ಲೈಂಗಿಕ ಕಿರುಕುಳ ದೂರುಗಳಿಗೆ ಪರಿಹಾರ: 'ಪಾಶ್ ಸಮಿತಿ' ರಚನೆ ನಿರ್ಧಾರ ಮುಂದೂಡಿಕೆ- ಕವಿತಾ ಲಂಕೇಶ್

ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯದ ಕುರಿತು ನ್ಯಾ. ಹೇಮಾ ಸಮಿತಿ ವರದಿ ನೀಡಿದ ಬಳಿಕ ಕರ್ನಾಟಕದಲ್ಲಿಯೂ ಅಂತಹ ಸಮಿತಿ ರಚಿಸಬೇಕು ಎಂದು FIRE ಒತ್ತಾಯಿಸಿತ್ತು.
Kavitha Lankesh
ಕವಿತಾ ಲಂಕೇಶ್
Updated on

ಬೆಂಗಳೂರು: ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ದೂರುಗಳನ್ನು ಪರಿಹರಿಸಲು ತನ್ನ ನೇತೃತ್ವದಲ್ಲಿ ಪಾಶ್ ಸಮಿತಿ ರಚಿಸುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧಾರವನ್ನು ಮುಂದೂಡಲಾಗಿದೆ ಎಂದು ನಿರ್ದೇಶಕಿ ಕವಿತಾ ಲಂಕೇಶ್ ಮಂಗಳವಾರ ಹೇಳಿದ್ದಾರೆ. ಲೈಂಗಿಕ ಕಿರುಕುಳ ತಡೆ (PoSH) ಕಾಯ್ದೆಯಡಿ ಕೆಎಫ್‌ಸಿಸಿ ಡಿಸೆಂಬರ್ 1 ರಂದು 10 ಸದಸ್ಯರ ಆಂತರಿಕ ಸಮಿತಿಯನ್ನು ರಚಿಸಿದೆ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕವಿತಾ ಲಂಕೇಶ್ ಅವರು ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ನ ಅಧ್ಯಕ್ಷರಾಗಿದ್ದಾರೆ. ಇದು ಕನ್ನಡ ಚಿತ್ರರಂಗದಲ್ಲಿ ಮಹಿಳಾ ಹಕ್ಕುಗಳು ಮತ್ತು ದುರುಪಯೋಗದ ವಿರುದ್ಧ ಹೋರಾಡುತ್ತಿದೆ. ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯದ ಕುರಿತು ನ್ಯಾ. ಹೇಮಾ ಸಮಿತಿ ವರದಿ ನೀಡಿದ ಬಳಿಕ ಕರ್ನಾಟಕದಲ್ಲಿಯೂ ಅಂತಹ ಸಮಿತಿ ರಚಿಸಬೇಕು ಎಂದು FIRE ಒತ್ತಾಯಿಸಿತ್ತು.

ಸಭೆಯಲ್ಲಿ ಸಮಿತಿಯ ನೇತೃತ್ವವನ್ನು ನನಗೆ ವಹಿಸಲು ನಿರ್ಧರಿಸಲಾಯಿತು. ಆದರೆ, ಆದರೆ ಇದೀಗ ಹೊಸ ಪದಾಧಿಕಾರಿಗಳ ಆಯ್ಕೆ ಬಾಕಿ ಉಳಿದಿರುವುದರಿಂದ ನಿರ್ಧಾರವನ್ನು ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ ಎಂದು ಅವರು ಹೇಳಿದರು.

ಡಿಸೆಂಬರ್ 15 ರಂದು ಚುನಾವಣೆಯ ನಂತರ ಕೆಎಫ್‌ಸಿಸಿ ಸಭೆ ನಡೆಯಲಿದ್ದು, ಡಿಸೆಂಬರ್ 16 ರಂದು ಸಮಿತಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನನಗೆ ತಿಳಿಸಲಾಗಿದೆ. ಆದರೆ ನನ್ನನ್ನು ಸಮಿತಿಯ ಮುಖ್ಯಸ್ಥೆಯಾಗಿ ನೇಮಕ ಮಾಡಿರುವುದಕ್ಕೆ KFCCಯ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ನನಗೆ ತಿಳಿದಿರುವ ಕೆಲ ಸದಸ್ಯರು ತಿಳಿಸಿದ್ದಾರೆ ಎಂದು ಅವರು ಹೇಳಿದರು.

ನಟಿಯರಾದ ಪ್ರಮೀಳಾ ಜೋಷಾಯ್ ಮತ್ತು ಶ್ರುತಿ ಹರಿಹರನ್, ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ರಾಜ್ಯ ಸಂಯೋಜಕ ಮಲ್ಲು ಕುಂಬಾರ್, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಕೆ.ಎಸ್. ವಿಮಲಾ ,ಪತ್ರಕರ್ತ ಮುರಳೀಧರ ಖಜಾನೆ, ನಿರ್ಮಾಪಕ ಸಾ.ರಾ.ಗೋವಿಂದ, ನಾಟಕಕಾರ ಶಶಿಕನಿ ಯಡಹಳ್ಳಿ, ವಕೀಲೆ ರಾಜಲಕ್ಷ್ಮಿ ಅಂಕಲಗಿ, KFCC ಅಧ್ಯಕ್ಷ ಎನ್‌ಎಂ ಸುರೇಶ್ ಸೇರಿದಂತೆ ಇತರರು ಸಮಿತಿಯಲ್ಲಿದ್ದಾರೆ.

Kavitha Lankesh
ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲೂ ಸಮಿತಿ ರಚಿಸಿದರೆ ಸ್ವಾಗತ: ಫಿಲಂ ಚೇಂಬರ್ ಅಧ್ಯಕ್ಷ ಎನ್‌ಎಂ ಸುರೇಶ್ (ಸಂದರ್ಶನ)

ಕವಿತಾ ಲಂಕೇಶ್ ಸಮಿತಿ ನೇತೃತ್ವ ವಹಿಸುವ ನಿರ್ಧಾರವನ್ನು ಮುಂದೂಡಲಾಗಿದೆ ಎಂದು ಸುರೇಶ್ ಕೂಡಾ ಪಿಟಿಐಗೆ ಖಚಿತಪಡಿಸಿದ್ದಾರೆ. ನನ್ನ ಅವಧಿ ಮುಗಿಯುತ್ತಿರುವ ಕಾರಣ ಈ ಆದೇಶಕ್ಕೆ ಸಹಿ ಹಾಕುವ ಹಕ್ಕು ನನಗಿಲ್ಲ. ಚುನಾವಣೆ ನಡೆಯುತ್ತಿರುವುದರಿಂದ ನೂತನ ಪದಾಧಿಕಾರಿಗಳು ಅಧಿಕಾರ ವಹಿಸಿಕೊಳ್ಳುವವರೆಗೆ ಕಾಯ್ದು ಆದೇಶ ಹೊರಡಿಸಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು. ಆದರೆ,ಲಂಕೇಶ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲು ಕೆಎಫ್‌ಸಿಸಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com