ಮಂಗಳೂರು: ಸಮುದ್ರ ತೀರದಲ್ಲಿ 'ಆಲಿವ್ ರಿಡ್ಲಿ' ಕಡಲಾಮೆ ಗೂಡುಗಳು ಪತ್ತೆ; ರಕ್ಷಣೆಗೆ ಅರಣ್ಯ ಇಲಾಖೆ ಕ್ರಮ!

ಮಂಗಳೂರಿನಲ್ಲಿ ಆಲಿವ್ ರಿಡ್ಲಿ ಕಡಲಾಮೆ ಸಂರಕ್ಷಣಾ ಕ್ರಮಗಳು ಫಲ ನೀಡಿವೆ. ಕಳೆದ ಮೂರು ವಾರಗಳಲ್ಲಿ ಸಸಿಹಿತ್ಲು ಮತ್ತು ಇಡ್ಯ ನಡುವಿನ 3-4 ಕಿಲೋಮೀಟರ್ ವ್ಯಾಪ್ತಿಯಲ್ಲಿ ಆರು ಗೂಡುಗಳು ಪತ್ತೆಯಾಗಿವೆ.
ಆಲಿವ್ ರಿಡ್ಲಿ ಕಡಲಾಮೆ  ಗೂಡುಗಳು
ಆಲಿವ್ ರಿಡ್ಲಿ ಕಡಲಾಮೆ ಗೂಡುಗಳು
Updated on

ಮಂಗಳೂರು: ಮಂಗಳೂರಿನಲ್ಲಿ ಆಲಿವ್ ರಿಡ್ಲಿ ಕಡಲಾಮೆ ಸಂರಕ್ಷಣಾ ಕ್ರಮಗಳು ಫಲ ನೀಡಿವೆ. ಕಳೆದ ಮೂರು ವಾರಗಳಲ್ಲಿ ಸಸಿಹಿತ್ಲು ಮತ್ತು ಇಡ್ಯ ನಡುವಿನ 3-4 ಕಿಲೋಮೀಟರ್ ವ್ಯಾಪ್ತಿಯಲ್ಲಿ ಆರು ಗೂಡುಗಳು ಪತ್ತೆಯಾಗಿವೆ.

ಮಾರ್ಚ್ ಮೊದಲ ವಾರದವರೆಗೆ ಗೂಡುಕಟ್ಟುವ ಸೀಸನ್ ಮುಂದುವರಿಯುವವರೆಗೆ ಅಂತಹ ಹೆಚ್ಚಿನ ಗೂಡುಗಳನ್ನು ಕಂಡುಹಿಡಿಯುವ ನಿರೀಕ್ಷೆಯನ್ನು ಅರಣ್ಯ ಇಲಾಖೆ ಹೊಂದಿದೆ. ಆರು ಗೂಡುಗಳ ಪೈಕಿ ನಾಲ್ಕು ಗೂಡುಗಳು ಹೆಚ್ಚಿನ ಉಬ್ಬರವಿಳಿತದ ನೀರಿನ ಮಿತಿಯಲ್ಲಿದ್ದ ಕಾರಣ ಸುರಕ್ಷಿತ ವಲಯಗಳಿಗೆ ಸ್ಥಳಾಂತರಿಸಲಾಗಿದೆ. ಅರಣ್ಯ ಇಲಾಖೆಯು ಗೂಡುಗಳನ್ನು ಜಾಲರಿ ಬಲೆಯಿಂದ ರಕ್ಷಿಸಿದೆ ಮತ್ತು ಅವುಗಳನ್ನು ವಾಚರ್‌ಗಳು ಸಹ ರಕ್ಷಿಸುತ್ತಿದ್ದಾರೆ. ಮೊಟ್ಟೆಗಳು ಹೊರಬರಲು 48-52 ದಿನಗಳನ್ನು ತೆಗೆದುಕೊಳ್ಳುತ್ತದೆ.

ಹಲವು ವರ್ಷಗಳ ಹಿಂದೆ, ಸುರತ್ಕಲ್ ಬೀಚ್ ಬಳಿ ಆಲಿವ್ ರಿಡ್ಲಿ ಆಮೆ ಗೂಡುಗಳು ಕಂಡುಬಂದಿವೆ ಎಂದು ಹೇಳಲಾಗಿದೆ ಆದರೆ ಅದನ್ನು ಖಚಿತಪಡಿಸಲು ಯಾವುದೇ ದಾಖಲೆಗಳಿರಲಿಲ್ಲ. ಮಂಗಳೂರಿನ ಸಮುದ್ರ ತೀರದಲ್ಲಿ ಇದೇ ಮೊದಲ ಬಾರಿಗೆ ಗೂಡುಗಳು ಪತ್ತೆಯಾಗಿವೆ ಎಂದು ಡಿಸಿಎಫ್ ಆಂಟನಿ ಮರಿಯಪ್ಪ ಹೇಳಿದ್ದಾರೆ.

ಆಲಿವ್ ರಿಡ್ಲಿ ಆಮೆಗಳ ಅನುಕೂಲಗಳ ಬಗ್ಗೆ ಕರಾವಳಿ ಸಮುದಾಯಗಳಲ್ಲಿ ಅರಿವು ಮೂಡಿಸುವ ಮತ್ತು ಗೂಡುಕಟ್ಟುಲು ಯೋಗ್ಯವಾದ ಬೀಚ್‌ಗಳನ್ನು ಸ್ವಚ್ಛಗೊಳಿಸುವ ಮೂಲಕ ಸಂರಕ್ಷಣಾ ಕ್ರಮಗಳು ಎರಡು ತಿಂಗಳ ಹಿಂದೆ ಪ್ರಾರಂಭವಾಯಿತು ಎಂದು ಅವರು ಹೇಳಿದ್ದಾರೆ. ಈ ಪ್ರದೇಶಗಳಲ್ಲಿ ಮನುಷ್ಯರಿಂದ ಉಂಟಾಗುವ ತೊಂದರೆಯನ್ನು ತಡೆಗಟ್ಟಲು ಸ್ಥಳೀಯ ನಿವಾಸಿಗಳು ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಗಸ್ತು ತಿರುಗುತ್ತಾರೆ.

ಆಲಿವ್ ರಿಡ್ಲಿ ಸಮುದ್ರ ಆಮೆಗಳನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರ ಅಡಿಯಲ್ಲಿ ಪರಿಶಿಷ್ಟ 1 (ದುರ್ಬಲ / ಅಳಿವಿನಂಚಿನಲ್ಲಿರುವ ಜಾತಿಗಳು) ಪ್ರಾಣಿಯಾಗಿ ರಕ್ಷಿಸಲಾಗಿದೆ. ಆಲಿವ್ ರಿಡ್ಲಿ ಆಮೆಗಳನ್ನು ಸಂರಕ್ಷಿಸುವ ಅಗತ್ಯವನ್ನು ಸ್ಥಳೀಯ ಮೀನುಗಾರರಿಗೆ ತಿಳಿಸಿದ ನಂತರ ಸಮುದ್ರದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಮೀನಿನ ಸಂತತಿಯನ್ನು ಹೆಚ್ಚಿಸಲು ಅದರ ಪ್ರಾಮುಖ್ಯತೆಯನ್ನು ತಿಳಿಸಲಾಯಿತು ಎಂದು ಎಸಿಎಫ್ ಶ್ರೀಧರ್ ತಿಳಿಸಿದ್ದಾರೆ.

ಈ ಆಮೆ ಜಾತಿಯ ಸಂರಕ್ಷಣೆಯ ತರಬೇತಿಗಾಗಿ ಅರಣ್ಯ ಇಲಾಖೆ ಎಸಿಎಫ್ ಶ್ರೀಧರ್ ಸೇರಿದಂತೆ ಅಧಿಕಾರಿಗಳ ತಂಡವನ್ನು ಒಡಿಶಾದ ಭುವನೇಶ್ವರಕ್ಕೆ ಕಳುಹಿಸಿತ್ತು. ಮಂಗಳೂರಿನ ಹೊರತಾಗಿ ಉಡುಪಿ ಜಿಲ್ಲೆಯ ಬೈಂದೂರು ಸಮೀಪದ ಸೋಮೇಶ್ವರದಲ್ಲಿ ಆಲಿವ್ ರಿಡ್ಲಿ ಆಮೆಗಳ ಗೂಡುಕಟ್ಟುವ ಸ್ಥಳಗಳು ಸಂರಕ್ಷಣಾ ಪ್ರಯತ್ನಗಳಿಂದ ಕಂಡುಬಂದಿವೆ ಎಂದು ಶ್ರೀಧರ್ ಹೇಳಿದರು. ಕುಂದಾಪುರದ ಕೋಡಿ ಹಲವು ವರ್ಷಗಳಿಂದ ಜಾತಿಯ ಗೂಡುಕಟ್ಟುವ ತಾಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com