ಮೆಟ್ರೋ 3ನೇ ಹಂತದ ಯೋಜನೆ: ಭೂಸ್ವಾಧೀನ ಪ್ರಕ್ರಿಯೆಗೆ BMRCL ಚಾಲನೆ

ಮೆಟ್ರೋ 3ನೇ ಹಂತದ ಯೋಜನೆಗೆ ಕೇಂದ್ರದ ಅನುಮತಿಗಾಗಿ ಕಾಯುತ್ತಿರುವಾಗಲೇ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಯೋಜನೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದೆ. 106 ಎಕರೆ ವ್ಯಾಪ್ತಿಯಲ್ಲಿರುವ ಒಟ್ಟು 713 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಗುರುತಿಸಲಾಗಿದ್ದು, ಆ ಎಲ್ಲ ಆಸ್ತಿಗಳನ್ನು ಯೋಜನೆಗೆ ಬಿಟ್ಟುಕೊಡಲು ಮಾಲೀಕರು ಸಿದ್ಧರಿಲ್ಲ.
ಭಾನುವಾರ ಬೆಂಗಳೂರಿನ ಕೆಐಎ ರಸ್ತೆಯಲ್ಲಿ ನಮ್ಮ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದೆ.
ಭಾನುವಾರ ಬೆಂಗಳೂರಿನ ಕೆಐಎ ರಸ್ತೆಯಲ್ಲಿ ನಮ್ಮ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದೆ.
Updated on

ಬೆಂಗಳೂರು: ಮೆಟ್ರೋ 3ನೇ ಹಂತದ ಯೋಜನೆಗೆ ಕೇಂದ್ರದ ಅನುಮತಿಗಾಗಿ ಕಾಯುತ್ತಿರುವಾಗಲೇ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಯೋಜನೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದೆ. 106 ಎಕರೆ ವ್ಯಾಪ್ತಿಯಲ್ಲಿರುವ ಒಟ್ಟು 713 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಗುರುತಿಸಲಾಗಿದ್ದು, ಆ ಎಲ್ಲ ಆಸ್ತಿಗಳನ್ನು ಯೋಜನೆಗೆ ಬಿಟ್ಟುಕೊಡಲು ಮಾಲೀಕರು ಸಿದ್ಧರಿಲ್ಲ.

ಮೆಟ್ರೋ ಮೂರನೇ ಹಂತದ ಎರಡು ಎಲಿವೇಟೆಡ್ ಕಾರಿಡಾರ್‌ಗಳಲ್ಲಿ 21 ನಿಲ್ದಾಣಗಳನ್ನು ಒಳಗೊಂಡಿದೆ. ಒಂದು ಜೆಪಿ ನಗರ IVನೇ ಹಂತದಿಂದ ಹೊರವರ್ತುಲ ರಸ್ತೆಯ ಮೂಲಕ ಕೆಂಪಾಪುರದವರೆಗೆ 32.5 ಕಿಮೀ ಮತ್ತು ಇನ್ನೊಂದು ಮಾಗಡಿ ರಸ್ತೆಯ ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿಮೀ ಆಗಿದೆ.

ರಾಜ್ಯ ಸಚಿವ ಸಂಪುಟವು ಈ ಯೋಜನೆಗೆ ಅನುಮತಿ ನೀಡಿದೆ. ಆದರೆ, ತಿಂಗಳಿನಿಂದ ಕೇಂದ್ರದ ಅನುಮತಿಗಾಗಿ ಕಾಯಲಾಗುತ್ತಿದೆ. ಇದೀಗ ಲೋಕಸಭೆ ಚುನಾವಣೆ ಘೋಷಣೆಯಾಗಿದ್ದು, ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಅನುಮತಿ ದೊರಕಬಹುದೆಂದು ನಿರೀಕ್ಷಿಸಲಾಗಿದೆ.

ಭಾನುವಾರ ಬೆಂಗಳೂರಿನ ಕೆಐಎ ರಸ್ತೆಯಲ್ಲಿ ನಮ್ಮ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದೆ.
ನಮ್ಮ ಮೆಟ್ರೋ ಬಗ್ಗೆ ನೀವೆಷ್ಟು ಸಂತೃಪ್ತ? ಏಪ್ರಿಲ್ 8 ರಿಂದ ಪ್ರಯಾಣಿಕರ ತೃಪ್ತಿ ಸಮೀಕ್ಷೆಯಲ್ಲಿ ನೀವೂ ಭಾಗವಹಿಸಿ

'ನಾವು ಈಗ ಮೊದಲ ಎಲಿವೇಟೆಡ್ ಕಾರಿಡಾರ್‌ನಲ್ಲಿ ಮಾತ್ರ ಆಸ್ತಿಗಳನ್ನು ಗುರುತಿಸಲು ಪ್ರಾರಂಭಿಸಿದ್ದೇವೆ. ಅವುಗಳ ಸ್ವಾಧೀನ ಪ್ರಾರಂಭಿಸಬೇಕಿದೆ. ನಮಗೆ ಇಲ್ಲಿ 106 ಎಕರೆ ಬೇಕಾಗಿದ್ದು, ಅದರಲ್ಲಿ 75 ಎಕರೆ ಡಿಪೋಗೆ ಮಾತ್ರ ಬೇಕಾಗುತ್ತದೆ. ಇದು ಎರಡೂ ಕಾರಿಡಾರ್‌ಗಳಿಗೆ ಸಾಮಾನ್ಯವಾಗಿರುತ್ತದೆ' ಎಂದು ಬಿಎಂಆರ್‌ಸಿಎಲ್‌ನ ಭೂ ಸ್ವಾಧೀನ ಕೋಶದ ಪ್ರಧಾನ ವ್ಯವಸ್ಥಾಪಕ ಎಂಎಸ್ ಚನ್ನಪ್ಪ ಗೌಡರ್ ಹೇಳಿದರು.

ಭೂ ಸ್ವಾಧೀನಕ್ಕೆ BMRCL ನೀಡುತ್ತಿರುವ ಅತ್ಯುತ್ತಮ ಪರಿಹಾರದಿಂದಾಗಿ, ಇದು ಮಾರುಕಟ್ಟೆ ಮೌಲ್ಯದ 200% ರಷ್ಟು ಹೆಚ್ಚಿದೆ. ಇದರಿಂದಾಗಿ ಸಾರ್ವಜನಿಕರು ತಮ್ಮ ಆಸ್ತಿಯನ್ನು ಮೆಟ್ರೋ ಯೋಜನೆಗಳಿಗೆ ನೀಡಲು ಉತ್ಸಾಹದಿಂದ ಮುಂದೆ ಬರುತ್ತಾರೆ. ಆದರೆ, ಸದ್ಯ ಮೂರು ಕುಟುಂಬಗಳು ತಮ್ಮ ಆಸ್ತಿ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿವೆ ಎಂದು ಅವರು ಹೇಳಿದರು.

'ಈ ಮೂರು ಆಸ್ತಿಗಳ ವಿಷಯದಲ್ಲಿ, ಈ ಯೋಜನೆಗಾಗಿ ಪ್ರತಿಯೊಂದು ಆಸ್ತಿಯ ಒಂದು ಭಾಗವನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲು ಮೆಟ್ರೋ ಮುಂದಾಗಿದೆ. ಇದರಿಂದಾಗಿ ತಮ್ಮ ಉಳಿದ ಭಾಗದ ಭೂಮಿ ಮೌಲ್ಯ ಕಡಿಮೆಯಾಗುತ್ತದೆ ಎಂದು ಅವರು ಭಾವಿಸಿದ್ದಾರೆ. ನಾವು ಸಂಪೂರ್ಣ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ಅಥವಾ ಸ್ವಾಧೀನದಿಂದ ಸಂಪೂರ್ಣವಾಗಿ ಕೈಬಿಡಬೇಕೆಂದು ಅವರು ಬಯಸುತ್ತಾರೆ. ವಿನಾಯಕ ಲೇಔಟ್ ಮೆಟ್ರೊ ನಿಲ್ದಾಣಕ್ಕೆ ಎರಡು ಆಸ್ತಿಗಳು ಬೇಕಾಗಿವೆ' ಎಂದು ಗೌಡರ್ ಹೇಳಿದರು.

ಭಾನುವಾರ ಬೆಂಗಳೂರಿನ ಕೆಐಎ ರಸ್ತೆಯಲ್ಲಿ ನಮ್ಮ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದೆ.
ಭುವನೇಶ್ವರಿ ಪ್ರತಿಮೆ ಸ್ಥಾಪನೆ, ಔಟರ್ ರಿಂಗ್ ರೋಡ್ ಒಳಗೊಂಡ ಮೆಟ್ರೋ 3ನೇ ಹಂತಕ್ಕೆ ಸಚಿವ ಸಂಪುಟ ಅಸ್ತು

ಈ ಮೂರು ಆಸ್ತಿಗಳು ಒಟ್ಟು 165.65 ಚ.ಮೀ. ಇದ್ದು, 78.18 ಚ.ಮೀ, 40.14 ಚದರ ಮೀ ಮತ್ತು 47.33 ಚ.ಮೀ. ವಿಸ್ತೀರ್ಣದ ಮೂರು ನಿರ್ದಿಷ್ಟ ಪ್ಲಾಟ್‌ಗಳಾಗಿವೆ.

ಈ ಪರಿಸ್ಥಿತಿಯಲ್ಲಿ ಮೆಟ್ರೋ ಏನು ಮಾಡಲು ಯೋಜಿಸುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ. 'BMRCL ಸದ್ಯ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಮುಂದೆ ಏನು ಮಾಡಬಹುದೆಂದು ಯೋಜಿಸುತ್ತಿದೆ' ಮತ್ತೊಬ್ಬ BMRCL ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com