ಬೆಂಗಳೂರು: ಇನ್ನು ಮುಂದೆ ಎಲ್ಲಾ ಶನಿವಾರಗಳಂದು ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರಕ್ಕೆ ಅನುಮತಿ

ತೋಟಗಾರಿಕೆ ಇಲಾಖೆ ಫೆಬ್ರವರಿ 8 ರಂದು ಹೊರಡಿಸಿರುವ ಆದೇಶದಲ್ಲಿ, ಮೂರು ತಿಂಗಳ ಕಾಲ ಪ್ರಾಯೋಗಿಕವಾಗಿ ಎರಡು ಮತ್ತು ನಾಲ್ಕನೇ ಶನಿವಾರದಂದು ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಿದೆ. ಹಿಂದೆ ಈ ದಿನಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ತೋಟಗಾರಿಕೆ ಇಲಾಖೆ ಫೆಬ್ರವರಿ 8 ರಂದು ಹೊರಡಿಸಿರುವ ಆದೇಶದಲ್ಲಿ, ಮೂರು ತಿಂಗಳ ಕಾಲ ಪ್ರಾಯೋಗಿಕವಾಗಿ ಎರಡು ಮತ್ತು ನಾಲ್ಕನೇ ಶನಿವಾರದಂದು ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಿದೆ. ಹಿಂದೆ ಈ ದಿನಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. 

ನಗರ ಸಂಚಾರ ಪೊಲೀಸರು ಇದನ್ನು ಪರಿಹಾರವೆಂದು ಪರಿಗಣಿಸಿದರೆ, ನಾಗರಿಕರು ಏಕಪಕ್ಷೀಯ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವಾಹನ ರಹಿತ ಉದ್ಯಾನವನವನ್ನು ಉತ್ತೇಜಿಸುತ್ತಿದ್ದಾರೆ. 

ಸಾರ್ವಜನಿಕ ಅನುಕೂಲಕ್ಕಾಗಿ ಮತ್ತು ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ, ಮೂರು ತಿಂಗಳ ಕಾಲ ಪ್ರಾಯೋಗಿಕ ಕ್ರಮವಾಗಿ ಎರಡು ಮತ್ತು ನಾಲ್ಕನೇ ಶನಿವಾರದಂದು ಹೈಕೋರ್ಟ್‌ನಿಂದ ಸಿದ್ದಲಿಂಗಯ್ಯ ವೃತ್ತದವರೆಗೆ ಮತ್ತು ಪ್ರತಿಯಾಗಿ ಕಬ್ಬನ್ ಪಾರ್ಕ್‌ಗೆ ವಾಹನಗಳನ್ನು ಪ್ರವೇಶಿಸಲು ಅನುಮತಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜನವರಿ 24 ರಂದು ಮುಖ್ಯ ಕಾರ್ಯದರ್ಶಿ, ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ಅವರು ಕರೆದ ಸಭೆಯಲ್ಲಿ, ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಲಾಯಿತು. ವಾಹನ ಸಂಚಾರಕ್ಕೆ ಉದ್ಯಾನದೊಳಗೆ ಸಾಕಷ್ಟು ಸ್ಥಳಾವಕಾಶವಿದೆ. ಬೆಂಗಳೂರಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಕಾಪಾಡುವ ಉದ್ದೇಶ ಹೊಂದಿರುವ ನಾಗರಿಕರ ಗುಂಪಿನ ಹೆರಿಟೇಜ್ ಬೇಕು ಸಂಸ್ಥಾಪಕಿ ಪ್ರಿಯಾ ಚೆಟ್ಟಿ ರಾಜ್‌ಗೋಪಾಲ್, “ಕಬ್ಬನ್ ಪಾರ್ಕ್ ನಗರದೊಳಗೆ ಉದ್ಯಾನ ವಿಹಾರಿಗಳಿಗೆ ಓಡಾಡಲು ಪ್ರಮುಖ ಸ್ಥಳವಾಗಿದೆ. ಮತ್ತೊಂದು ಹೋಲಿಕೆ ಮಾಡಬಹುದಾದ ಹಸಿರು ಪ್ರದೇಶವಾದ ಲಾಲ್‌ಬಾಗ್ ವಾಹನ ದಟ್ಟಣೆಯಿಲ್ಲದೆ ಕಾರ್ಯನಿರ್ವಹಿಸಬಹುದಾದರೂ ಕಬ್ಬನ್ ಪಾರ್ಕ್‌ಗೆ ಅದೇ ಸವಲತ್ತು ಏಕೆ ಸಿಗುವುದಿಲ್ಲ ಎಂದು ಕೇಳುತ್ತಾರೆ. 

‘ಬ್ರ್ಯಾಂಡ್ ಬೆಂಗಳೂರು’ ಪ್ರಚಾರದತ್ತ ಅಧಿಕಾರಿಗಳು ಗಮನಹರಿಸುತ್ತಿರುವುದರಿಂದ, ನಾಗರಿಕರಿಗಿಂತ ವಾಹನಗಳಿಗೆ ಆದ್ಯತೆ ನೀಡುವುದು ಈ ಪರಿಕಲ್ಪನೆಯ ಮೂಲತತ್ವಕ್ಕೆ ವಿರುದ್ಧವಾಗಿದೆ. ನಾಗರಿಕರ ಅಭಿಪ್ರಾಯ ಸಂಗ್ರಹಿಸದೆ ಈ ನಿರ್ಧಾರವನ್ನು ಮಾಡಲಾಗಿದೆ ಎಂದು ಅವರು ಅಸಮಾಧಾನ  ವ್ಯಕ್ತಪಡಿಸುತ್ತಾರೆ.

ಬೆಂಗಳೂರು ಸ್ಕೇಟರ್ಸ್‌ನ ಸದಸ್ಯರಾದ ದಿವ್ಯೆ ಕಾರ್ಡೆ, "ನಗರದ ಸ್ಕೇಟಿಂಗ್ ಪರಿಸರ ಸ್ನೇಹಿ ಸಾರಿಗೆಯಾಗಿ ಕಾರ್ಯನಿರ್ವಹಿಸುವ ನಗರದಲ್ಲಿ ಕಬ್ಬನ್ ಪಾರ್ಕ್ ಏಕೈಕ ಸ್ಥಳವಾಗಿ ಉಳಿದಿದೆ ಎಂದು ಹೇಳಿದರು. ಉದ್ಯಾನವನವು ಛಾಯಾಗ್ರಹಣ ಮತ್ತು ಕ್ಯಾಮೆರಾ ಬಳಕೆಯ ಮೇಲೆ ನಿಷೇಧ ಹೊಂದಿದ್ದರೂ, ಈ ಹೊಸ ಆದೇಶವು ವಿವಾದಾಸ್ಪದವಾಗಿದೆ, ಇನ್ನೂ ಗಂಭೀರವಾದ ಬೆದರಿಕೆಯನ್ನು ಉಂಟುಮಾಡುತ್ತದೆ, ಇದು ಉದ್ಯಾನದ ಗಾಳಿಯ ಗುಣಮಟ್ಟ ಮತ್ತು ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಸಂಭಾವ್ಯವಾಗಿ ಅಪಾಯಕ್ಕೆ ತಳ್ಳುತ್ತದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com