ಚಂದ್ರಯಾನ-3 ಯಶಸ್ವಿ ನಂತರ ನಟ ಪ್ರಕಾಶ್ ರಾಜ್  ಹೇಳಿದ್ದು ಹೀಗೆ...

ಇತ್ತೀಚಿಗೆ ಚಂದ್ರಯಾನ-3 ಕುರಿತು ವಿವಾದಿತ ಟ್ವೀಟ್ ನಿಂದ ಭಾರಿ ಟೀಕೆ ಹಾಗೂ ಟ್ರೋಲ್ ಗೆ ಗುರಿಯಾಗಿದ್ದ ನಟ ಪ್ರಕಾಶ್ ರಾಜ್, ಇದೀಗ ಇಸ್ರೋ ಸಾಧನೆಗೆ ಬೆರಗಾಗಿದ್ದಾರೆ.
ಪ್ರಕಾಶ್ ರಾಜ್
ಪ್ರಕಾಶ್ ರಾಜ್
Updated on

ಬೆಂಗಳೂರು: ಇತ್ತೀಚಿಗೆ ಚಂದ್ರಯಾನ-3 ಕುರಿತು ವಿವಾದಿತ ಟ್ವೀಟ್ ನಿಂದ ಭಾರಿ ಟೀಕೆ ಹಾಗೂ ಟ್ರೋಲ್ ಗೆ ಗುರಿಯಾಗಿದ್ದ ನಟ ಪ್ರಕಾಶ್ ರಾಜ್, ಇದೀಗ ಇಸ್ರೋ ಸಾಧನೆಗೆ ಬೆರಗಾಗಿದ್ದಾರೆ.

ಚಂದ್ರಯಾನ-3 ಯಶಸ್ವಿ ಬೆನ್ನಲ್ಲೇ, ದೇಶ, ವಿದೇಶಾದ್ಯಂತ ಇಸ್ರೋ ಕಾರ್ಯಾಚರಣೆಗೆ ಪ್ರಶಂಸೆ, ಅಭಿನಂದನೆಗಳು ವ್ಯಕ್ತವಾಗುತ್ತಿರುವಂತೆಯೇ, ಪ್ರಕಾಶ್ ರಾಜ್ ಕೂಡಾ ಇಸ್ರೋಗೆ ಧನ್ಯವಾದ ಸಲ್ಲಿಸಿದ್ದಾರೆ.

ಈ ಕುರಿತು ಅವರು ಟ್ವೀಟ್ ಮಾಡಿದ್ದು, ಭಾರತದ ಮನುಕುಲದ ಹೆಮ್ಮೆಯ ಕ್ಷಣಗಳಿವು ಮತ್ತು ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ  ಧನ್ಯವಾದಗಳು, ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು, ಸಂಭ್ರಮಿಸಲು,ಇದು ದಾರಿಯಾಗಲಿ ಎಂದಿದ್ದಾರೆ.

ಚಂದ್ರಯಾನ-3 ಕುರಿತು ಅವರು ಇತ್ತೀಚಿಗೆ ಮಾಡಿದ್ದ ಅಪಹಾಸ್ಯ ರೀತಿಯ ಚಾಯ್ ವಾಲಾ ಟ್ವೀಟ್ ಗೆ ದೇಶಾದ್ಯಂತ ತೀವ್ರ ಟೀಕೆ ವ್ಯಕ್ತವಾಗಿತ್ತು. ವ್ಯಕ್ತಿಯೊಬ್ಬ ಚಹಾ ಮಗುಚುವ ವ್ಯಂಗ್ಯ ಚಿತ್ರ ಫೋಸ್ಟ್ ಮಾಡಿದ ಪ್ರಕಾಶ್ ರಾಜ್, ತಾಜಾ ಸುದ್ದಿ, ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ ಎಂದು ಕ್ಯಾಪ್ಶನ್ ಬರೆದಿದ್ದರು.

ನಂತರ ಸ್ಪಷ್ಟನೆ ನೀಡಿದ್ದ ಅವರು‘ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುವುದು. ನಾನು ನಮ್ಮ ಕೇರಳದ ಚಾಯ್​ವಾಲಾರನ್ನು ಸಂಭ್ರಮಿಸುವ ಆರ್ಮ್​ಸ್ಟ್ರಾಂಗ್ ಕಾಲದ ಜೋಕ್ ಹೇಳಿದ್ದೆ. ಟ್ರೋಲಿಗರಿಗೆ ಕಂಡ ಚಾಯ್​ವಾಲಾ ಯಾರು?’ ಎಂದು ಪ್ರಶ್ನಿಸಿರುವ ಪ್ರಕಾಶ್ ರಾಜ್​, ‘ನಿಮಗೆ ಜೋಕ್ ಅರ್ಥ ಆಗಲಿಲ್ಲವೆಂದರೆ ಜೋಕು ನಿಮ್ಮ ಬಗ್ಗೆಯೇ.. ಬೆಳೆಯಿರಿ’ ಎಂದು ಟೀಕಿಸಿದವರಿಗೆ ಹೇಳಿದ್ದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com