ಮೈಸೂರಿನೊಂದಿಗೆ ವಿಶೇಷ ಸಂಬಂಧ ಹೊಂದಿದ್ದ ಡಾ. ಮನಮೋಹನ್ ಸಿಂಗ್!

1992 ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭಾಷಣ ಮಾಡಲು ಮೈಸೂರಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರಿಗೆ ಅಂದಿನ ಕುಲಪತಿ ಪ್ರೊಫೆಸರ್ ಎಂ. ಮಾದಯ್ಯ ಅವರು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದರು.
Dr Manmohan Singh and Mysuru University
ಡಾ.ಮನ್ ಮೋಹನ್ ಸಿಂಗ್, ಮೈಸೂರು ವಿವಿ ಸಾಂದರ್ಭಿಕ ಚಿತ್ರ
Updated on

ಮೈಸೂರು: ಗುರುವಾರ ನಿಧನರಾದ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರು ನಾಯಕ ಹಾಗೂ ಐತಿಹಾಸಿಕ, ಶೈಕ್ಷಣಿಕ ನಗರಿಯ ಅಭಿಮಾನಿಯಾಗಿ ಮೈಸೂರಿನೊಂದಿಗೆ ವಿಶೇಷ ಸಂಬಂಧ ಹೊಂದಿದ್ದರು.

1992 ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭಾಷಣ ಮಾಡಲು ಮೈಸೂರಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರಿಗೆ ಅಂದಿನ ಕುಲಪತಿ ಪ್ರೊಫೆಸರ್ ಎಂ. ಮಾದಯ್ಯ ಅವರು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದರು. ಅರ್ಥಶಾಸ್ತ್ರಜ್ಞರಾಗಿದ್ದ ಪ್ರೊಫೆಸರ್ ಮಾದಯ್ಯ ಅವರು ಮನಮೋಹನ್ ಸಿಂಗ್ ಸಿಂಗ್ ಅವರ ನಿಕವರ್ತಿಯಾಗಿದ್ದರು. ಶಿಕ್ಷಣ ಮತ್ತು ಸಂಶೋಧನೆಯಲ್ಲಿ ವಿಶ್ವವಿದ್ಯಾಲಯದ ಕೊಡುಗೆಗಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಶತಮಾನದಷ್ಟು ಹಳೆಯದಾದ ಮೈಸೂರು ವಿಶ್ವವಿದ್ಯಾಲಯದ ಬಗ್ಗೆ ಡಾ. ಸಿಂಗ್ ಅವರ ಅಭಿಮಾನವು ಅವರು ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಮುಂದುವರೆದಿತ್ತು. 2011 ರಲ್ಲಿ ವಿಶ್ವವಿದ್ಯಾನಿಲಯದ 95 ನೇ ಸಂಸ್ಥಾಪನಾ ದಿನದಂದು, ಆಗಿನ ರಾಜ್ಯಪಾಲರಾದ ಎಚ್ ಆರ್ ಭಾರದ್ವಾಜ್ ಅವರ ಮೂಲಕ 100 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿ, ಸಂಸ್ಥೆ ಜಾಗತಿಕವಾಗಿ ಅತ್ಯುತ್ತಮವಾದದ್ದು ಎಂದು ಶ್ಲಾಘಿಸಿದ್ದರು.

ಮಾಜಿ ಪ್ರಧಾನಿಯವರು ಪೊಟೆನ್ಶಿಯಲ್ ಫಾರ್ ಎಕ್ಸಲೆನ್ಸ್ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಅಡಿಯಲ್ಲಿ ವಿಶ್ವವಿದ್ಯಾಲಯಕ್ಕೆ ರೂ.150 ಕೋಟಿ ಮಂಜೂರು ಮಾಡಿದ್ದರು. ವಿಶ್ವವಿದ್ಯಾನಿಲಯವು ಜಾಗತಿಕ ಮನ್ನಣೆಯನ್ನು ಪಡೆಯಲು ಸಹಾಯ ಮಾಡುವ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳಲು ವಿವಿಧ ಯೋಜನೆಗಳ ಅಡಿಯಲ್ಲಿ ವಿಶ್ವವಿದ್ಯಾನಿಲಯಕ್ಕೆ ಮಾನವ ಸಂಪನ್ಮೂಲ ಅಭಿವೃದ್ಧಿಯಿಂದ ಹಣಕಾಸಿನ ನೆರವು ನೀಡಲಾಗಿತ್ತು ಎಂದು ಮಾಜಿ ಕುಲಪತಿ ಪ್ರೊಫೆಸರ್ ವಿ.ಜಿ ತಳವಾರ್ ಹೇಳಿದ್ದಾರೆ.

Dr Manmohan Singh and Mysuru University
ದಿವಾಳಿಯ ದವಡೆಗೆ ಸಿಲುಕಿತ್ತು ಭಾರತ; 'LPG' ಮೂಲಕ ಆರ್ಥಿಕತೆಯನ್ನು ಹಳಿಗೆ ಮರಳಿಸಿದ್ದರು Dr. Manmohan singh: ಅವರ ಪ್ರಮುಖ ಯೋಜನೆಗಳಿವು...

ಡಾ. ಮನಮೋಹನ್ ಸಿಂಗ್ ಅವ ಕೊಡುಗೆಗಳು ಶೈಕ್ಷಣಿಕ ಕ್ಷೇತ್ರವನ್ನು ಮೀರಿ ವಿಸ್ತರಿಸಿತ್ತು. ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ (NURM) ಯೋಜನೆಯಡಿಯಲ್ಲಿ ಮೈಸೂರಿಗೆ ಗಣನೀಯ ಪ್ರಮಾಣದಲ್ಲಿ ಹಣವನ್ನು ಮಂಜೂರು ಮಾಡಿ, ಜಿಲ್ಲೆಯಲ್ಲಿ ಮೂಲಸೌಕರ್ಯ ಸುಧಾರಣೆಗೆ ನೆರವು ನೀಡಿದ್ದರು. ಸಾರಿಗೆ ವ್ಯವಸ್ಥೆ ಮತ್ತು ಮೂಲ ಸೌಕರ್ಯಗಳನ್ನು ಸುಧಾರಿಸಲು ಬೆಂಗಳೂರು ಮತ್ತು ಮೈಸೂರು ಮಹಾನಗರ ಪಾಲಿಕೆಗಳಿಗೆ 25,000 ಕೋಟಿ ರೂ. ಮಂಜೂರು ಮಾಡಿದ್ದರು. ಆದರೆ, ಆ ಹಣವನ್ನು ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿತ್ತು ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ತಿಳಿಸಿದರು.

Dr Manmohan Singh and Mysuru University
Watch | ಮನಮೋಹನ್ ಸಿಂಗ್ ಪಾತ್ರ ಮಾಡಿದ್ದ ಅನುಪಮ್ ಖೇರ್ ಹೇಳಿದ್ದು...

ಸಿಂಗ್ ವಿತ್ತ ಸಚಿವರಾಗಿದ್ದಾಗ ಮೈಸೂರಿನ ಆರ್‌ಬಿಐ ನೋಟು ಮುದ್ರಣವು ತನ್ನ ಘಟಕವನ್ನು ವಿಸ್ತರಿಸಿತು. ಯುಪಿಎ ಆಡಳಿತಾವಧಿಯಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಸಂಪರ್ಕ ಕಾರ್ಯಕ್ರಮದಡಿ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚುವರಿ ಹಣವನ್ನು ಮಂಜೂರು ಮಾಡಲಾಗಿತ್ತು. ಮಾಜಿ ಪ್ರಧಾನಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಚಾಮರಾಜ ಶಾಸಕ ಹರೀಶ್ ಗೌಡ, ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ವಿಜಯ್ ಕುಮಾರ್ ಸೇರಿದಂತೆ ಹಲವು ಗಣ್ಯರು, ಮೈಸೂರು ನಗರಕ್ಕೆ ಮನಮೋಹನ್ ಸಿಂಗ್ ಅವರ ಕೊಡುಗೆಗಳನ್ನು ಸ್ಮರಿಸಿ ಸಂತಾಪ ಸೂಚಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com