social_icon

ದೈವ ನರ್ತಕರಿಗೆ ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ; ಎರಡು ತಿಂಗಳು ಕಳೆದರೂ ಬಿಡುಗಡೆಯಾಗದ ಯಾವುದೇ ಮಾರ್ಗಸೂಚಿ

ಕನ್ನಡದ ಬ್ಲಾಕ್‌ಬಸ್ಟರ್ ಸಿನಿಮಾ ‘ಕಾಂತಾರ’ ದೇಶದಾದ್ಯಂತ ‘ದೈವರಾಧನೆ’ಯನ್ನು ಜನಪ್ರಿಯಗೊಳಿಸಿದ ನಂತರ, ರಾಜ್ಯ ಸರ್ಕಾರವು ಅಕ್ಟೋಬರ್‌ನಲ್ಲಿ ಮೇಲ್ಪಟ್ಟ ದೈವ ನರ್ತಕರಿಗೆ ಪ್ರತಿ ತಿಂಗಳು ₹ 2,000 ಮಾಸಾಶನ ನೀಡಲು ರಾಜ್ಯ ಸರ್ಕಾರ ಘೋಷಿಸಿತು. ಅದಾಗಿ ಎರಡು ತಿಂಗಳು ಕಳೆದಿದ್ದರೂ, ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳು ಇನ್ನೂ ಹೊರಬಂದಿಲ್ಲ. 

Published: 25th January 2023 08:44 AM  |   Last Updated: 25th January 2023 06:22 PM   |  A+A-


Dayananda G Kathalsar performing as a Daiva Nartaka. (Photo | Express)

ದಯಾನಂದ ಜಿ ಕಥಲ್ಸರ್ ದೈವ ನರ್ತಕವಾಗಿ ಪ್ರದರ್ಶನ ನೀಡುತ್ತಿದ್ದಾರೆ. (ಫೋಟೋ | ಎಕ್ಸ್‌ಪ್ರೆಸ್)

Posted By : Ramyashree GN
Source : Express News Service

ಮಂಗಳೂರು: ಕನ್ನಡದ ಬ್ಲಾಕ್‌ಬಸ್ಟರ್ ಸಿನಿಮಾ ‘ಕಾಂತಾರ’ ದೇಶದಾದ್ಯಂತ ‘ದೈವರಾಧನೆ’ಯನ್ನು ಜನಪ್ರಿಯಗೊಳಿಸಿದ ನಂತರ, ರಾಜ್ಯ ಸರ್ಕಾರವು ಅಕ್ಟೋಬರ್‌ನಲ್ಲಿ ಮೇಲ್ಪಟ್ಟ ದೈವ ನರ್ತಕರಿಗೆ ಪ್ರತಿ ತಿಂಗಳು ₹ 2,000 ಮಾಸಾಶನ ನೀಡಲು ರಾಜ್ಯ ಸರ್ಕಾರ ಘೋಷಿಸಿತು. ಅದಾಗಿ ಎರಡು ತಿಂಗಳು ಕಳೆದಿದ್ದರೂ, ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳು ಇನ್ನೂ ಹೊರಬಂದಿಲ್ಲ. ಸರಿಯಾದ ಮಾಹಿತಿ ಲಭ್ಯವಾಗದ ಕಾರಣ ಫಲಾನುಭವಿಗಳ ವಿವರ ಸಂಗ್ರಹಿಸುವುದು ಕಷ್ಟಕರವಾಗಿದೆ ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು.

ಸದ್ಯ ದೈವ ನರ್ತಕರನ್ನು ಜಾನಪದ ಕಲಾವಿದರ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ, ಅವರ ಬಗ್ಗೆ ಪ್ರತ್ಯೇಕ ಸಮೀಕ್ಷೆ ನಡೆದಿಲ್ಲ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರ್ಕಾರ ಸರಳಗೊಳಿಸಬೇಕಾಗಿದ್ದು, ಈ ಕಾರಣದಿಂದಾಗಿ ದಕ್ಷಿಣ ಕನ್ನಡದ ಇಬ್ಬರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ ಎಂದು ದೈವ ನರ್ತಕರೊಬ್ಬರು ಹೇಳಿದರು. 

ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ದೈವಾರಾಧನೆ ನಿರೂಪಕ ದಯಾನಂದ ಜಿ ಕತಲಸರ್ ಮಾತನಾಡಿ, ಕರಾವಳಿಯಲ್ಲಿ 60 ವರ್ಷ ದಾಟಿದ ಕೇವಲ 1000 ಮಂದಿ ಮಾತ್ರ ದೈವಾರಾಧನೆ ನಡೆಸುತ್ತಿದ್ದು, ಗೌರವಧನವು ನಿರ್ಗತಿಕರಿಗೆ ಪ್ರಯೋಜನವಾಗಬೇಕಾದರೆ ವಯೋಮಿತಿಯನ್ನು ಕನಿಷ್ಠ 55ಕ್ಕೆ ಇಳಿಸಬೇಕು ಎಂದು ಹೇಳಿದರು.

ಈಗಾಗಲೇ ಅನೇಕ ಕಲಾವಿದರು ವೃದ್ಧಾಪ್ಯ ವೇತನ (ಸಂಧ್ಯಾ ಸುರಕ್ಷಾ) ಪಡೆಯುತ್ತಿದ್ದು, ಈ ಹೊಸ ಮಾಸಿಕ ಗೌರವಧನಕ್ಕೆ ಅರ್ಜಿ ಸಲ್ಲಿಸುವಂತಿಲ್ಲ. ಅವರು ಇದನ್ನು ಪಡೆಯಬೇಕಾದರೆ, ತಮ್ಮ ಸದ್ಯದ ಪಿಂಚಣಿಯನ್ನು (ರೂ. 1,000) ರದ್ದುಗೊಳಿಸಬೇಕಾಗುತ್ತದೆ. ಆದರೆ, ಹಳೆಯ ಪಿಂಚಣಿ ರದ್ದುಪಡಿಸಿ ಹೊಸ ಯೋಜನೆಗೆ ಅರ್ಜಿ ಸಲ್ಲಿಸುವ ಈ ಪ್ರಕ್ರಿಯೆ ಜಟಿಲವಾಗಿದೆ.

ಇದನ್ನೂ ಓದಿ: ಕರಾವಳಿ ಭಾಗದ ದೈವ ನರ್ತಕರಿಗೆ ಸರ್ಕಾರದಿಂದ 2 ಸಾವಿರ ರೂ. ಮಾಸಾಶನ: ಸಚಿವ ಸುನಿಲ್ ಕುಮಾರ್

ಎಲ್ಲಾ ಅರ್ಜಿದಾರರಿಗೆ ಮಾಸಿಕ ಗೌರವಧನ ನೀಡಲು ಸಾಕಷ್ಟು ಬಜೆಟ್ ಕೊರತೆ ಇದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಹೆಚ್ಚಿನ ಜನರು ಅನಕ್ಷರಸ್ಥರು ಮತ್ತು ಬಡವರಾಗಿದ್ದು, ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಸುಲಭವಲ್ಲ. ಆದ್ದರಿಂದ, ಮಾಸಿಕ ಗೌರವಧನಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪಂಚಾಯತ್ ಅಥವಾ ಪಿಡಿಒ ಮಟ್ಟದಲ್ಲಿ ಮಾಡಬೇಕು. ಸಮಸ್ಯೆಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ಅವರ ಗಮನಕ್ಕೆ ತಂದಿದ್ದು, ಅವರು ಪರಿಹರಿಸುವ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.

ಈಮಧ್ಯೆ, ದೈವ ನರ್ತಕರ ಬಗ್ಗೆ ನಿರ್ದಿಷ್ಟ ಮಾಹಿತಿ ಲಭ್ಯವಿದೆ ಮತ್ತು ಅವರು ಇನ್ನೂ ಸರ್ಕಾರದಿಂದ ಮಾರ್ಗಸೂಚಿಗಳಿಗಾಗಿ ಕಾಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.


Stay up to date on all the latest ರಾಜ್ಯ news
Poll
Railways Minister Ashwini Vaishnaw waves at a goods train as train services resume

ಒಡಿಶಾದಲ್ಲಿ ಭೀಕರ ರೈಲು ಅಪಘಾತದ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವರು ರಾಜೀನಾಮೆ ನೀಡಬೇಕೇ?


Result
ಹೌದು
ಬೇಡ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp