ಬೆಂಗಳೂರು: ಬೆಳ್ಳಂದೂರಿನಲ್ಲಿ ದಲಿತರ ಸ್ಮಶಾನ ಕಬಳಿಸುವ ಯತ್ನ- ಎಎಪಿ ಆರೋಪ

100 ಕೋಟಿ ಮೌಲ್ಯದ ಸ್ಮಶಾನ ಭೂಮಿ ಒತ್ತುವರಿ ಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿ ನಾಲ್ಕು ತಿಂಗಳ ಹಿಂದೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಶೋಕ್ ಮತ್ತು ಸುರೇಶ್ ದೂರಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಳ್ಳಂದೂರು ವಾರ್ಡ್‌ನ ಭೋಗನಹಳ್ಳಿಯ 1.39 ಎಕರೆ ಸ್ಮಶಾನವನ್ನು ಕಬಳಿಸಲು ಭೂ ಮಾಫಿಯಾ ಪ್ರಯತ್ನ ನಡೆಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ ಮತ್ತು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಬೆಂಗಳೂರು ಪೂರ್ವ ಅಧ್ಯಕ್ಷ ಸುರೇಶ್ ಬಿಎನ್ ಆರೋಪಿಸಿದ್ದಾರೆ.

ಸ್ಮಶಾನದ ಸ್ಥಿತಿಯನ್ನು ಬದಲಾಯಿಸಲು ಕಟ್ಟಡದ ಅವಶೇಷಗಳನ್ನು ಅಡ್ಡಲಾಗಿ ಸುರಿಯಲಾಗುತ್ತಿದೆ ಎಂದು ಅವರು ಆಪಾದಿಸಿದ್ದಾರೆ. 100 ಕೋಟಿ ಮೌಲ್ಯದ ಸ್ಮಶಾನ ಭೂಮಿ ಒತ್ತುವರಿ ಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿ ನಾಲ್ಕು ತಿಂಗಳ ಹಿಂದೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಶೋಕ್ ಮತ್ತು ಸುರೇಶ್ ದೂರಿದ್ದಾರೆ.

ನಾವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಸ್ಥಳೀಯ ಶಾಸಕಿ ಮಂಜುಳಾ ಲಿಂಬಾವಳಿ ಅವರಿಗೆ ಗೊತ್ತಿದ್ದರೂ ಸ್ಮಶಾನ ಒತ್ತುವರಿ ತಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ನಾವು ಸ್ಮಶಾನ ರಕ್ಷಣೆಗಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಯೋಜಿಸಿದ್ದೇವೆ ಎಂದು ಅಶೋಕ್ ಹೇಳಿದರು.

ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ 1.4 ಕೋಟಿ ಎಕರೆ ಭೂಮಿ ಸರ್ಕಾರದ ಒಡೆತನದಲ್ಲಿದೆ: ಸಚಿವ ಕೃಷ್ಣ ಭೈರೇಗೌಡ

ಸುರೇಶ್ ಅವರು ಈ ಹಿಂದೆ ಈ ವಿಷಯ ಪ್ರಸ್ತಾಪಿಸಿದಾಗ ಅವರ ವಿರುದ್ಧ ಪೊಲೀಸ್ ಪ್ರಕರಣಗಳು ದಾಖಲಾಗಿದ್ದವು. ಕಂದಾಯ ಇಲಾಖೆಯು 2009 ರಲ್ಲಿ BBMP ಗೆ ಭೂಮಿಯನ್ನು ವರ್ಗಾಯಿಸಿತು. ಆದರೆ ಪ್ರಮುಖ ಬಿಲ್ಡರ್ ಭೂಮಿ ತನಗೆ ಸೇರಿದ್ದು ಎಂದು ಹೇಳಿಕೊಳ್ಳುತ್ತಾ ಬಂದಿದ್ದಾರೆ. ದಲಿತರು ತಮ್ಮ ಸತ್ತವರನ್ನು ಈ ಸ್ಮಶಾನದಲ್ಲಿ ಹೂಳುತ್ತಾರೆ. ದಲಿತ ಸಮುದಾಯ ನ್ಯಾಯಕ್ಕಾಗಿ ಹೋರಾಟ ನಡೆಸಲಿದೆ' ಎಂದು ಸುರೇಶ್ ಹೇಳಿದರು.

ಬಿಬಿಎಂಪಿಯ ಮಹದೇವಪುರ ವಲಯದ ಹಿರಿಯ ಅಧಿಕಾರಿಯೊಬ್ಬರು, ಆಪ್ ಮುಖಂಡ ಮತ್ತು ದಲಿತ ಕಾರ್ಯಕರ್ತರು ಮಾಡಿರುವ ಹಕ್ಕುಗಳನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.

ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಬೆಳ್ಳಂದೂರು ವಾರ್ಡ್‌ನ ಬಿಬಿಎಂಪಿ ಎಂಜಿನಿಯರ್‌ಗಳಿಗೆ ತಿಳಿಸಲಾಗುವುದು. ಸ್ಮಶಾನದಲ್ಲಿ ಅತಿಕ್ರಮಣ ಅಥವಾ ಅವಶೇಷಗಳನ್ನು ಸುರಿಯುತ್ತಿದ್ದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಬಿಬಿಎಂಪಿಯು ಕಂದಾಯ ಇಲಾಖೆಯೊಂದಿಗೆ ಪರಿಶೀಲಿಸಿ ಜಮೀನಿಗೆ ಬೇಲಿ ಹಾಕಲಿದೆ ಎಂದು ಬಿಬಿಎಂಪಿ ಅಧಿಕಾರಿ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com