ಕೈ ಕೊಟ್ಟ ಮುಂಗಾರು; ಬರಗಾಲ, ನೀರಿಗೆ ಕೊರತೆ: ಬೆಂಗಳೂರು ನಗರದ ಮುಂದಿಲ್ಲ 'ಪ್ಲಾನ್ ಬಿ'!

ನೀರಿನ ಅವಶ್ಯಕತೆ, ಲಭ್ಯತೆ ಮತ್ತು ಅವಲಂಬನೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಅತ್ಯಂತ ದುರ್ಬಲ ನಗರಗಳಲ್ಲಿ ಒಂದಾಗಿದೆ. ಇತ್ತೀಚಿಗೆ ತಲೆದೋರಿರುವ ಬರದಿಂದಾಗಿ ರಾಜ್ಯದ ರಾಜಧಾನಿಯಲ್ಲಿ ನೀರಿನ ಅಭಾವ ಹೊಂದಿದೆ. ಹಾಗಾದರೆ ನೀರಿನ ಕೊರತೆಯಾದರೆ ಏನು ಮಾಡುವುದು ಎಂದರೆ ಪರಿಸರ ಇಲಾಖೆಯ ಮುಂದೆ ಪ್ಲಾನ್ ಬಿ ಎರಡನೇ ಯೋಜನೆ ಇಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನೀರಿನ ಅವಶ್ಯಕತೆ, ಲಭ್ಯತೆ ಮತ್ತು ಅವಲಂಬನೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಅತ್ಯಂತ ದುರ್ಬಲ ನಗರಗಳಲ್ಲಿ ಒಂದಾಗಿದೆ. ಇತ್ತೀಚಿಗೆ ತಲೆದೋರಿರುವ ಬರದಿಂದಾಗಿ ರಾಜ್ಯದ ರಾಜಧಾನಿಯಲ್ಲಿ ನೀರಿನ ಅಭಾವ ಹೊಂದಿದೆ. ಹಾಗಾದರೆ ನೀರಿನ ಕೊರತೆಯಾದರೆ ಏನು ಮಾಡುವುದು ಎಂದರೆ ಪರಿಸರ ಇಲಾಖೆಯ ಮುಂದೆ ಪ್ಲಾನ್ ಬಿ ಎರಡನೇ ಯೋಜನೆ ಇಲ್ಲ.

ಬೆಂಗಳೂರು ಹೆಚ್ಚಾಗಿ ಕಾವೇರಿ ನೀರನ್ನು ಅವಲಂಬಿಸಿದೆ, ಇದನ್ನು 100 ಕಿಮೀ ದೂರದಿಂದ 540 ಮೀಟರ್ ಎತ್ತರಕ್ಕೆ ಪಂಪ್ ಮಾಡಲಾಗುತ್ತದೆ. ಈ ಕಾರಣದಿಂದಾಗಿ, ಇದು ಅತ್ಯಂತ ದುರ್ಬಲವಾಗಿದೆ. ಹೆಚ್ಚಿನ ಸಂಖ್ಯೆಯ ಒಳಚರಂಡಿ ಸಂಸ್ಕರಣಾ ಘಟಕಗಳನ್ನು (STP) ಹೊಂದಿದ್ದರೂ, ಈ ಘಟಕಗಳಿಂದ ನೀರಿನ ಬಳಕೆ ಕಡಿಮೆಯಾಗಿದೆ.

ಕೆರೆ ನೀರು ಕೂಡ ಬಳಕೆಯಾಗುತ್ತಿಲ್ಲ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಗಮನಿಸಿದರೆ, ಸರ್ಕಾರ ಮತ್ತು ಜನರು ನೀರಿನ ಪರ್ಯಾಯ ಮೂಲಗಳಿಗಾಗಿ ಪ್ಲಾನ್ ಬಿಯನ್ನು ಕಂಡುಕೊಳ್ಳಬೇಕು ಎಂದು ಪರಿಸರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. 

ಅಪಾರ್ಟ್‌ಮೆಂಟ್‌, ವಾಣಿಜ್ಯ ಸಂಸ್ಥೆಗಳು ಪ್ರತಿನಿತ್ಯ ಟ್ಯಾಂಕರ್‌ಗಳಲ್ಲಿ ನೀರು ಖರೀದಿಸುತ್ತಿವೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ನಗರದ ಹೊರವಲಯದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. 

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧ್ಯಕ್ಷ ರಾಮಪ್ರಸಾತ್ ಮನೋಹರ್, ನಗರದಲ್ಲಿ 33 ಸರ್ಕಾರಿ ಎಸ್‌ಟಿಪಿಗಳು ಕಾರ್ಯನಿರ್ವಹಿಸುತ್ತಿದ್ದು, 340 ಎಂಎಲ್‌ಡಿ ಪಂಪ್ ಮಾಡಲಾಗುತ್ತಿದೆ. 24 ಎಸ್‌ಟಿಪಿಗಳನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ನಗರಕ್ಕೆ 1450 ಎಂಎಲ್ ಡಿ ಕಾವೇರಿ ನೀರು ಸಿಗುತ್ತದೆ. ಕಾವೇರಿ ಹಂತ-5 ರ ಅಡಿಯಲ್ಲಿ ಬೆಂಗಳೂರಿಗೆ 775 ಎಂಎಲ್‌ಡಿ ಸಿಗುತ್ತದೆ, ಇದನ್ನು ಉಪನಗರಗಳ 110 ಹಳ್ಳಿಗಳಿಗೆ ಪಂಪ್ ಮಾಡಲಾಗುತ್ತದೆ. ನಗರವು 700-750 ಎಂಎಲ್ ಡಿ ಅಂತರ್ಜಲ ಬಳಸಲಾಗುತ್ತದೆ. ಬೆಂಗಳೂರಿನ ಅಗತ್ಯತೆಗಳನ್ನು ಪೂರೈಸಲು ಮಾರ್ಚ್‌ವರೆಗೆ ಪ್ರತಿ ತಿಂಗಳು 1.6 ಟಿಎಂಸಿ ನೀರು ಮತ್ತು ಏಪ್ರಿಲ್‌ನಿಂದ 2.42 ಟಿಎಂಸಿ ನೀರು ಕಾಯ್ದಿರಿಸುವಂತೆ ಬಿಡಬ್ಲ್ಯುಎಸ್ ಎಸ್ ಬಿ ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಬರೆದಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳುತ್ತಾರೆ. 

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಎಸ್ ಟಿಪಿಗಳನ್ನು ಸ್ಥಾಪಿಸಲು ಖಾಸಗಿ ಸಂಸ್ಥೆಗಳಿಂದ 302 ಅರ್ಜಿಗಳನ್ನು ತೆರವುಗೊಳಿಸಲಾಗಿದೆ. ಬಿಬಿಎಂಪಿ ಪ್ರಕಾರ, ನಗರದಲ್ಲಿ 210 ಕೆರೆಗಳಿದ್ದು, 1 ಟಿಎಂಸಿ ಅಡಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.

ವೆಲ್ ಲ್ಯಾಬ್ಸ್‌ನ ಅರ್ಬನ್ ವಾಟರ್ ಪ್ರೋಗ್ರಾಮ್‌ನ ವ್ಯವಸ್ಥಾಪಕ ಪಾಲುದಾರ ಶ್ರೇಯಾ ನಾಥ್ ಮಾತನಾಡಿ, ಬೆಂಗಳೂರು ಅತಿ ಹೆಚ್ಚು ವಿಕೇಂದ್ರೀಕೃತ ಎಸ್‌ಟಿಪಿಗಳನ್ನು ಹೊಂದಿದೆ. ಕೆಎಸ್ ಪಿಸಿಬಿ ಮಾಸ್ಟರ್ ಪಟ್ಟಿಯ ಪ್ರಕಾರ, ಸುಮಾರು 3,500 ಎಸ್ ಟಿಪಿ ಅರ್ಜಿಗಳನ್ನು ಮಾಡಲಾಗಿದೆ. ಅವುಗಳ ಸಿಂಧುತ್ವವನ್ನು ಮೌಲ್ಯಮಾಪನ ಮಾಡಲಾಗುತ್ತಿದೆ.

ಚೆನ್ನೈಯಲ್ಲಿ ಸುಮಾರು 1,000, ಹೈದರಾಬಾದ್ 800 ಮತ್ತು ಪುಣೆ 600 ಎಸ್‌ಟಿಪಿಗಳನ್ನು ಹೊಂದಿದೆ ಎಂದು ಅವರು ಹೇಳಿದರು. 20 ಕ್ಕೂ ಹೆಚ್ಚು ಯೂನಿಟ್‌ಗಳ ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ ಎಸ್‌ಟಿಪಿಗಳನ್ನು ಸ್ಥಾಪಿಸುವುದು ಮತ್ತು ಸಂಸ್ಕರಿಸಿದ ನೀರಿನ ಬಳಕೆಯನ್ನು ಕಡ್ಡಾಯಗೊಳಿಸಿರುವುದರಿಂದ ಬೆಂಗಳೂರು ಅತಿ ಹೆಚ್ಚು ಸಂಖ್ಯೆಯನ್ನು ಹೊಂದಿದೆ.

ಅಲ್ಲದೆ, ಲ್ಯಾಬ್ಸ್ ಎಸ್ ಟಿಪಿಗಳ ಸ್ಥಿತಿಯನ್ನು ನಿರ್ಣಯಿಸುತ್ತಿದೆ. 2019 ರ ನೀತಿ ಆಯೋಗದ ಸಂಯೋಜಿತ ನೀರು ನಿರ್ವಹಣಾ ಸೂಚ್ಯಂಕ ವರದಿಯನ್ನು ಅವರು ಸೂಚಿಸಿದರು ಮತ್ತು ಬೆಂಗಳೂರು ಅತಿಯಾಗಿ ಶೋಷಿತ ವರ್ಗದ ಅಡಿಯಲ್ಲಿ ಬರುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com