ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅರಣ್ಯ ವೀಕ್ಷಕನ ಮೇಲೆ ಆನೆ ದಾಳಿ, ಸಾವು

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯ ವೀಕ್ಷಕರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಮೃತರನ್ನು ಮಹದೇವಸ್ವಾಮಿ (35) ಎಂದು ಗುರುತಿಸಲಾಗಿದ್ದು, ಇತರ ಮೂವರೊಂದಿಗೆ ಕೆಲವು ಕೃಷಿ ಹೊಲಗಳಿಂದ ಕಾಡಾನೆಗಳ ಹಿಂಡನ್ನು ಓಡಿಸುತ್ತಿದ್ದಾಗ ಆನೆಯೊಂದು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ಮಾಡಿದೆ.
ಕಾಡಾನೆ (ಸಂಗ್ರಹ ಚಿತ್ರ)
ಕಾಡಾನೆ (ಸಂಗ್ರಹ ಚಿತ್ರ)
Updated on

ಬೆಂಗಳೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯ ವೀಕ್ಷಕರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.

ಮೃತರನ್ನು ಮಹದೇವಸ್ವಾಮಿ (35) ಎಂದು ಗುರುತಿಸಲಾಗಿದ್ದು, ಇತರ ಮೂವರೊಂದಿಗೆ ಕೆಲವು ಕೃಷಿ ಹೊಲಗಳಿಂದ ಕಾಡಾನೆಗಳ ಹಿಂಡನ್ನು ಓಡಿಸುತ್ತಿದ್ದಾಗ ಆನೆಯೊಂದು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ಮಾಡಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಹಿಂದೆ ಓಡಿ ಬರುವಷ್ಟರಲ್ಲಿ ಆನೆ ಮಹದೇವಸ್ವಾಮಿ ಹಾಗೂ ರಾಜೇಶ್ ಮೇಲೆ ದಾಳಿ ಮಾಡಿದೆ. ಮಹದೇವಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡಿದ್ದ ರಾಜೇಶ್ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಬಳಿಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ. ಹರ್ಷಕುಮಾರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಆನೆಗಳು ಅರಣ್ಯದ ಪರಿಧಿಯಲ್ಲಿದ್ದು, ಅರಣ್ಯ ವೀಕ್ಷಕರ ಮೇಲೆ ಅನಿರೀಕ್ಷಿತವಾಗಿ ದಾಳಿ ಮಾಡಿದೆ ಎಂದಿದ್ದಾರೆ.

ಶನಿವಾರ ತಡರಾತ್ರಿ ಆನೆ ಹಿಂಡು ಕೃಷಿ ಕ್ಷೇತ್ರಕ್ಕೆ ಬಂದಿದೆ. ಈ ವೇಳೆ ಅರಣ್ಯ ಇಲಾಖೆಯು ಎಚ್ಚೆತ್ತುಕೊಂಡಿದ್ದು, ಅರಣ್ಯ ವೀಕ್ಷಕರ ತಂಡವು ಆನೆಗಳನ್ನು ಹೊಲದಿಂದ ಓಡಿಸಲು ಸ್ಥಳಕ್ಕೆ ಬಂದಿತು.

ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಜಮೀನಿನಿಂದ ಓಡಿಸುವ ಕಾರ್ಯದಲ್ಲಿ ತೊಡಗಿದ್ದಾಗ ಒಂದು ಆನೆಯು ಅರಣ್ಯ ಸಿಬ್ಬಂದಿ ಮೇಲೆ ದಾಳಿ ಮಾಡಿ ಮಹದೇವಸ್ವಾಮಿಯ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com