ಗದಗ: ಆಂಜನೇಯ ದೇವಾಲಯದ ಅರ್ಚಕರಾಗಿ ಕೆಲಸ ನಿರ್ವಹಿಸುತ್ತಿರುವ ಮುಸ್ಲಿಂ ವ್ಯಕ್ತಿ; ಕೋಮು ಸೌಹಾರ್ದತೆಗೆ ಉದಾಹರಣೆ!
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಕೋರಿಕೊಪ್ಪ ಹನುಮಾನ ದೇವಸ್ಥಾನದಲ್ಲಿ ಕಳೆದ 150 ವರ್ಷಗಳಿಂದ ಮುಸ್ಲಿಮರು ಅರ್ಚಕ ವೃತ್ತಿ ನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಹಿಂದೂ ಸಹೋದರರು ಅವರಿಗೆ ವಿಶೇಷ ಹಕ್ಕು ನೀಡಿದ್ದಾರೆ.
Published: 30th August 2023 10:08 AM | Last Updated: 31st August 2023 09:01 PM | A+A A-

ಕೋರಿಕೊಪ್ಪ ಆಂಜನೇಯ ದೇವಾಲಯ
ಗದಗ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಕೋರಿಕೊಪ್ಪ ಹನುಮಾನ ದೇವಸ್ಥಾನದಲ್ಲಿ ಕಳೆದ 150 ವರ್ಷಗಳಿಂದ ಮುಸ್ಲಿಮರು ಅರ್ಚಕ ವೃತ್ತಿ ನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಹಿಂದೂ ಸಹೋದರರು ಅವರಿಗೆ ವಿಶೇಷ ಹಕ್ಕು ನೀಡಿದ್ದಾರೆ.
ಈ ದೇವಾಲಯದ ವಿಶಿಷ್ಟತೆಯೆಂದರೆ ಮುಸ್ಲಿಮರು ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿ ಹನುಮಂತನ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಾರೆ. ಕೋರಿಕೊಪ್ಪ ಗ್ರಾಮದ ಹಿರಿಯರು ಸಹೋದರತೆ ಮತ್ತು ಕೋಮು ಸೌಹಾರ್ದತೆಯನ್ನು ಉತ್ತೇಜಿಸಲು ದೇವಸ್ಥಾನದಲ್ಲಿ ಪೂಜೆ ಮತ್ತು ಇತರ ಆಚರಣೆಗಳನ್ನು ನಡೆಸಲು ಮುಸ್ಲಿಮರಿಗೆ ಅವಕಾಶ ಮಾಡಿಕೊಟ್ಟರು. ಕೋರಿಕೊಪ್ಪದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಯಾವಾಗಲೂ ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿದ್ದಾರೆ, ಇದು ಎಂದಿಗೂ ಯಾವುದೇ ಕೋಮು ಘರ್ಷಣೆಗೆ ನಡೆದಿಲ್ಲ ಎಂದು ಗ್ರಾಮದ ಜನರು ಹೇಳುತ್ತಾರೆ.
ಈ ಹಿಂದೆ ಕೋನೇರಿಕೊಪ್ಪ, ಕೊಂಡಿಕೊಪ್ಪ, ಕೋರಿಕೊಪ್ಪ ಗ್ರಾಮಗಳ ಪ್ರವೇಶ ದ್ವಾರದಲ್ಲಿ ಚಿಕ್ಕ ಹನುಮಾನ ದೇವಸ್ಥಾನವಿತ್ತು. ಕೋನೇರಿಕೊಪ್ಪ ಮತ್ತು ಕೊಂಡಿಕೊಪ್ಪದಲ್ಲಿ ಈ ಹಿಂದೆ ಪ್ಲೇಗ್ ಮತ್ತು ಕಾಲರಾ ಹರಡಿದ್ದರಿಂದ ಈ ಗ್ರಾಮಗಳ ಜನರು ಬೇರೆಡೆ ವಲಸೆ ಹೋಗಿದ್ದರು.
ಇದನ್ನೂ ಓದಿ: ಬುರ್ಖಾ ಮತ್ತು ಮುಸ್ಲಿಂ ಟೋಪಿ ಧರಿಸಿ 'ಜೈ ಶ್ರೀ ರಾಮ್' ಘೋಷಣೆ ಕೂಗಿದ್ದ ಇಬ್ಬರಿಗೆ ಜೀವ ಬೆದರಿಕೆ: ವಿಡಿಯೋ
ಈ ಗ್ರಾಮಗಳಿಂದ ಜನರು ವಲಸೆ ಹೋದಾಗ, ಹತ್ತಿರದ ಪುಟಗೋನ್ ಬದ್ನಿ ಗ್ರಾಮದ ಕೆಲವು ಮುಸ್ಲಿಂ ಕುಟುಂಬಗಳು ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದನ್ನು ಮುಂದುವರೆಸಿದರು. ನಂತರ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗಿದ್ದು, ಕೋರಿಕೊಪ್ಪ ಗ್ರಾಮದ ಹಿರಿಯರು ಮುಸಲ್ಮಾನರಿಗೆ ಪೂಜೆ ಹಾಗೂ ಇತರೆ ವಿಧಿವಿಧಾನಗಳನ್ನು ನಡೆಸುವ ಜವಾಬ್ದಾರಿಯನ್ನು ವಹಿಸಿದ್ದರು. ಇದು ಇಂದಿಗೂ ಮುಂದುವರೆದಿದೆ.
ಶ್ರಾವಣದ ಸಂದರ್ಭದಲ್ಲಿ ಜಾತಿ, ಮತ ಭೇದವಿಲ್ಲದೆ ಗ್ರಾಮಸ್ಥರೆಲ್ಲರೂ ಸೇರಿ ದೇವಸ್ಥಾನದಲ್ಲಿ ಹೋಮ, ಹವನ, ಭಜನೆ ಮಾಡುತ್ತಾರೆ. ದೇವಾಲಯದ ಆವರಣದಲ್ಲಿ ಹಳೆಯ ಮಣ್ಣಿನ ಮಡಕೆಗಳು, ಕಲ್ಲು ಗ್ರೈಂಡರ್ಗಳು ಮತ್ತು ಹಗೇವುಗಳು (ಆಹಾರ ಧಾನ್ಯಗಳು ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಲು ಸಾಂಪ್ರದಾಯಿಕ ಪಾತ್ರೆಗಳು) ಕಾಣಬಹುದು. ಕೋರಿಕೊಪ್ಪದ ಗತವೈಭವವನ್ನು ತಿಳಿದುಕೊಳ್ಳಲು ಉತ್ಸುಕರಾಗಿದ್ದ ಗ್ರಾಮದ ಜನರು ಅಲ್ಲಿ ಅಧ್ಯಯನ ನಡೆಸಲು ಕೆಲವು ಇತಿಹಾಸಕಾರರನ್ನು ಆಹ್ವಾನಿಸಿದ್ದಾರೆ. ಅಧ್ಯಯನವು ಸೆಪ್ಟೆಂಬರ್ನಲ್ಲಿ ಪ್ರಾರಂಭವಾಗಬಹುದು.
'ಮುಸ್ಲಿಂ ಕುಟುಂಬಗಳಿಂದ ವಿಶೇಷ ಪೂಜೆ'
ಮುಸ್ಲಿಂರು ಹನುಮಂತ ದೇವರಿಗೆ ಪೂಜೆ ಸಲ್ಲಿಸುವುದರಿಂದ ಈ ದೇವಾಲಯ ವಿಶಿಷ್ಟವಾಗಿದೆ. ಹಿಂದೂಗಳು ಮತ್ತು ಜೈನರು ದೇವಾಲಯಕ್ಕೆ ಭೇಟಿ ನೀಡಿದರೂ, ಪುಟ್ಗಾಂವ್ ಬದ್ನಿ ಗ್ರಾಮದ ಮುಸ್ಲಿಂ ಕುಟುಂಬಗಳು ಪೂಜೆ ಮತ್ತು ಆರತಿಯನ್ನು ಮಾಡುತ್ತಾರೆ ಎಂದು ಲಕ್ಷ್ಮೇಶ್ವರ ತಾಲೂಕಿನ ಮೊಹಮ್ಮದ್ ಲಕ್ಷ್ಮೇಶ್ವರ್ ಮತ್ತು ಜಿನೇಶ್ ಜೈನ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ನಗರದ ಯುವಕರೊಂದಿಗೆ ಸುಗಮ ಸಂವಹನಕ್ಕಾಗಿ ಇಸ್ಲಾಂ ವಿದ್ವಾಂಸರಿಗೆ ಆರು ತಿಂಗಳ ಸ್ಪೋಕನ್ ಇಂಗ್ಲಿಷ್ ಕೋರ್ಸ್
ಲಕ್ಷ್ಮೇಶ್ವರದ ಪಿ.ಕೆ.ಪೂಜಾರ್ ಮಾತನಾಡಿ, ''ಅದರಕಟ್ಟಿ-ಕೊಂಡಿಕೊಪ್ಪ ರಸ್ತೆಯಲ್ಲಿರುವ ಕೋರಿಕೊಪ್ಪ ಗ್ರಾಮ ಕೋಮು ಸೌಹಾರ್ದಕ್ಕೆ ಹೆಸರಾಗಿದೆ. ಶನಿವಾರ ಮತ್ತು ಮಂಗಳವಾರದಂದು ಸುತ್ತಮುತ್ತಲಿನ ಗ್ರಾಮಗಳು ಮತ್ತು ಇತರೆಡೆಗಳಿಂದ ನೂರಾರು ಜನರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎಂದು ಹೇಳಿದ್ದಾರೆ.