ಹಾಸನ: ಹಾಸನದಲ್ಲಿ ದುಷ್ಕರ್ಮಿಗಳ ತಂಡವೊಂದು ಆಭರಣ ವ್ಯಾಪಾರಿಯನ್ನು ದರೋಡೆ ಮಾಡಿದ್ದು, ಸುಮಾರು 25 ಲಕ್ಷ ರೂ ಮೌಲ್ಯದ ಬೆಲೆ ಬಾಳುವ ಹರಳುಗಳನ್ನು ಕಳ್ಳತನ ಮಾಡಿದೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಬಳಿಯ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ಬೆಲೆಬಾಳುವ ಹರಳುಗಳನ್ನು ಖರೀದಿಸುವ ನೆಪದಲ್ಲಿ 25 ಲಕ್ಷ ರೂಪಾಯಿ ಮೌಲ್ಯದ ಅಕ್ವಾಮರೀನ್ ರತ್ನಗಳನ್ನು ದೋಚಿ ಪರಾರಿಯಾಗಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಫೀನಿಕ್ಸ್ ಟ್ರೇಡ್ ಪ್ರೈವೇಟ್ ಲಿಮಿಟೆಡ್ನ ಕಾನೂನು ಸಲಹೆಗಾರ ಹಾಗೂ ಮಂಡ್ಯ ಮೂಲದ ಪ್ರದೀಪ್ಕುಮಾರ್ ಮನೋಹರ್ಗೆ ಆಮಿಷವೊಡ್ಡಿದ್ದ ಐವರ ತಂಡ ಅರಸೀಕೆರೆ ತಾಲೂಕಿನ ಗಂಡಸಿ ಬಳಿಯ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅವರ ಕಣ್ಣಿಗೆ ಮೆಣಸಿನಕಾಯಿಪುಡಿ ಎರಚಿ ಅವರ ಬಳಿ ಇದ್ದ ಬೆಲೆಬಾಳುವ ಆಭರಣ ಹರಳುಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ವನುಜಾ, ವಿಜಯಲಕ್ಷ್ಮಿ ಮತ್ತು ರಕ್ಷಿತ್ ಅವರು ಅಮೂಲ್ಯ ಕಲ್ಲುಗಳನ್ನು ಖರೀದಿಸಲು ಪ್ರದೀಪ್ ಕುಮಾರ್ ಮೂಲಕ ಮನೋಹರ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 31 ರಂದು ಮನೋಹರ್ ಅವರ ನಿರ್ದೇಶನದಂತೆ ಅವರು ಹಾಸನಕ್ಕೆ ಬಂದರು. ಮನೋಹರ್ ಕೂಡ ಬೆಂಗಳೂರಿನ ಅಮೂಲ್ಯ ಕಲ್ಲು ವ್ಯಾಪಾರಿ ಆದರ್ಶ್ ಅವರಿಂದ ಕಲ್ಲುಗಳನ್ನು ಸಂಗ್ರಹಿಸಿ ಹಾಸನಕ್ಕೆ ಬಂದರು. ವ್ಯವಹಾರ ಸಂಬಂಧ ಮನೋಹರ್, ಪ್ರದೀಪ್ ಹೋಟೆಲ್ನಲ್ಲಿ ವನುಜಾ ಮತ್ತು ಇತರ ಇಬ್ಬರೊಂದಿಗೆ ಚರ್ಚಿಸಿದ್ದಾರೆ.
ಗಂಡಸಿ ಬಳಿಯ ತೋಟದ ಮನೆಗೆ ಬರಲು ಮನೋಹರ್ಗೆ ವನುಜಾ ಕೇಳಿದಳು, ಅಲ್ಲಿ ತನ್ನ ಸ್ನೇಹಿತೆ ನಗದನ್ನು ಹಸ್ತಾಂತರಿಸುತ್ತಾಳೆ ಎಂದು ಹೇಳಿದ್ದಳು. ಮನೋಹರ್ ಮತ್ತು ಪ್ರದೀಪ್ ಕಲ್ಲುಗಳನ್ನು ಹೊತ್ತೊಯ್ಯುತ್ತಿದ್ದ ವಾಹನದಲ್ಲಿ ವನುಜಾ ಮತ್ತು ಇತರ ಇಬ್ಬರು ಪ್ರಯಾಣಿಸುತ್ತಿದ್ದರು. ಅರಣ್ಯ ಪ್ರದೇಶದಲ್ಲಿ ವಾಹನವನ್ನು ತಡೆದು ನಿಲ್ಲಿಸಿದ ದುಷ್ಕರ್ಮಿಗಳು ಹಲ್ಲೆ ನಡೆಸಿದ ಬಳಿಕ ಕಲ್ಲುಗಳಿದ್ದ ಚೀಲವನ್ನು ಕಸಿದುಕೊಂಡು ಮನೋಹರ್ ಮತ್ತು ಪ್ರದೀಪ್ ಕುಮಾರ್ ಮೇಲೆ ಖಾರದ ಪುಡಿ ಎರಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕೊಡಗು: ಇಬ್ಬರನ್ನು ಬಲಿಪಡೆದಿದ್ದ ಹುಲಿ ಸೆರೆ
ಗಾಯಾಳು ಮನೋಹರ್ ಮತ್ತು ಪ್ರದೀಪ್ ಗಂಡಸಿ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಪೊಲೀಸರು ಇನ್ನೂ ಆರೋಪಿಗಳನ್ನು ಪತ್ತೆ ಹಚ್ಚಿಲ್ಲ. ತನಿಖೆ ಮುಂದುವರೆದಿದೆ.
Advertisement