ಅಧಿಕಾರಕ್ಕಾಗಿ ಧರ್ಮವನ್ನು ವಿಭಜಿಸುವವರು ದೊಡ್ಡ ದೇಶದ್ರೋಹಿಗಳು: ಸಾಹಿತಿ ಕೆ. ಮರುಳಸಿದ್ದಪ್ಪ

ಅಧಿಕಾರಕ್ಕಾಗಿ ಧರ್ಮವನ್ನು ವಿಭಜಿಸುವವರು ದೊಡ್ಡ ದೇಶದ್ರೋಹಿಗಳು ಎಂದು ಸಾಹಿತಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಕೆ ಮರುಳಸಿದ್ದಪ್ಪ ಅವರು ಶನಿವಾರ ಹೇಳಿದರು.
‘ಮಸ್ಜಿದ್ ದರ್ಶನ’ದ ವೇಳೆ ಮಹಿಳೆ ಮತ್ತು ಅವರ ಮಗಳು ಬಿಲ್ಲಾಲ್ ಮಸೀದಿಯಲ್ಲಿ ನಮಾಜ್ ಮಾಡಿದರು.
‘ಮಸ್ಜಿದ್ ದರ್ಶನ’ದ ವೇಳೆ ಮಹಿಳೆ ಮತ್ತು ಅವರ ಮಗಳು ಬಿಲ್ಲಾಲ್ ಮಸೀದಿಯಲ್ಲಿ ನಮಾಜ್ ಮಾಡಿದರು.

ಬೆಂಗಳೂರು: ಅಧಿಕಾರಕ್ಕಾಗಿ ಧರ್ಮವನ್ನು ವಿಭಜಿಸುವವರು ದೊಡ್ಡ ದೇಶದ್ರೋಹಿಗಳು ಎಂದು ಸಾಹಿತಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಕೆ ಮರುಳಸಿದ್ದಪ್ಪ ಅವರು ಶನಿವಾರ ಹೇಳಿದರು.

ಬನ್ನೇರುಘಟ್ಟ ರಸ್ತೆಯ ಬಿಲಾಲ್ ಮಸೀದಿಯಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳು ಒಗ್ಗಟ್ಟು ಮೂಡಿಸಲು ಮತ್ತು ಸಮುದಾಯದ ಬಗ್ಗೆ ಇರುವ ಭಿನ್ನಾಭಿಪ್ರಾಯ ಮತ್ತು ತಪ್ಪು ಕಲ್ಪನೆಗಳನ್ನು ನಿವಾರಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮರುಳಸಿದ್ದಪ್ಪ ಅವರು ಭಾಗವಹಿಸಿ ಮಾತನಾಡಿದರು.

‘ಮಸ್ಜಿದ್ ದರ್ಶನ’ದ ವೇಳೆ ಮಹಿಳೆ ಮತ್ತು ಅವರ ಮಗಳು ಬಿಲ್ಲಾಲ್ ಮಸೀದಿಯಲ್ಲಿ ನಮಾಜ್ ಮಾಡಿದರು.
ದೇವಾಲಯದ ಅವಶೇಷಗಳ ಮೇಲೆ ಜ್ಞಾನವಾಪಿ ಮಸೀದಿ ನಿರ್ಮಾಣ: ಎಎಸ್ಐ ಸಮೀಕ್ಷೆ ವರದಿ ಬಹಿರಂಗ

ಈ ಕಾರ್ಯಕ್ರಮವು ಪರಸ್ಪರ ಧರ್ಮದ ಬಗ್ಗೆ ತಿಳಿದುಕೊಳ್ಳಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇತರ ಸಮುದಾಯಗಳ ಧಾರ್ಮಿಕ ಸ್ಥಳಗಳನ್ನು ಒಳಗೊಂಡ ಇಂತಹ ಕಾರ್ಯಕ್ರಮಗಳು ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಮತ್ತು ಐಕ್ಯತೆ ಮೂಡಿಸಲು ವಿಚಾರ ವಿನಿಮಯ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ನಮ್ಮದು ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿಯಾಗಿದ್ದು, ರಾಜಕೀಯ ಪಕ್ಷಗಳು ಹಾಗೂ ಕೆಲವು ಧಾರ್ಮಿಕ ಮುಖಂಡರು ಮಾಲಿನ್ಯ, ಗದ್ದಲ ಮತ್ತು ಅಸ್ಥಿರ ಪರಿಸ್ಥಿತಿಗಳನ್ನು ಸೃಷ್ಟಿಸುತ್ತಾರೆ. ನಮ್ಮ ಸಂವಿಧಾನ ಏಕತೆಯ ಬಗ್ಗೆ ಹೇಳುತ್ತದೆ. ಆದರೆ, ಚುನಾವಣೆ ಗೆಲ್ಲಲು ರಾಜಕೀಯ ಪಕ್ಷಗಳು ಭಾವನಾತ್ಮಕ ಮತ್ತು ಧಾರ್ಮಿಕ ವಿಚಾರಗಳನ್ನು ಬಳಸಿಕೊಳ್ಳುತ್ತವೆ. ಪಕ್ಷಗಳು ಅಧಿಕಾರ ಹಿಡಿಯಲು ಜನರನ್ನು ಮತ್ತು ಸಮುದಾಯಗಳನ್ನು ಒಡೆಯಬಾರದು. ಬದಲಾಗಿ ಅಭಿವೃದ್ಧಿಯ ಬಗ್ಗೆ ಮಾತನಾಡಬೇಕು. ಜನರ ನಡುವೆ ಒಡಕು ಮೂಡಿಸುವವರೇ ದೊಡ್ಡ ದೇಶದ್ರೋಹಿಗಳು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com