ಬೆಂಗಳೂರು: ಅಕ್ಟೋಬರ್ 23ರಂದು ಆಯುಧಪೂಜೆ ಮತ್ತು 24 ರಂದು ವಿಜಯದಶಮಿ ಅಂಗವಾಗಿ ರಾಜ್ಯದಲ್ಲಿ ಹಣ್ಣುಗಳು, ಹೂವುಗಳು ಮತ್ತು ತರಕಾರಿಗಳ ಬೇಡಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ. ಇದರ ಪರಿಣಾಮವಾಗಿ ಹಬ್ಬಕ್ಕೂ ಮುನ್ನವೇ ಎಂದಿನಂತೆ ಬೆಲೆ ಏರಿಕೆಯಾಗಿದೆ. ಕೆಲವು ಹಣ್ಣುಗಳು ಮತ್ತು ಹೂವುಗಳ ಬೆಲೆಗಳು ಕಳೆದ ವಾರದಲ್ಲಿಯೇ ಎರಡು ಅಥವಾ ಮೂರು ಪಟ್ಟು ಹೆಚ್ಚಾಗಿದೆ. ಇದರಿಂದಾಗಿ ನಾಗರಿಕರು ಬೆಲೆ ಏರಿಕೆಯ ಭಾರವನ್ನು ಹೊರಬೇಕಾಗಿದೆ.
ಕರ್ನಾಟಕ ಸಣ್ಣ ಹೂ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಗಿರೀಶ್ ಮುಚ್ಚಾಲ್ ಮಾತನಾಡಿ, ‘ಸೇವಂತಿಗೆ, ಮಾರಿಗೋಲ್ಡ್, ಕ್ಯೂಬನ್ ಗುಲಾಬಿ ಹೂವುಗಳಿಗೆ ಬೇಡಿಕೆ ಹೆಚ್ಚಿದೆ. ಕ್ರೈಸಾಂಥೆಮಮ್ ಮತ್ತು ಮಾರಿಗೋಲ್ಡ್ ಹೂವುಗಳ ಬೆಲೆ ದ್ವಿಗುಣಗೊಂಡಿದೆ. ಆದರೆ, ಕ್ಯೂಬ್ ಗುಲಾಬಿಗಳ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಇದು ಎಲ್ಲಾ ಹಬ್ಬದ ಋತುಗಳಲ್ಲಿ ನಾವು ಗಮನಿಸುವ ನಿಯಮಿತ ಪ್ರವೃತ್ತಿಯಾಗಿದೆ' ಎಂದು ಹೇಳಿದರು.
ಹಬ್ಬದ ಸೀಸನ್ ಮಾರಾಟಗಾರರಿಗೆ ಹೆಚ್ಚಿನ ವ್ಯಾಪಾರವನ್ನು ತಂದರೂ, ಜನರು ಹೆಚ್ಚಿನ ಬೆಲೆಗೆ ಹಬ್ಬದ ಅಗತ್ಯ ವಸ್ತುಗಳನ್ನು ಖರೀದಿಸಲು ಕಾರಣವಾಗುತ್ತದೆ.
ಮಲ್ಲೇಶ್ವರಂ ನಿವಾಸಿ ಉಮೇಶ್ ರಾಥೋಡ್ ಮಾತನಾಡಿ, 'ಬೆಲೆ ಏರಿಕೆಯಾಗಿದ್ದರೂ, ನಾವು ಅಗತ್ಯ ವಸ್ತುಗಳನ್ನು ಅವರು ಸೂಚಿಸಿದ ಬೆಲೆಗೆ ಖರೀದಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಪ್ರತಿ ಹಬ್ಬದ ಸಮಯದಲ್ಲಿ ಬೆಲೆ ಏರಿಕೆಯ ಈ ಪ್ರವೃತ್ತಿ ಕಂಡುಬರುತ್ತದೆ' ಎಂದರು.
ಮತ್ತೋರ್ವ ಗ್ರಾಹಕ ಪ್ರಿಯಾ ಚೆಟ್ಟಿ ರಾಜಗೋಪಾಲ್ ಮಾತನಾಡಿ, ಪ್ರತಿ ಹಬ್ಬದ ಸಮಯದಲ್ಲಿ ಹೂವು ಮತ್ತು ಹಣ್ಣುಗಳ ಬೆಲೆಗಳು ಗಗನಕ್ಕೇರಿರುತ್ತದೆ. ಇದು ನಮಗೆ ಆಶ್ಚರ್ಯವಾಗುವುದಿಲ್ಲ. ಇದು ಸಾಮಾನ್ಯವಾಗಿದೆ. ಹೂವುಗಳು ಮತ್ತು ಹಣ್ಣುಗಳ ಜೊತೆಗೆ, ತರಕಾರಿಗಳ ಬೆಲೆಯಲ್ಲಿಯೂ ಗಮನಾರ್ಹ ಏರಿಕೆ ಕಂಡುಬಂದಿದೆ ಎನ್ನುತ್ತಾರೆ.
ಹಾಪ್ಕಾಮ್ಸ್ನ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಮಿರ್ಜಿ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಸೇಬು, ದಾಳಿಂಬೆ, ಪಪ್ಪಾಯಿ, ಪೇರಲ, ಬೂದಿ ಸೋರೆಕಾಯಿಗಳಿಗೆ ಬೇಡಿಕೆ ಹೆಚ್ಚಿದ್ದು, ಬೆಲೆ ಏರಿಕೆಯಾಗಿದೆ ಎಂದರು.
ಆದರೆ, ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಿದ್ದರೂ, ಅದರ ಬೆಲೆ ಕಡಿಮೆಯಾಗಿದೆ. ಸೌತೆಕಾಯಿ ಮತ್ತು ಸೀಮೆ ಬದನೆಕಾಯಿಯಂತ ತರಕಾರಿಗಳು ಕ್ರಮವಾಗಿ ಕನಿಷ್ಠ ಬೆಲೆಗೆ ಇಳಿದಿವೆ.
Advertisement