ಮಂಡ್ಯ: ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಹಿಂಭಾಗದಲ್ಲಿಯೇ ಅಕ್ರಮ ಗರ್ಭಪಾತ; ನಾಲ್ವರ ಬಂಧನ

ಮಹಿಳೆಯೊಬ್ಬರಿಗೆ ಗರ್ಭಪಾತ ಮಾಡಿಸಿ ನಾಲ್ವರು ಭಾನುವಾರ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ ನಡೆದಿದೆ. ವಿಪರ್ಯಾಸವೆಂದರೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿರುವ ವೈದ್ಯಕೀಯ ಇಲಾಖೆ ಸಿಬ್ಬಂದಿ ವಸತಿ ಗೃಹದಲ್ಲಿಯೇ ಈ ಕೃತ್ಯವನ್ನು ನಡೆಸಲಾಗಿದೆ.
ಪಾಂಡವಪುರ ತಾಲ್ಲೂಕಿನಲ್ಲಿ ಅಕ್ರಮ ಗರ್ಭಪಾತದಲ್ಲಿ ತೊಡಗಿದ್ದ ನಾಲ್ವರನ್ನು ಪೊಲೀಸರು ಸೋಮವಾರ ವೈದ್ಯಕೀಯ ಕಚೇರಿ ಕ್ವಾರ್ಟರ್ಸ್‌ನಿಂದ ಬಂಧಿಸಿದ್ದಾರೆ.
ಪಾಂಡವಪುರ ತಾಲ್ಲೂಕಿನಲ್ಲಿ ಅಕ್ರಮ ಗರ್ಭಪಾತದಲ್ಲಿ ತೊಡಗಿದ್ದ ನಾಲ್ವರನ್ನು ಪೊಲೀಸರು ಸೋಮವಾರ ವೈದ್ಯಕೀಯ ಕಚೇರಿ ಕ್ವಾರ್ಟರ್ಸ್‌ನಿಂದ ಬಂಧಿಸಿದ್ದಾರೆ.
Updated on

ಮಂಡ್ಯ: ಮಹಿಳೆಯೊಬ್ಬರಿಗೆ ಗರ್ಭಪಾತ ಮಾಡಿಸಿ ನಾಲ್ವರು ಭಾನುವಾರ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ ನಡೆದಿದೆ. ವಿಪರ್ಯಾಸವೆಂದರೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿರುವ ವೈದ್ಯಕೀಯ ಇಲಾಖೆ ಸಿಬ್ಬಂದಿ ವಸತಿ ಗೃಹದಲ್ಲಿಯೇ ಈ ಕೃತ್ಯವನ್ನು ನಡೆಸಲಾಗಿದೆ.

ಖಚಿತ ಮಾಹಿತಿ ಕ್ವಾರ್ಟರ್ಸ್ ಮೇಲೆ ದಾಳಿ ನಡೆಸಿದ ಪೊಲೀಸರು ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕ ಆನಂದ್, ಆತನ ಪತ್ನಿ, ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಡಿ ಗ್ರೂಪ್ ನೌಕರರಾದ ಅಶ್ವಿನಿ, ಅಶ್ವಿನಿ ಅವರ ತಾಯಿ ಶಶಿಕಲಾ ಮತ್ತು ಬಾಬು ನರ್ಸಿಂಗ್ ಹೋಮ್‌ನ ನರ್ಸ್ ಆಗಿರುವ ಗಿರಿಜಾಂಬ ಎಂಬ ನಾಲ್ವರನ್ನು ಬಂಧಿಸಿದ್ದಾರೆ.

ಪ್ರಾಥಮಿಕ ತನಿಖೆಗಳು ವಸತಿ ಗೃಹದಲ್ಲಿ ಹಲವಾರು ತಿಂಗಳುಗಳಿಂದಲೂ ಹೆಣ್ಣು ಭ್ರೂಣ ಹತ್ಯೆಯ ಕುರಿತು ಮಾಹಿತಿ ಬಹಿರಂಗಗೊಳಿಸಿದೆ. ಸಾರ್ವಜನಿಕರ ಮಾಹಿತಿ ಮೇರೆಗೆ ಸಬ್‌ಇನ್ಸ್‌ಪೆಕ್ಟರ್ ಉಮೇಶ್ ನೇತೃತ್ವದ ಪೊಲೀಸರ ತಂಡ ಭಾನುವಾರ ಮಧ್ಯರಾತ್ರಿ ದಾಳಿ ನಡೆಸಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪಾಂಡವಪುರ ತಾಲ್ಲೂಕಿನಲ್ಲಿ ಅಕ್ರಮ ಗರ್ಭಪಾತದಲ್ಲಿ ತೊಡಗಿದ್ದ ನಾಲ್ವರನ್ನು ಪೊಲೀಸರು ಸೋಮವಾರ ವೈದ್ಯಕೀಯ ಕಚೇರಿ ಕ್ವಾರ್ಟರ್ಸ್‌ನಿಂದ ಬಂಧಿಸಿದ್ದಾರೆ.
ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ವರ್ಷ 2600 ಗರ್ಭಪಾತ ಪ್ರಕರಣ ದಾಖಲು; ತನಿಖೆಗೆ ಆದೇಶ

ಈಗಾಗಲೇ ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿರುವ ಮೈಸೂರಿನ ಸಾಲುಂಡಿ ನಿವಾಸಿ ಪುಷ್ಪಲತಾ ಎಂಬುವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಗಂಡು ಮಗುವಿಗಾಗಿ ಕುಟುಂಬದ ಒತ್ತಡದಿಂದ ಪುಷ್ಪಲತಾ ಲಿಂಗ ಪರೀಕ್ಷೆಗೆ ಒಳಗಾದರು, ಭ್ರೂಣವು ಹೆಣ್ಣು ಎಂದು ಪತ್ತೆಯಾದ ನಂತರ ಗರ್ಭಪಾತ ನಡೆಸಲಾಗಿತ್ತು. ಪೊಲೀಸರು ಪುಷ್ಪಲತಾ ಅವರನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಗರ್ಭಪಾತಕ್ಕೆ ಬಳಸಲಾದ ಟ್ಯಾಬ್ಲೆಟ್‌ಗಳು, ಸಿರಿಂಜ್‌ಗಳು ಮತ್ತು ಡ್ರಿಪ್ ಬಾಟಲಿಗಳು ಸೇರಿದಂತೆ ವೈದ್ಯಕೀಯ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಗರ್ಭಪಾತ ಮಾಡಿದ್ದು, ಮಹಿಳೆಗೆ ಚಿಕಿತ್ಸೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂಬತ್ತು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಆಂಬ್ಯುಲೆನ್ಸ್ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ ಆನಂದ್, ಪತ್ನಿ ಮತ್ತು ಅತ್ತೆಯೊಂದಿಗೆ ಆರೋಗ್ಯ ಇಲಾಖೆಯ ವಸತಿ ಗೃಹದಲ್ಲಿ ವಾಸವಾಗಿದ್ದರು.

ಪಾಂಡವಪುರ ತಾಲ್ಲೂಕಿನಲ್ಲಿ ಅಕ್ರಮ ಗರ್ಭಪಾತದಲ್ಲಿ ತೊಡಗಿದ್ದ ನಾಲ್ವರನ್ನು ಪೊಲೀಸರು ಸೋಮವಾರ ವೈದ್ಯಕೀಯ ಕಚೇರಿ ಕ್ವಾರ್ಟರ್ಸ್‌ನಿಂದ ಬಂಧಿಸಿದ್ದಾರೆ.
ಬಲವಂತವಾಗಿ 7 ಬಾರಿ ಗರ್ಭಪಾತ: ರಾಜಕಾರಣಿ ಸೀಮನ್ ವಿರುದ್ಧ ವಿಜಯಲಕ್ಷ್ಮಿಆರೋಪ; ಸ್ತ್ರೀರೋಗ ತಜ್ಞರಿಂದ ಪರೀಕ್ಷೆ

ನಿರ್ಜನ ಸ್ಥಳದಲ್ಲಿ ಲಿಂಗ ಪರೀಕ್ಷೆ ನಡೆಸಲಾಗಿದೆ ಎಂದು ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ. ಆನಂದ್ ಮತ್ತು ಅವನ ಸಹಚರರು ಗರ್ಭಪಾತದ ಮಾತ್ರೆಗಳನ್ನು ಒದಗಿಸಿದ್ದು, ಹೆರಿಗೆ ನೋವು ಪ್ರಾರಂಭವಾಗುವವರೆಗೆ ಖಾಸಗಿ ಲಾಡ್ಜ್‌ನಲ್ಲಿ ತಂಗುವಂತೆ ಹೇಳಿದ್ದಾರೆ. ನಂತರ ಗರ್ಭಪಾತ ಮಾಡಲು ಅವರನ್ನು ಕ್ವಾರ್ಟರ್ಸ್‌ಗೆ ಕರೆತರಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com