ಕೋಲಾರ: ಕ್ವಾರಿಯಲ್ಲಿ ಮುಳುಗುತ್ತಿದ್ದ ತಮ್ಮನನ್ನು ರಕ್ಷಿಸಲು ಹೋಗಿ ಅಣ್ಣನೂ ಸಾವು

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲ್ಯಪ್ಪನಹಳ್ಳಿಯ ಕ್ವಾರಿ ಹಳ್ಳದಲ್ಲಿ ಈಜಲು ಹೋಗಿದ್ದ ಇಬ್ಬರು ಸಹೋದರರು ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.
ಇಬ್ಬರು ಸಹೋದರರು
ಇಬ್ಬರು ಸಹೋದರರು

ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲ್ಯಪ್ಪನಹಳ್ಳಿಯ ಕ್ವಾರಿ ಹಳ್ಳದಲ್ಲಿ ಈಜಲು ಹೋಗಿದ್ದ ಇಬ್ಬರು ಸಹೋದರರು ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.

ಮೃತ ಸಹೋದರರನ್ನು ಪವನ್ ​ಕುಮಾರ್(18)​ ಮತ್ತು ಮಧು ಕುಮಾರ್​()14 ಎಂದು ಗುರುತಿಸಲಾಗಿದೆ. ಬೇಸಿಗೆ ಬಿಸಿ ತಾಳಲಾರದೆ ಯುವಕರ ಜತೆ ಈಜಲು ಹೋಗಿದ್ದ ಈ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.

ಮುಳುಗುತ್ತಿದ್ದ ತನ್ನ ತಮ್ಮ ಮಧು ಕುಮಾರ್ ನನ್ನು ರಕ್ಷಿಸಲು ಹೋಗಿ ಅಣ್ಣ ಪವನ್ ಕುಮಾರ್ ಸಹ ನೀರು ಪಾಲಾಗಿದ್ದಾನೆ.

ಇಬ್ಬರು ಸಹೋದರರು
ವಿಜಯಪುರ: ಕೃಷ್ಣಾನದಿಯಲ್ಲಿ ದೇವರ ಪಲ್ಲಕ್ಕಿ ತೊಳೆಯಲು ತೆರಳಿದ್ದ ಇಬ್ಬರು ಸಹೋದರರು ನೀರುಪಾಲು

ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com