ವಿಜಯಪುರ: ಕೊಲ್ಹಾರ ಪಟ್ಟಣದಲ್ಲಿ ದೇವರ ಪಲ್ಲಕ್ಕಿ ತೊಳೆಯಲು ಹಾಗೂ ಪುಣ್ಯಸ್ನಾನ ಮಾಡಲು ಕೃಷ್ಣಾನದಿಗೆ ಇಳಿದಿದ್ದ ಬಾಲಕರಿಬ್ಬರು ನದಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಮೃತ ಬಾಲಕರು ಸಹೋದರರಾಗಿದ್ದು ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ನಿವಾಸಿ 13 ವರ್ಷದ ಯಶಸ್ವಿ ರಾಜು ಮಾದರ ಮತ್ತು 10 ವರ್ಷದ ಶ್ರೀಧರ ಶಿವಪ್ಪ ಮಾದರ ಅಲಿಯಾಸ್ ದೊಡ್ಡಮನಿ ಎಂದು ಗುರುತಿಸಲಾಗಿದೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಯುಗಾದಿ ಪ್ರಯುಕ್ತ ದೇವರ ಪಲ್ಲಕ್ಕಿಯೊಂದಿಗೆ ನದಿಗೆ ಆಗಮಿಸಿ ಪಲ್ಲಕ್ಕಿ ತೊಳೆದು ಸ್ನಾನ ಮಾಡುವುದು ವಾಡಿಕೆ ಈ ಗ್ರಾಮದಲ್ಲಿದೆ. ಅದರಂತೆ ದೇವರ ಪಲ್ಲಕ್ಕಿಯೊಂದಿಗೆ ನೀರಿಗೆ ಇಳಿದಿದ್ದ ಸಹೋದರರು ನೀರುಪಾಲಾಗಿದ್ದಾರೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement