ಹಿಂದುತ್ವ, ಮನುವಾದ ಕುರಿತ ಸಿದ್ದು ಹೇಳಿಕೆ ತಪ್ಪು: ನಟ ಚೇತನ್ ಕುಮಾರ್ ಅಹಿಂಸಾ

ಸಂವಿಧಾನಕ್ಕೆ ವಿರುದ್ಧವಾದುದ್ದೇ ಹಿಂದುತ್ವ, ಅದೇ ಮನುವಾದ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ತಪ್ಪು ಎಂದು ನಟ ಚೇತನ್ ಕುಮಾರ್ ಅಹಿಂಸಾ ಹೇಳಿದ್ದಾರೆ.
ಸಿದ್ದರಾಮಯ್ಯ, ಚೇತನ್ ಕುಮಾರ್ ಅಹಿಂಸಾ ಸಾಂದರ್ಭಿಕ ಫೋಟೋ
ಸಿದ್ದರಾಮಯ್ಯ, ಚೇತನ್ ಕುಮಾರ್ ಅಹಿಂಸಾ ಸಾಂದರ್ಭಿಕ ಫೋಟೋ
Updated on

ಬೆಂಗಳೂರು: ಸಂವಿಧಾನಕ್ಕೆ ವಿರುದ್ಧವಾದುದ್ದೇ ಹಿಂದುತ್ವ, ಅದೇ ಮನುವಾದ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ತಪ್ಪು ಎಂದು ನಟ ಚೇತನ್ ಕುಮಾರ್ ಅಹಿಂಸಾ ಹೇಳಿದ್ದಾರೆ.

ಈ ಕುರಿತು ಟ್ವೀಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಚೇತನ್, ಹಿಂದುತ್ವ ಮನುವಾದ ಅಲ್ಲ, ಮನುವಾದವು ಮನುಸ್ಮೃತಿ (185 ಬಿಸಿಇ) ಮೂಲಕ ಸಾಂಸ್ಥಿಕಗೊಳಿಸಿದ ವರ್ಣ, ಲಿಂಗ, ಆಧಾರಿತ ಅಸಮಾನತೆಯಾಗಿದೆ ಎಂದಿದ್ದಾರೆ.

ಇಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮನುವಾದಿ (ಬ್ರಾಹ್ಮಣ್ಯ) ಪಕ್ಷಗಳಾಗಿವೆ, ಬಿಜೆಪಿ (ಹಿಂದುತ್ವ) ಮತ್ತು ಕಾಂಗ್ರೆಸ್, ಜೆಡಿಎಸ್ ಇತರೆ ಎಲ್ಲಾ ಪಕ್ಷಗಳು (ಮನುವಾದ) ಸಮಾನತೆಗೆ ವಿರುದ್ಧವಾಗಿವೆ ಆದ್ದರಿಂದ ಎಲ್ಲವೂ ಅಸಂವಿಧಾನಿಕ ಎಂದು ಚೇತನ್ ಆಕ್ರೋಶ ಹೊರಹಾಕಿದ್ದಾರೆ.

ಕಲಬುರಗಿ ನಗರದಲ್ಲಿ ಆಯೋಜಿಸಲಾಗಿದ್ದ ಮಾಜಿ ಶಾಸಕ ಬಿ.ಆರ್.ಪಾಟೀಲ್ ಜೀವನ ಕಥೆಯ "ನಿರ್ಭಯ" ಸಮಾಜವಾದದೆಡೆಗೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ್ದ ಸಿದ್ದರಾಮಯ್ಯ, ಮನುವಾದ ಮತ್ತು ಪುರೋಹಿತಷಾಹಿ ಇವೆರಡೂ ಸಮಾಜಕ್ಕೆ ಶಾಪವಾಗಿದೆ. ನಾನು ಮನುವಾದ, ಹಿಂದುತ್ವದ ವಿರೋಧಿ, ಆದರೆ ಹಿಂದೂ ವಿರೋಧಿಯಲ್ಲ ಎಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com