ಮಂಗಳೂರು: ತಣ್ಣೀರಬಾವಿ ಬೀಚ್ ಬಳಿ ಪ್ರಯಾಣಿಕರ ಹತ್ತಿಸಿಕೊಂಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ

ಮಂಗಳೂರಿನಲ್ಲಿ ಗುರುವಾರದಂದು ತಣ್ಣೀರಬಾವಿ ಬೀಚ್ ಬಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದ ಆಟೋ ಚಾಲಕನ ಮೇಲೆ ಕೆಲವು ಆಟೋ ರಿಕ್ಷಾ ಚಾಲಕರು ಹಲ್ಲೆ ನಡೆಸಿದ್ದಾರೆ.
Auto driver assualted
ಸಾಂದರ್ಭಿಕ ಚಿತ್ರ
Updated on

ಮಂಗಳೂರು: ಮಂಗಳೂರಿನಲ್ಲಿ ಗುರುವಾರದಂದು ತಣ್ಣೀರಬಾವಿ ಬೀಚ್ ಬಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದ ಆಟೋ ಚಾಲಕನ ಮೇಲೆ ಕೆಲವು ಆಟೋ ರಿಕ್ಷಾ ಚಾಲಕರು ಹಲ್ಲೆ ನಡೆಸಿದ್ದಾರೆ.

ಮೊಹಮ್ಮದ್ ಅರಾಫತ್ ಹಲ್ಲೆಗೊಳಗಾದ ಆಟೋ ಚಾಲಕನಾಗಿದ್ದು, ಈ ಬಗ್ಗೆ ಮಾತನಾಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು, 'ಅರಾಫತ್ ಕೆಲವು ಪ್ರಯಾಣಿಕರನ್ನು ಬೀಚ್ ಬಳಿ ಇಳಿಸಲು ಹೋದಾಗ ಈ ಘಟನೆ ನಡೆದಿದೆ.

Auto driver assualted
ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

ಅವರು ಪ್ರಯಾಣಿಕರನ್ನು ಇಳಿಸಿ ಹಿಂತಿರುಗುತ್ತಿದ್ದಾಗ, ಅಲ್ಲಿದ್ದ ಇತರೆ ಆಟೋ ಚಾಲಕರು ರಿಕ್ಷಾ ಚಾಲಕರು ವಿರೋಧಿಸಿ ಗಲಾಟೆ ಮಾಡಿದದರು ಎಂದು ಹೇಳಿದ್ದಾರೆ.

ಆದರೆ ಈ ವೇಳೆ ಸ್ಥಳೀಯ ಆಟೊ ಚಾಲಕರು ಅರಾಫತ್‌ನನ್ನು ಸಮಾಧಾನಪಡಿಸಿದ್ದಾರೆ. ಆ ಬಳಿಕವೂ ಅರಾಫತ್ ಸ್ಥಳದಲ್ಲಿ ಪ್ರಯಾಣಿಕರಿಗಾಗಿ ದೀರ್ಘಕಾಲ ಕಾಯುತ್ತಿದ್ದರು. ಇದರಿಂದ ವಾಗ್ವಾದ ನಡೆದು ಸ್ಥಳೀಯ ಮೂವರು ಆಟೋ ಚಾಲಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com