ಜೂನ್ 6 ವರೆಗೆ 3 ದಿನ ಮದ್ಯ ಮಾರಾಟ ನಿಷೇಧ; ಆಹಾರ ಒದಗಿಸಲು ಪಬ್-ಬ್ರೀವರೀಸ್ ಗೆ ಹೈಕೋರ್ಟ್ ಅನುಮತಿ

ಆಹಾರ ಮತ್ತು ಪಾನೀಯ ಉದ್ಯಮಕ್ಕೆ ಹೈಕೋರ್ಟ್ ಸಿಹಿಸುದ್ದಿ ನೀಡಿದೆ. ಇಂದು ಜೂನ್ 1ರಿಂದ 6ರ ನಡುವೆ ಸಾರ್ವಜನಿಕರಿಗೆ ಆಹಾರ ಆತಿಥ್ಯ ನೀಡುವುದನ್ನು ಮುಂದುವರಿಸಲು ಅವಕಾಶ ನೀಡಬೇಕೆಂಬ ಮನವಿಗೆ ಹೈಕೋರ್ಟ್ ಅನುಮತಿ ನೀಡಿದೆ.
ಹೈಕೋರ್ಟ್
ಹೈಕೋರ್ಟ್
Updated on

ಬೆಂಗಳೂರು: ಆಹಾರ ಮತ್ತು ಪಾನೀಯ ಉದ್ಯಮಕ್ಕೆ ಹೈಕೋರ್ಟ್ ಸಿಹಿಸುದ್ದಿ ನೀಡಿದೆ. ಇಂದು ಜೂನ್ 1ರಿಂದ 6ರ ನಡುವೆ ಸಾರ್ವಜನಿಕರಿಗೆ ಆಹಾರ ಆತಿಥ್ಯ ನೀಡುವುದನ್ನು ಮುಂದುವರಿಸಲು ಅವಕಾಶ ನೀಡಬೇಕೆಂಬ ಮನವಿಗೆ ಹೈಕೋರ್ಟ್ ಅನುಮತಿ ನೀಡಿದೆ.

ಜೂನ್ 3ರಂದು ವಿಧಾನ ಪರಿಷತ್ ಚುನಾವಣೆ, ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶ ಮತ್ತು ಜೂನ್ 6ರಂದು ವಿಧಾನ ಪರಿಷತ್ ಚುನಾವಣೆ ಫಲಿತಾಂಶಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪಬ್‌ ಮತ್ತು ಬಿವರೇಜ್ ಮುಚ್ಚುವ ಬಗ್ಗೆ ಹೈಕೋರ್ಟ್ ನಿರ್ಧಾರ ಮಾಡಿದೆ. ಪಬ್ ಮತ್ತು ಬ್ರಿವರಿಗಳನ್ನು ಮುಚ್ಚಿದರೆ ವ್ಯಾಪಾರ ಆದಾಯ ಮೇಲೆ ತೀವ್ರ ಹೊಡೆತ ಬೀಳುತ್ತದೆ ಎಂದು ಈ ಸಮಯದಲ್ಲಿ ಜನರು ಹೆಚ್ಚಾಗಿ ಪಾನೀಯಗಳಿಗಾಗಿ ಪಬ್‌ಗಳಿಗೆ ಭೇಟಿ ನೀಡುತ್ತಾರೆ, ನಂತರ ಆಹಾರ ಸೇವನೆಯ ಮೊರೆ ಹೋಗುತ್ತಾರೆ.

ಹೈಕೋರ್ಟ್
ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜೂನ್ 1ರಿಂದ ಮದ್ಯ ಮಾರಾಟ ನಿಷೇಧ; ಕಾರಣ ಇಲ್ಲಿದೆ...

ನಿನ್ನೆಯ ಹೈಕೋರ್ಟ್ ಆದೇಶದ ಪ್ರಕಾರ, ಪ್ರತಿವಾದಿ ಸಂಖ್ಯೆ 3 (ಉಪ ಆಯುಕ್ತರು ಮತ್ತು ಜಿಲ್ಲಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್) ಮತ್ತು ನಂ 4 (ಪೊಲೀಸ್ ಕಮಿಷನರ್ ಮತ್ತು ಹೆಚ್ಚುವರಿ ಜಿಲ್ಲಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್) ಅರ್ಜಿದಾರರು ಮತ್ತು ಇತರರಿಗೆ ಬಾರ್‌ ಮತ್ತು ರೆಸ್ಟೋರೆಂಟ್ ಗಳಲ್ಲಿ ಆಹಾರವನ್ನು ನೀಡುವುದನ್ನು ತಡೆಯದಂತೆ ನಿರ್ದೇಶಿಸಲಾಗಿದೆ.

ಪಬ್ ಮತ್ತು ಬ್ರೀವರಿ ಮಾಲೀಕರು ಹೇಳುವಂತೆ ಹೆಚ್ಚಿನ ಜನರು ಪ್ರಾಥಮಿಕವಾಗಿ ಮದ್ಯ ಸೇವಿಸಲು ಪಬ್‌ಗಳಿಗೆ ಭೇಟಿ ನೀಡುತ್ತಾರೆ. ಆದೇಶವು ಅವರ ಪರವಾಗಿದ್ದರೂ ಗಳಿಕೆಗೆ ಸಹಾಯ ಮಾಡುತ್ತದೆ, ಉದ್ಯಮದ ಮೇಲೆ ಹೊಡೆತ ಬೀಳುತ್ತದೆ.

ಹೈಕೋರ್ಟ್ ಆದೇಶವು ಆಹಾರ ಸೇವೆಗೆ ಮಾತ್ರ ಅನ್ವಯಿಸುತ್ತದೆ. ನಾಳೆ ಜೂನ್ 2, 4 ಮತ್ತು ಜೂನ್ 6 ರಂದು ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ, ಇಂದು ಮತ್ತು ಜೂನ್ 3 ರಂದು ಸಂಜೆ 4 ಗಂಟೆಯ ನಂತರ ಮಾರಾಟ ಪುನಾರಂಭವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com