆದ ಚರಂಡಿಯಲ್ಲಿ ಕರಣ್ ಸಿಂಗ್ ಎಸ್ ರಾಜ ಪುರೋಹಿತ್ ಎಂಬುವವರ 6 ವರ್ಷದ ಮಗು ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ್ದು, ಸಂತ್ರಸ್ಥ ಮಗುವಿನ ತಂದೆಗೆ ಪರಿಹಾರ ನೀಡಲು 10 ವರ್ಷ ತೆಗೆದುಕೊಂಡಿದ್ದಕ್ಕಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರ ಪಾಲಿಕೆಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಸಂತ್ರಸ್ತ ಮಗುವಿನ ತಂದೆ ಕರಣ್ ಸಿಂಗ್ ಎಸ್ ರಾಜ ಪುರೋಹಿತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಅಧಿಕಾರಿಗಳು ವಿಪತ್ತು ನಿರ್ವಹಣಾ ಕಾಯ್ದೆಯಡಿ 5 ಲಕ್ಷ ರೂಪಾಯಿ ಪರಿಹಾರ ನೀಡಿದ್ದರು. ಆದಾಗ್ಯೂ, ರಾಜಪುರೋಹಿತ್ ಅವರು ಪರಿಹಾರಕ್ಕಾಗಿ ಕಳೆದ 10 ವರ್ಷಗಳಲ್ಲಿ ಮೂರು ಅರ್ಜಿಗಳೊಂದಿಗೆ ಹೈಕೋರ್ಟ್ ಅನ್ನು ಸಂಪರ್ಕಿಸಬೇಕಾಗಿತ್ತು ಎಂದು ಪರಿಗಣಿಸಿ, ಹೈಕೋರ್ಟ್ ದಂಡವನ್ನು ವಿಧಿಸಿದ್ದು, ಇದು ಅಧಿಕಾರಿಗಳ ನಿರಾಸಕ್ತಿ ಎಂದು ಕಿಡಿಕಾರಿದೆ.

ಪರಿಹಾರ ವಿತರಣೆಯಲ್ಲಿನ ವಿಳಂಬ, ಅಧಿಕಾರಿಗಳ ನಿರ್ಲಕ್ಷ್ಯ, ಪರಿಹಾರಕ್ಕಾಗಿ ಅರ್ಜಿದಾರರ ಅಲೆದಾಟ, ಪರಿಹಾರ ಮೊತ್ತದ ಬಡ್ಡಿ ಮತ್ತು ವ್ಯಾಜ್ಯದ ವೆಚ್ಚವನ್ನು ಪಾವತಿಸಲು ಸೂಕ್ತ ನಿರ್ದೇಶನಗಳನ್ನು ನೀಡುವುದಕ್ಕಾಗಿ ಅರ್ಜಿಯನ್ನು ಪರಿಗಣಿಸಲಾಗಿದೆ. ಅರ್ಜಿದಾರರು ಒಂದು-ಎರಡು ಬಾರಿ ಅಲ್ಲ. ಮೂರು ಬಾರಿ ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ತಮ್ಮ ತೀರ್ಪಿನಲ್ಲಿ ಹೇಳಿದರು.

ರಾಜಪುರೋಹಿತ್ ಅವರು ತಮ್ಮ ಮಗುವಿನ ಸಾವಿಗೆ ಕಾರಣವಾದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪರಿಹಾರವನ್ನು ಕೋರಿದಾಗ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂಬ ಅಂಶವನ್ನು ಹೈಕೋರ್ಟ್ ಗಮನಿಸಿದೆ. ಅರ್ಜಿದಾರರ ಮಗ ದಿನಾಂಕ 15-07-2013 ರಂದು ಮೃತಪಟ್ಟಿರುವುದು ದಾಖಲೆಯಾಗಿದೆ. ಅರ್ಜಿದಾರರ ವಿರುದ್ಧ ಐಪಿಸಿಯ ಸೆಕ್ಷನ್ 176 ರ ಅಡಿಯಲ್ಲಿ ಉದ್ದೇಶಪೂರ್ವಕ ಅಪರಾಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೈಕೋರ್ಟ್ ಗಮನಿಸಿದೆ. ಅದನ್ನು ಮಾಡಲು ಸಾಧ್ಯವಿಲ್ಲ.. ಅದನ್ನು ರದ್ದುಗೊಳಿಸಲಾಗುವುದು ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಮಗುವಿನ ಸಾವಿಗೆ ಕಾರಣವಾದ ತೆರೆದ ಚರಂಡಿಗೆ ಅಧಿಕಾರಿಗಳನ್ನು ದೂಷಿಸಿದ ಹೈಕೋರ್ಟ್, ನಾಗರಿಕರ ಹಿತಾಸಕ್ತಿ ಪುರಸಭೆಯ ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಈ ಪ್ರಕರಣದಲ್ಲಿ ಅವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೇಳಿದರು. "ಇದು ಕೇವಲ ಒಂದು ಮಗುವಿನ ವಿಚಾರವಲ್ಲ, ಇದು ಒಂದು ಜೀವವೂ ಆಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮೂಲ್ಯವಾದ ಜೀವವು ನಷ್ಟವಾಗಿದೆ. ಇದು 1ನೇ ಪ್ರತಿವಾದಿಯ (ನಗರ ಪುರಸಭೆಯ) ನಿರ್ಲಕ್ಷ್ಯ ಮತ್ತು ತಪ್ಪಿತಸ್ಥ ನಿರ್ಲಕ್ಷ್ಯವಾಗಿದೆ" ಎಂದು ಅದು ಹೇಳಿದೆ. 1 ಲಕ್ಷ ದಂಡದ ಹೊರತಾಗಿ, ಬಾಕಿ ಪರಿಹಾರದ ಮೇಲೆ ಶೇಕಡಾ 6ರಷ್ಟು ಬಡ್ಡಿಯನ್ನು ಪಾವತಿಸಲು ಹೈಕೋರ್ಟ್ ಆದೇಶಿಸಿದೆ.

ಆರು ವಾರಗಳಲ್ಲಿ ಪರಿಹಾರ ಮೊತ್ತ ಅರ್ಜಿದಾರರನ್ನು ತಲುಪದಿದ್ದರೆ, ಅದನ್ನು ಪಾವತಿಸುವವರೆಗೆ ಮತ್ತು ವೆಚ್ಚದವರೆಗೆ ಪಾವತಿಸಬೇಕಾದ ದಿನಾಂಕದಿಂದ ಶೇಕಡಾ 12 ರಷ್ಟು ಬಡ್ಡಿಗೆ ಅವನು ಅರ್ಹನಾಗುತ್ತಾನೆ. ಅರ್ಜಿದಾರರಿಗೆ ಪರಿಹಾರ ತಲುಪುವವರೆಗೆ ಒಂದು ಲಕ್ಷ ರೂ.ಗಳನ್ನು ತಿಂಗಳಿಗೆ 50,000 ರೂ.ಗಳಷ್ಟು ಹೆಚ್ಚಿಸಲಾಗುವುದು ಎಂದೂ ಕೋರ್ಟ್ ಎಚ್ಚರಿಸಿದೆ. ಅಲ್ಲದೆ ಪರಿಹಾರ ವಿತರಣೆ ವಿಳಂಬಕ್ಕೆ ಕಾರಣರಾದ ವ್ಯಕ್ತಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬಹುದು ಮತ್ತು ಅವರಿಂದ ದಂಡದ ಮೊತ್ತವನ್ನು ವಸೂಲಿ ಮಾಡಬಹುದು ಎಂದು ಹೈಕೋರ್ಟ್ ಹೇಳಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com