ಸುಡಾನ್‌: ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದ ಮೈಸೂರು ಮಹಿಳೆ ಅನುಮಾನಾಸ್ಪದ ಸಾವು

ಮೈಸೂರು ಜಿಲ್ಲೆಯ ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದ ಬುಡಕಟ್ಟು ಮಹಿಳೆಯೊಬ್ಬರು ಸುಡಾನ್‌ನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಮೃತ ಮಹಿಳೆಯನ್ನು ನಂದಿನಿ ಎಂದು ಗುರುತಿಸಲಾಗಿದೆ. ಬ್ಯುಸಿನೆಸ್ ಸಂಬಂಧಿ ವಿಚಾರವಾಗಿ ನಂದಿನಿ ಸುಡಾನ್‌ಗೆ ತೆರಳಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಮೃತ ನಂದಿನಿ
ಮೃತ ನಂದಿನಿ

ಬೆಂಗಳೂರು: ಮೈಸೂರು ಜಿಲ್ಲೆಯ ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದ ಬುಡಕಟ್ಟು ಮಹಿಳೆಯೊಬ್ಬರು ಸುಡಾನ್‌ನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಮೃತ ಮಹಿಳೆಯನ್ನು ನಂದಿನಿ ಎಂದು ಗುರುತಿಸಲಾಗಿದೆ.

ಬ್ಯುಸಿನೆಸ್ ಸಂಬಂಧಿ ವಿಚಾರವಾಗಿ ನಂದಿನಿ ಸುಡಾನ್‌ಗೆ ತೆರಳಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಆಕೆಯ ಸಾವಿನ ಹಿಂದಿನ ನಿಖರ ಕಾರಣವನ್ನು ಅಧಿಕಾರಿಗಳು ನೀಡಿಲ್ಲ.

ನಂದಿನಿಯ ಪತಿ ಮೈಸೂರು ನಗರ ಸಮೀಪದ ಹುಣಸೂರು ಪಟ್ಟಣದ ಪಕ್ಷಿರಾಜಪುರದಲ್ಲಿ ನೆಲೆಸಿದ್ದು, ಸುಡಾನ್‌ನಿಂದ ನಂದಿನಿಯ ಮೃತದೇಹವನ್ನು ವಾಪಸ್ ತರುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಸುಡಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಮಾತನಾಡಿದ್ದಾರೆ ಮತ್ತು ಏಪ್ರಿಲ್ 17 ರಂದು ನಂದಿನಿ ಅವರ ಪಾರ್ಥಿವ ಶರೀರ ಬರುವ ನಿರೀಕ್ಷೆಯಿದೆ ಎಂದು ಕುಟುಂಬಕ್ಕೆ ತಿಳಿಸಲಾಗಿದೆ.

ಹಕ್ಕಿ ಪಿಕ್ಕಿ ಜನಾಂಗಕ್ಕೆ ಸೇರಿದ 181 ಕ್ಕೂ ಹೆಚ್ಚು ಮಂದಿ ಕಳೆದ ವರ್ಷ ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ಮರಳಿ ಕರೆತರಲು ಭಾರತ ಸರ್ಕಾರ ‘ಆಪರೇಷನ್ ಕಾವೇರಿ’ ಆರಂಭಿಸಿತು.

ಹಕ್ಕಿ ಪಿಕ್ಕಿ ಜನಾಂಗ ಅರಣ್ಯ ಪ್ರದೇಶಗಳ ಬಳಿ ವಾಸಿಸುತ್ತಿದೆ. ಜೀವನ ನಡೆಸಲು ಸಾಧ್ಯವಾಗದೆ, ಅವರು ಗಿಡಮೂಲಿಕೆಗಳ ಸೌಂದರ್ಯವರ್ಧಕಗಳನ್ನು ಮಾರಾಟ ಮಾಡಲು ಆಫ್ರಿಕನ್ ದೇಶಗಳಿಗೆ ವಿಶೇಷವಾಗಿ ಸುಡಾನ್‌ಗೆ ಪ್ರಯಾಣಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com