ಮನೆಯ ಛಾವಣಿ ಕುಸಿತ: ಬಾಗಲಕೋಟೆಯಲ್ಲಿ 2 ಮಕ್ಕಳು ಸಾವು, ಅಪಾಯದಿಂದ ಪಾರಾದ ವೃದ್ಧೆ

ಮನೆಯ ಛಾವಣಿ ಕುಸಿದ ಪರಿಣಾಮ ಬಾಗಲಕೋಟೆಯಲ್ಲಿ 2 ಮಕ್ಕಳು ಸಾವನ್ನಪ್ಪಿದ್ದು, ಮನೆಯಲ್ಲಿದ್ದ ವೃದ್ಧೆ ಅಪಾಯದಿಂದ ಪಾರಾಗಿದ್ದಾರೆ.
ಮನೆಯ ಛಾವಣಿ ಕುಸಿತ: ಬಾಗಲಕೋಟೆಯಲ್ಲಿ 2 ಮಕ್ಕಳು ಸಾವು, ಅಪಾಯದಿಂದ ಪಾರಾದ ವೃದ್ಧೆ
Updated on

ಬಾಗಲಕೋಟೆ: ಮನೆಯ ಛಾವಣಿ ಕುಸಿದ ಪರಿಣಾಮ ಬಾಗಲಕೋಟೆಯಲ್ಲಿ 2 ಮಕ್ಕಳು ಸಾವನ್ನಪ್ಪಿದ್ದು, ಮನೆಯಲ್ಲಿದ್ದ ವೃದ್ಧೆ ಅಪಾಯದಿಂದ ಪಾರಾಗಿದ್ದಾರೆ. ಬಾಗಲಕೋಟೆಯ ಇಳ್ಕಲ್ ತಾಲೂಕಿನ ಕಂದಗಲ್ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.

ಮನೆಯ ಛಾವಣಿ ಕುಸಿತ: ಬಾಗಲಕೋಟೆಯಲ್ಲಿ 2 ಮಕ್ಕಳು ಸಾವು, ಅಪಾಯದಿಂದ ಪಾರಾದ ವೃದ್ಧೆ
ರೆಮಲ್ ಚಂಡಮಾರುತ: 4 ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆ; ಭೂ ಕುಸಿತ, 36 ಜನರ ಸಾವು

ಗೀತಾ ಅಡಪಿಮಠ್ (14) ಆಕೆಯ ಕಿರಿಯ ಸಹೋದರ ರುದ್ರಯ್ಯ (10) ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ, ಮಕ್ಕಳು ಮನೆಯಲ್ಲಿ ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸುವುದರಲ್ಲಿ ನಿರತರಾಗಿದ್ದರು, ಆಗ ಮೇಲ್ಛಾವಣಿ ಕುಸಿದು ಮಕ್ಕಳು ಅವಶೇಷಗಳಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಅದೃಷ್ಟವಶಾತ್, ಈ ಘಟನೆ ನಡೆಯುವುದಕ್ಕೂ ಮುನ್ನ, ವೃದ್ಧೆ ಮನೆಯಿಂದ ಹೊರಗೆ ಕುಳಿತಿದ್ದರು.

ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಸ್ಥಳೀಯರು ಶವಗಳನ್ನು ಹೊರತೆಗೆದು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಘಟನೆ ನಡೆದಾಗ ಅವರ ಪೋಷಕರು ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು ಎಂದು ವರದಿಗಳು ತಿಳಿಸಿವೆ. ಶಾಸಕ ವಿಜಯಾನಂದ ಕಾಶಪ್ಪನವರ್ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com