ಕೋಲಾರ: ಐದು ವರ್ಷದ ಬಾಲಕನ ಕಿಡ್ನಾಪ್; 2 ಗಂಟೆಯಲ್ಲಿ ಅಪಹರಣಕಾರರ ಹೆಡೆಮುರಿ ಕಟ್ಟಿದ ಪೊಲೀಸರು!

ಕೋಲಾರದಲ್ಲಿ ಐದು ವರ್ಷದ ಬಾಲಕನನ್ನು ಅಪಹರಣ ಮಾಡಿದ ಪ್ರಕರಣ ಸುಖಾಂತ್ಯವಾಗಿದೆ. ಆರೋಪಿಗಳನ್ನು ಕೇವಲ 2 ಗಂಟೆಗಳಲ್ಲಿ ಬಂಧಿಸಿ, ಪ್ರಕರಣವನ್ನು ಭೇದಿಸಿದ ಪೊಲೀಸರ ಕಾರ್ಯಾಚರಣೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಕಿಡ್ನಾಪ್ ಆಗಿದ್ದ ಬಾಲಕನೊಂದಿಗೆ ಕೋಲಾರ ಎಸ್ ಪಿ ನಾರಾಯಣ್
ಕಿಡ್ನಾಪ್ ಆಗಿದ್ದ ಬಾಲಕನೊಂದಿಗೆ ಕೋಲಾರ ಎಸ್ ಪಿ ನಾರಾಯಣ್
Updated on

ಕೋಲಾರ: ಕೋಲಾರದಲ್ಲಿ ಐದು ವರ್ಷದ ಬಾಲಕನನ್ನು ಅಪಹರಣ ಮಾಡಿದ ಪ್ರಕರಣ ಸುಖಾಂತ್ಯವಾಗಿದೆ. ಆರೋಪಿಗಳನ್ನು ಕೇವಲ 2 ಗಂಟೆಗಳಲ್ಲಿ ಬಂಧಿಸಿ, ಪ್ರಕರಣವನ್ನು ಭೇದಿಸಿದ ಪೊಲೀಸರ ಕಾರ್ಯಾಚರಣೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಅವರ ಉಸ್ತುವಾರಿಯಲ್ಲಿ ಕೋಲಾರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ ಬಾಲಕನನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ. ಆರೋಪಿಗಳು, ಸುಲಿಗೆಗಾಗಿ ಬಾಲಕನನ್ನು ಅಪಹರಿಸಿದರು, ಆದರೆ ಪೊಲೀಸರು ಜಿಲ್ಲೆಯ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಿದ್ದರಿಂದ ಅವರ ಪ್ರಯತ್ನಗಳು ಯಶಸ್ವಿಯಾಗಲಿಲ್ಲ.

ಅರಳಹಳ್ಳಿ ನಿವಾಸಿ ಲೋಕೇಶ್, ಜಮೀನು ಮಾಲೀಕ ಮತ್ತು ಇಟ್ಟಿಗೆ ಕಾರ್ಖಾನೆಯನ್ನು ಹೊಂದಿದ್ದಾರೆ. ಅದೇ ಗ್ರಾಮದ ನಿವಾಸಿ ಶ್ರೀಕಾಂತ್ ಎಂಬಾತ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಲೋಕೇಶ್ ಆರ್ಥಿಕವಾಗಿ ಸದೃಢವಾಗಿದ್ದನ್ನು ಗಮನಿಸಿದ್ದ ಎಂದು ಕೋಲಾರದ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ತಿಳಿಸಿದ್ದಾರೆ.

ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದ ಶ್ರೀಕಾಂತ್ ಅದನ್ನು ಮರುಪಾವತಿಸಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟದಲ್ಲಿದ್ದ. ನಂತರ ಕೋಲಾರದ ಸರ್.ಎಂ.ವಿಶ್ವೇಶ್ವರಯ್ಯ ಶಾಲೆಯಲ್ಲಿ ಯುಕೆಜಿ ಓದುತ್ತಿರುವ ಲೋಕೇಶ್ ಅವರ ಪುತ್ರ ಯಾಸ್ಮಿಕ್ ಗೌಡ ನನ್ನು ಅಪಹರಿಸಲು ನಿರ್ಧರಿಸಿದ, ಅದಕ್ಕಾಗಿ ತನ್ನ ಸ್ನೇಹಿತ ಬೇತಮಂಗಳ ನಿವಾಸಿ ವೆಂಕಟರಾಜು ಎಂಬಾತನೊಂದಿಗೆ ಸೇರಿ ಅಪಹರಿಸಲು ನಿರ್ಧರಿಸಿದ್ದ.

ಬುಧವಾರ ಶ್ರೀಕಾಂತ್ ಮತ್ತು ವೆಂಕಟರಾಜು ಇಬ್ಬರೂ ಅಪ್ರಾಪ್ತ ಬಾಲಕ ಯಾಸ್ಮಿಕಾ ಗೌಡ ಅವರ ಶಾಲಾ ಸಮಯ, ಬೋರ್ಡಿಂಗ್ ಮತ್ತು ಬೋರ್ಡಿಂಗ್ ಆಫ್ ಸ್ಕೂಲ್ ವ್ಯಾನ್ ಸಮಯವನ್ನು ತಿಳಿದುಕೊಳ್ಳಲು ಬಾಲಕನನ್ನು ಹಿಂಬಾಲಿಸಿದರು.

ಗುರುವಾರ ತಮ್ಮ ಪ್ಲಾನ್  ಕಾರ್ಯಗತಗೊಳಿಸಲು ನಿರ್ಧರಿಸಿದರು. ಅದರಂತೆ ಶಾಲೆಯಿಂದ ಹಿಂಬಾಲಿಸಿದ ಅವರು ಅರಳಹಳ್ಳಿಯ ಅವರ ಮನೆ ಬಳಿ ಶಾಲಾ ಬಸ್‌ನಿಂದ ಕೆಳಗಿಳಿದಾಗ, ಸಂಜೆ 4:30 ರ ಸುಮಾರಿಗೆ ಶ್ರೀಕಾಂತ್ ಮತ್ತು ವೆಂಕಟರಾಜು ಬಾಲಕನನ್ನು ತಮ್ಮ ದ್ವಿಚಕ್ರ ವಾಹನದಲ್ಲಿ ಅಪಹರಿಸಿದ್ದಾರೆ.

ಬಾಲಕ ಅಳುತ್ತಾ ವಾಹನದಿಂದ ಜಿಗಿಯಲು ಯತ್ನಿಸಿದಾಗ ಅಕ್ಕಪಕ್ಕದವರು ಇದನ್ನು ಗಮನಿಸಿ ಪೋಷಕರಿಗೆ ತಿಳಿಸಿ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಗ್ರಾಮಾಂತರ ನಿರೀಕ್ಷಕ ಲೋಕೇಶ್ ನೇತೃತ್ವದಲ್ಲಿ ಮೂರು  ರಚಿಸಿದ್ದಾರೆ. ಇಬ್ಬರ ಮೊಬೈಲ್‌ಗಳು ಇರುವ ಸ್ಥಳವನ್ನು ಪತ್ತೆ ಹಚ್ಚಲು ತಾಂತ್ರಿಕ ತಂಡದ ಸಹಾಯ ಪಡೆದಿರುವುದಾಗಿ ಹಿರಿಯ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ತಂಡ ಜಂಟಿಯಾಗಿ ಕೆಲಸ ಮಾಡಿ ಸೋಮಯಾಜಲಪಲ್ಲಿ ಬಳಿ ಶ್ರೀಕಾಂತ್ ಮತ್ತು ವೆಂಕಟರಾಜು ಅವರನ್ನು ತಡೆದು ಸಂಜೆ 6:45 ರ ಸುಮಾರಿಗೆ ಯಾಸ್ಮಿಕಾ ಗೌಡ ಅವರನ್ನು ರಕ್ಷಿಸಿದರು. ಮತ್ತು ಸುರಕ್ಷಿತವಾಗಿ ಆತನ ಪೋಷಕರಿಗೆ ಒಪ್ಪಿಸಿದ್ದಾರೆ.

ಸದ್ಯ ಮಿಂಚಿನ ಕಾರ್ಯಾಚರಣೆ ನಡೆಸಿದ ಕೋಲಾರ ಪೊಲೀಸರಿಗೆ ಯಾಸ್ಮಿಕಾ ಗೌಡ ಕುಟುಂಬಸ್ಥರು ಹಾಗೂ ಕೋಲಾರದ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಇನ್ನು ಪೊಲೀಸ್​ ಸಿಬ್ಬಂದಿಯ ಕಾರ್ಯವೈಕರಿಯನ್ನು ಕೋಲಾರ ಎಸ್ಪಿ ನಾರಾಯಣ್​ ಕೂಡಾ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com