ಯಲಹಂಕದ ರೈಲ್ವೆ ಗಾಲಿ ಕಾರ್ಖಾನೆಯಲ್ಲಿ ಬೇಸಿಗೆಯಲ್ಲೂ ಹೇರಳ ನೀರು! ಕಾರಣ ಇಲ್ಲಿದೆ...

ರಂತರ ಪರಿಸರ ಸ್ನೇಹಿ ಪದ್ಧತಿಗಳು ಮತ್ತು ಅದರ ತೆರೆದ ಬಾವಿಗಳ ಪುನರುಜ್ಜೀವನದಿಂದ ಯಲಹಂಕದಲ್ಲಿರುವ ರೈಲ್ವೆ ಗಾಲಿ ಕಾರ್ಖಾನೆ ಆವರಣದಲ್ಲಿರುವ ಬಾವಿಯಲ್ಲಿ ಬಿರು ಬೇಸಿಗೆಯಲ್ಲೂ ನೀರು ಸಮೃದ್ಧವಾಗಿದೆ. ಇದು ಕಾರ್ಖಾನೆಗೆ ದಿನಕ್ಕೆ ಅಗತ್ಯವಿರುವ 2 ಲಕ್ಷ ಲೀಟರ್‌ಗಳನ್ನು ಸ್ವಯಂ ಉತ್ಪಾದಿಸುತ್ತದೆ, ವಾರ್ಷಿಕವಾಗಿ 20.65 ಲಕ್ಷ ನೀರಿನ ಬಿಲ್‌ನ್ನು ಉಳಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಗಾಲಿ ಕಾರ್ಖಾನೆಯಲ್ಲಿರುವ ತೆರೆದ ಬಾವಿ
ರೈಲ್ವೆ ಗಾಲಿ ಕಾರ್ಖಾನೆಯಲ್ಲಿರುವ ತೆರೆದ ಬಾವಿ

ಬೆಂಗಳೂರು: ನಿರಂತರ ಪರಿಸರ ಸ್ನೇಹಿ ಪದ್ಧತಿಗಳು ಮತ್ತು ಅದರ ತೆರೆದ ಬಾವಿಗಳ ಪುನರುಜ್ಜೀವನದಿಂದ ಯಲಹಂಕದಲ್ಲಿರುವ ರೈಲ್ವೆ ಗಾಲಿ ಕಾರ್ಖಾನೆ ಆವರಣದಲ್ಲಿರುವ ಬಾವಿಯಲ್ಲಿ ಬಿರು ಬೇಸಿಗೆಯಲ್ಲೂ ನೀರು ಸಮೃದ್ಧವಾಗಿದೆ. ಇದು ಕಾರ್ಖಾನೆಗೆ ದಿನಕ್ಕೆ ಅಗತ್ಯವಿರುವ 2 ಲಕ್ಷ ಲೀಟರ್‌ಗಳನ್ನು ಸ್ವಯಂ ಉತ್ಪಾದಿಸುತ್ತದೆ, ವಾರ್ಷಿಕವಾಗಿ 20.65 ಲಕ್ಷ ನೀರಿನ ಬಿಲ್‌ನ್ನು ಉಳಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ರೈಲ್ವೇಗಾಗಿ ಗಾಲಿ ಕಾರ್ಖಾನೆ ಪ್ರತಿದಿನ ಸರಾಸರಿ 600 ಚಕ್ರಗಳು, 250 ಆಕ್ಸಲ್‌ಗಳು ಮತ್ತು 250 ವೀಲ್ಹ್ ಸೆಟ್ ಗಳನ್ನು ಉತ್ಪಾದಿಸುತ್ತದೆ. 191 ಎಕರೆಗಳಲ್ಲಿ ಹರಡಿರುವ ವಿಸ್ತಾರವಾದ ಕಾರ್ಖಾನೆಯ ಎರಡು ಕಾರ್ಯಾಗಾರಗಳಲ್ಲಿ ತಂಪಾಗಿಸುವ ಉದ್ದೇಶಗಳಿಗಾಗಿ ಪ್ರತಿದಿನ ಲಕ್ಷಗಟ್ಟಲೆ ಲೀಟರ್ ಗಳಷ್ಟು ನೀರಿನ ಅಗತ್ಯವಿರುತ್ತದೆ, ಅದರಲ್ಲಿ ಒಂದು ಉಕ್ಕನ್ನು ಕರಗಿಸುತ್ತದೆ ಮತ್ತು 1,700 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಆಕ್ಸಲ್ ಘಟಕವು 1,100 ಡಿಗ್ರಿ ಸೆಲ್ಸಿಯಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಅದರ ಎರಡು ಕಾಲೋನಿಗಳಲ್ಲಿ ತನ್ನ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಕುಡಿಯುವ ಉದ್ದೇಶಕ್ಕಾಗಿ ದಿನಕ್ಕೆ 1 ಲಕ್ಷ ಲೀಟರ್ ಶುದ್ಧ ನೀರು ಬೇಕಾಗುತ್ತದೆ.

ರೈಲ್ವೆ ಗಾಲಿ ಕಾರ್ಖಾನೆಯಲ್ಲಿರುವ ತೆರೆದ ಬಾವಿ
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ: ಕುಡಿಯುವ ನೀರಿಗಾಗಿ ಕೆಆರ್‌ಎಸ್‌'ನಿಂದ ನೀರು ಬಿಡುಗಡೆ!

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರು, “1980 ರ ದಶಕದಲ್ಲಿ ಕಾರ್ಖಾನೆಯ ನಿರ್ಮಾಣದ ಸಮಯದಲ್ಲಿ ನಾಲ್ಕು ತೆರೆದ ಬಾವಿಗಳನ್ನು ತೋಡಲಾಯಿತು. ಅವುಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಕಾರ್ಖಾನೆಯಲ್ಲಿನ ಮಳೆನೀರಿನ ಒಳಚರಂಡಿ ಜಾಲವನ್ನು ಅದರೊಂದಿಗೆ ಸಂಪರ್ಕಿಸಲಾಗಿದೆ. ಕುತೂಹಲಕಾರಿವೆಂದರೆ, ಬಾವಿಗಳಿಗೆ ಕೆಲಸವನ್ನು ನಿರ್ವಹಿಸಿದ ಗುತ್ತಿಗೆದಾರರಾದ ಕಂದಸ್ವಾಮಿ, ದಾಮೋಧರ್, ಎಟ್ಕೋ ಮತ್ತು ಸೋಮಶೇಖರ್ ಅವರ ಹೆಸರನ್ನು ಇಡಲಾಗಿದೆ. ಇದಲ್ಲದೆ, 2020-2021 ರಲ್ಲಿ ಎರಡು ಸಣ್ಣ ತೆರೆದ ಬಾವಿಗಳನ್ನು ತೋಡಲಾಯಿತು. "ಪ್ರತಿದಿನ 2 ಲಕ್ಷ ಲೀಟರ್‌ಗಳವರೆಗೆ ಸಾಗುವ ಸಂಸ್ಕರಣೆಗೆ ಹೆಚ್ಚಿನ ನೀರಿನ ಅವಶ್ಯಕತೆಗಳನ್ನು ಕಂದಸ್ವಾಮಿ ಮತ್ತು ದಾಮೋಧರ್ ಬಾವಿಗಳಿಂದ ಸರಬರಾಜು ಮಾಡಲಾಗುತ್ತದೆ. ಎಟ್ಕೋ, ಸೋಮಶೇಖರ್ ಮತ್ತು ಕಾರ್ಖಾನೆಯ ಎಸ್‌ಟಿಪಿಯಂತಹ ಸಣ್ಣ ಬಾವಿಗಳು ಅವರ ಪ್ರಯತ್ನಗಳಿಗೆ ಪೂರಕವಾಗಿವೆ ಎಂದು ತಿಳಿಸಿದರು.

ಇದಲ್ಲದೆ, ದಿನಕ್ಕೆ 300 ಕಿಲೋ ಲೀಟರ್ ತ್ಯಾಜ್ಯ ನೀರನ್ನು ಸಂಸ್ಕರಿಸುವ ಒಳಚರಂಡಿ ಸಂಸ್ಕರಣಾ ಘಟಕವನ್ನು ಇತ್ತೀಚೆಗೆ ಸ್ಥಾಪನೆ ಮಾಡಲಾಯಿತು. ಇದರಿಂದ ಸಂಸ್ಕರಿಸಿದ ನೀರನ್ನು ತೋಟಗಾರಿಕೆ, RWF ಕ್ರೀಡಾಂಗಣದ ನೀರುಹಾಕುವುದು ಮತ್ತು ಇತರ ಕುಡಿಯಲು ಯೋಗ್ಯವಲ್ಲದ ಬಳಕೆಗಳಿಗೆ ಬಳಸಲಾಗುತ್ತದೆ. ಈ ಸ್ಥಾವರವನ್ನು 500 ಕೆಎಲ್‌ಡಿಗೆ ನವೀಕರಿಸಲು ಮತ್ತು ಪೂರ್ವ ಕಾಲೋನಿಯಲ್ಲಿ ಮತ್ತೊಂದು 100 ಕೆಎಲ್‌ಡಿ ಸ್ಥಾವರವನ್ನು ಸೇರಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.

ಈ ಉಪಕ್ರಮಗಳ ಮೂಲಕ RWF ವಾರ್ಷಿಕವಾಗಿ ಸುಮಾರು 20.65 ಲಕ್ಷ ರೂಪಾಯಿಗಳನ್ನು ಉಳಿಸುತ್ತದೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ. ನೀರಿನ ನಷ್ಟ ಮತ್ತು ಸೋರಿಕೆಯನ್ನು ಕಡಿಮೆ ಮಾಡಲು RWF ತನ್ನ ಆವರಣದಲ್ಲಿ ನೀರಿನ ಲೆಕ್ಕಪರಿಶೋಧನೆಗೆ ಮುಂದಾಗಿದೆ. ಅಂತರ್ಜಲ ಮಟ್ಟವನ್ನು ಮತ್ತಷ್ಟು ಹೆಚ್ಚಿಸಲು ಹೆಚ್ಚುವರಿ ಮಳೆನೀರು ಕೊಯ್ಲು ರಚನೆಗಳು ಅಥವಾ ಹೊಂಡಗಳಿಗೆ ಇದು ಹೋಗುತ್ತದೆ ಎಂದು ಅವರು ಹೇಳಿದರು. ಆರ್‌ಡಬ್ಲ್ಯೂಎಫ್ ಜನರಲ್ ಮ್ಯಾನೇಜರ್ ಆರ್ ರಾಜಗೋಪಾಲ್ ಮಾತನಾಡಿ, “ಪರಿಸರ ಸ್ನೇಹಿಯಾಗಿರುವುದು ಬೆಳವಣಿಗೆಯನ್ನು ಉಳಿಸಿಕೊಳ್ಳಲು ಮಾತ್ರ ಎಂದು ನಂಬುತ್ತೇವೆ. ಹೊಗೆ ತೆಗೆಯುವ ವ್ಯವಸ್ಥೆಗಳನ್ನು ಸ್ಥಾಪಿಸಿದ್ದೇವೆ, ವಿಸ್ತಾರವಾದ ಹಸಿರು ಬೆಲ್ಟ್ ಅನ್ನು ನಿರ್ವಹಿಸುತ್ತೇವೆ ಮತ್ತು ನೀರಿನ ಸಂರಕ್ಷಣಾ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com