ಬೆಳಗಾವಿ: ದುಷ್ಕರ್ಮಿಗಳಿಂದ ಪಂಚಾಯತ್ ಸದಸ್ಯನ ಮನೆ ಮೇಲೆ ದಾಳಿ, ವಾಹನ-ವಸ್ತುಗಳಿಗೆ ಹಾನಿ; ಪ್ರೇಮ ಪ್ರಕರಣ ಕಾರಣ?

ಜಿಲ್ಲೆಯ ನವಗಿ ಗ್ರಾಮದಲ್ಲಿ  ನಿನ್ನೆ ಜನವರಿ 1ರ ಹೊಸವರ್ಷ ರಾತ್ರಿ ಸುಮಾರು 30 ಜನ ಮುಸುಕುಧಾರಿ ಗ್ಯಾಂಗ್ ಅಟ್ಟಹಾಸ ಮೆರೆದಿದ್ದು, ಸುತ್ತಮುತ್ತ ನಿವಾಸಿಗಳು ಭಯಭೀತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
ದುಷ್ಕರ್ಮಿಗಳು ನಡೆಸಿದ ಹಲ್ಲೆಯಲ್ಲಿ ವಾಹನ, ಮನೆಯ ಕಿಟಕಿಗೆ ಹಾನಿಯುಂಟಾಗಿರುವುದು
ದುಷ್ಕರ್ಮಿಗಳು ನಡೆಸಿದ ಹಲ್ಲೆಯಲ್ಲಿ ವಾಹನ, ಮನೆಯ ಕಿಟಕಿಗೆ ಹಾನಿಯುಂಟಾಗಿರುವುದು
Updated on

ಬೆಳಗಾವಿ: ಜಿಲ್ಲೆಯ ನವಗಿ ಗ್ರಾಮದಲ್ಲಿ  ನಿನ್ನೆ ಜನವರಿ 1ರ ಹೊಸವರ್ಷ ರಾತ್ರಿ ಸುಮಾರು 30 ಜನ ಮುಸುಕುಧಾರಿ ಗ್ಯಾಂಗ್ ಅಟ್ಟಹಾಸ ಮೆರೆದಿದ್ದು, ಸುತ್ತಮುತ್ತ ನಿವಾಸಿಗಳು ಭಯಭೀತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬೆಳಗಾವಿ ಜಿಲ್ಲೆಯ ನವಗಿ ಗ್ರಾಮದಲ್ಲಿ ಆಯುಧಗಳು, ಕತ್ತಿಗಳು ಮತ್ತು ದೊಣ್ಣೆಗಳನ್ನು ಹಿಡಿದು ದುಷ್ಕರ್ಮಿಗಳು ಮುಖ್ಯವಾಗಿ ನಾಲ್ಕು ಮನೆಗಳ ಮೇಲೆ ದಾಳಿ ನಡೆಸಿದ್ದು ಮಾತ್ರವಲ್ಲದೆ ವಾಹನಗಳು ಮತ್ತು ಇತರ ವಸ್ತುಗಳನ್ನು ಹಾನಿಗೊಳಿಸಿದ್ದಾರೆ.

ದಾಳಿಗೆ ಒಳಗಾದವರಲ್ಲಿ ಮಾಜಿ ಮತ್ತು ಹಾಲಿ ಪಂಚಾಯಿತಿ ಸದಸ್ಯರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ಪಡೆದ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರೇಮ ಪ್ರಕರಣದ ವಿವಾದವೇ ಈ ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com