ಬಿಜೆಪಿ ಎಡಬಿಡಂಗಿ ನಿಲುವು: ಸಮುದಾಯದ ನಾಯಕರಿಂದ ಅಡೆತಡೆ; ಪಂಚಮಸಾಲಿ ಆಂದೋಲನಕ್ಕೆ ಹಿನ್ನಡೆ

ಮುಸ್ಲಿಂ ಗುಂಪು ಬೊಮ್ಮಾಯಿ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು, ಸುಪ್ರೀಂ ಕೋರ್ಟ್ ಯಥಾಸ್ಥಿತಿಗೆ ಆದೇಶಿಸಿತು ಮತ್ತು ಆಗಿನ ಸರ್ಕಾರವು ಅಫಿಡವಿಟ್ ಸಲ್ಲಿಸಿತ್ತು.
Jaya Mrityunjaya Swamji
ಜಯ ಮೃತ್ಯುಂಜಯ ಸ್ವಾಮೀಜಿ
Updated on

ಬೆಂಗಳೂರು: ಪಂಚಮಸಾಲಿ ಲಿಂಗಾಯತ ಧರ್ಮಾಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ ಅವರು ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಆದರೆ ಸಮುದಾಯದ ಮುಖಂಡರ ಭಿನ್ನಾಭಿಪ್ರಾಯಗಳು ಮತ್ತು ಬಿಜೆಪಿಯ ಬದ್ಧತೆಯಿಲ್ಲದ ನಿಲುವುಗಳಿಂದ ಚಳುವಳಿಗೆ ಹಿನ್ನಡೆಯಾಗಿದೆ. ಸಮುದಾಯವು 2A ಅಥವಾ 2D ಮೀಸಲಾತಿ ಅನುಸರಿಸಬೇಕೇ ಎಂಬುದರ ಕುರಿತು ಈಗ ಚರ್ಚೆ ನಡೆಯುತ್ತಿದೆ.

ತನ್ನ ದೀರ್ಘಾವಧಿಯ ಯೋಜನೆಗಾಗಿ ಹಿಂದೂ ಸಮುದಾಯವನ್ನು ವಿಭಜನೆ ಮಾಡದಿರಲು ಬಿಜೆಪಿ ಬಯಸುತ್ತಿದೆ, ಪಕ್ಷವನ್ನು ಬೆಂಬಲಿಸುವ ಒಂದು ಸಮುದಾಯದ ಕಾರಣಕ್ಕಾಗಿ ಅದರ ಪರವಾಗಿ ಹೋರಾಟ ಮಾಡುವುದರಿಂದ ಇತರ ಹಿಂದುಳಿದ ವರ್ಗದ ಸಮುದಾಯಗಳ ಬೆಂಬಲ ಪಡೆಯವಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆಯಿದೆ ಎಂಬುದನ್ನು ಬಿಜೆಪಿ ಅರಿತುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಇನ್ನು ಮುಂದೆ ರಾಜ್ಯ ಸರ್ಕಾರದಿಂದ 2ಎಮೀಸಲಾತಿಗಾಗಿ ಸಮುದಾಯವು ಬೇಡಿಕೆ ಇಡುವುದಿಲ್ಲ, ಆದರೆ 2ಡಿ ಟ್ಯಾಗ್‌ಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಸಲಿದೆ ಎಂದು ಪಕ್ಷದ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದರು. 2ಬಿ ಅಡಿಯಲ್ಲಿ ಅರ್ಹತೆ ಪಡೆದಿರುವ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸುವ ಮೂಲಕ ಕೋಟಾ ಮರುಹಂಚಿಕೆ ಕುರಿತು ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ನಿರ್ಧರಿಸಿದಂತೆ ಸಮುದಾಯವು ವಿಷಯವನ್ನು ಮುಂದುವರಿಸಲಿದೆ ಎಂದು ಅವರು ಹೇಳಿದರು.

Jaya Mrityunjaya Swamji
ಮೀಸಲಾತಿ ಹೋರಾಟ ಅಸಂವಿಧಾನಿಕ ಎಂದು ಹೇಳುವ ಮೂಲಕ ಪಂಚಮಸಾಲಿ ಲಿಂಗಾಯತರಿಗೆ ಸಿಎಂ ಅವಮಾನ ಮಾಡಿದ್ದಾರೆ: ಜಯ ಮೃತ್ಯುಂಜಯ ಸ್ವಾಮಿ

ಶೇ. 4ರಷ್ಟು ಕೋಟಾವನ್ನು 2D ಅಡಿಯಲ್ಲಿ ಲಿಂಗಾಯತರಿಗೆ 3B ಮತ್ತು 2C ಅಡಿಯಲ್ಲಿ ಒಕ್ಕಲಿಗರು 3A ಅನ್ನು ರದ್ದುಗೊಳಿಸುವ ಮೂಲಕ 5% ರಿಂದ 7% ಮತ್ತು 4% ರಿಂದ 6% ಗೆ ಹೆಚ್ಚಿಸುವ ಮೂಲಕ ಸಮಾನವಾಗಿ ಹಂಚಿಕೊಂಡಿದ್ದಾರೆ. ಪಂಚಮಸಾಲಿಗಳು, ಮರಾಠರು, ಬಂಟರು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಲಿಂಗಾಯತರು 3B ನಿಂದ ಪ್ರಯೋಜನ ಪಡೆಯುತ್ತಿದ್ದಾರೆ ಹಾಗಾಗಿ ವ್ಯವಸ್ಥೆಗೆ ತೊಂದರೆಯಾಗಬಾರದು ಎಂದು ಯತ್ನಾಳ್ ಬಯಸುತ್ತಿದ್ದಾರೆ.

ಮುಸ್ಲಿಂ ಗುಂಪು ಬೊಮ್ಮಾಯಿ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು, ಸುಪ್ರೀಂ ಕೋರ್ಟ್ ಯಥಾಸ್ಥಿತಿಗೆ ಆದೇಶಿಸಿತು ಮತ್ತು ಆಗಿನ ಸರ್ಕಾರವು ಅಫಿಡವಿಟ್ ಸಲ್ಲಿಸಿತ್ತು. ಈಗ, ಯತ್ನಾಳ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಕೋಟಾವನ್ನು ರದ್ದುಗೊಳಿಸುವ ವಿಷಯವನ್ನು ಮುಂದುವರಿಸಲು ಇಷ್ಟಪಡುತ್ತಾರೆ.

ಬಿಜೆಪಿ ತನ್ನ ಹಿಂದೂ ಮತ ಬ್ಯಾಂಕ್ ವಿಭಜನೆ ಬಯಸದಿದ್ದರೂ, ಕಾಂಗ್ರೆಸ್ ಪ್ರತಿಪಕ್ಷದಲ್ಲಿದ್ದಾಗ ಪಂಚಮಸಾಲಿಗಳಿಗೆ 2ಎ ಮೀಸಲಾತಿಯ ಭರವಸೆ ನೀಡಿದ್ದರಿಂದ ಪಂಚಮಸಾಲಿ ವಿವಾದವನ್ನು ಕೈಗೆತ್ತಿಕೊಂಡಿದೆ, ಆದರೆ ಸಿಎಂ ಸಿದ್ದರಾಮಯ್ಯ ಸಮುದಾಯದ ಬೇಡಿಕೆ ಅಸಂವಿಧಾನಿಕ ಎಂದು ಹೇಳುವ ಮೂಲಕ ಯೂಟರ್ನ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com