ಜಾತಿ ಗಣತಿ ವರದಿ ನಿಖರ-ವೈಜ್ಞಾನಿಕ; ಟೀಕೆಗಳು ಆಧಾರರಹಿತ: ಕಾಂತರಾಜ್

ಜಾತಿಗಣತಿ ಕುರಿತ ಸಮೀಕ್ಷೆಯನ್ನು ತರಾತುರಿಯಲ್ಲಿ ನಡೆಸಿಲ್ಲ. ಕ್ಲಿನಿಕಲ್ ನಿಖರತೆಯೊಂದಿಗೆ ನಡೆಸಲಾಗಿದೆ.
H Kantharaj
ಕಾಂತರಾಜ್
Updated on

ಬೆಂಗಳೂರು: ಜಾತಿ ಗಣತಿ ವರದಿ ನಿಖರ-ವೈಜ್ಞಾನಿಕವಾಗಿದ್ದು, ವರದಿ ಕುರಿತು ವಿರೋಧ ಪಕ್ಷ ಬಿಜೆಪಿ ಹಾಗೂ ಕೆಲ ಸಮುದಾಯಗಳ ಆರೋಪ ಆಧಾರರಹಿತವಾಗಿವೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜ್ ಅವರು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪ್ರಸ್ತುತ ರಾಜ್ಯದಲ್ಲಿ ಎದ್ದಿರುವ ಜಾತಿ ಗಣತಿ ವಿವಾದ ಕುರಿತು ಮಾತನಾಡಿದರು. ಈ ವೇಳೆ ವರದಿಯನ್ನು ಸಮರ್ಥಿಸಿಕೊಂಡರು.

ಜಾತಿಗಣತಿ ಕುರಿತ ಸಮೀಕ್ಷೆಯನ್ನು ತರಾತುರಿಯಲ್ಲಿ ನಡೆಸಿಲ್ಲ. ಕ್ಲಿನಿಕಲ್ ನಿಖರತೆಯೊಂದಿಗೆ ನಡೆಸಲಾಗಿದೆ. ಅರ್ಹ ಸರ್ಕಾರಿ ನೌಕರರು, ಹತ್ತಾರು ಸಾವುರ ಮೇಲ್ವಿಚಾರಕರು ಸೇರಿದಂತೆ ಒಟ್ಟು 1.35 ಲಕ್ಷ ಗಣತಿದಾರರು. 1.6 ಲಕ್ಷ ಮಾನವ ಶಕ್ತಿ ನೇಮಕದೊಂದಿಗೆ ನಡೆಸಲಾಗಿದೆ. ಅನೇಕರು ಅನುಭವಿ ಶಾಲಾ ಶಿಕ್ಷಕರಾಗಿದ್ದರು. ಐಐಎಂ ಮತ್ತು ಇತರೆ ಪ್ರಮುಖ ಸಂಸ್ಥೆಗಳ ತಜ್ಞರು ಕೂಡ ಸಮೀಕ್ಷೆಯಲ್ಲಿದ್ದರು ಎಂದು ಹೇಳಿದ್ದಾರೆ.

ಗಣತಿದಾರರು ಕೆಲ ಮನೆಗಳಿಗೆ ಎಂದಿಗೂ ಭೇಟಿ ನೀಡಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ತಂಡಗಳು ಸುಮಾರು ಒಂದು ತಿಂಗಳ ಕಾಲ ಕರ್ನಾಟಕದ ಪ್ರತಿಯೊಂದು ಮೂಲೆ ಮೂಲೆಯಲ್ಲೂ ಸಮೀಕ್ಷೆ ನಡೆಸಿದೆ. ಬೀಗ ಹಾಕಿದ್ದ ಮನೆಗಳಿಗೆ ಮೂರು ಬಾರಿ ಭೇಟಿ ನೀಡಿದ್ದೇವೆ. ಸಮೀಕ್ಷೆ ಕುರಿತು ಟಿವಿ ಮತ್ತು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದೇವೆ. ಹಲವಾರು ನಾಗರಿಕರು ನಮಗೆ ಕರೆ ಮಾಡಿ ತಮ್ಮ ವಿವರಗಳನ್ನು ನೀಡಿದ್ದಾರೆ. ನಾವು ಇನ್ನೇನು ಮಾಡಲು ಸಾಧ್ಯ? ವರ್ಷಗಳ ಬಳಿಕ ಯಾರೂ ನಮ್ಮ ಮನೆಗೆ ಬರಲಿಲ್ಲ ಎಂದು ಹೇಳಿದರೆ ಹೇಗೆ? ಇದಕ್ಕೆ ನಾವು ಜವಾಬ್ದಾರರಲ್ಲ ಎಂದು ತಿಳಿಸಿದರು.

ವರದಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆಯಾಗಿರುವುದರ ಕುರಿತು ಪ್ರತಿಕ್ರಿಯಿಸಿ, ಸಾಕಷ್ಟು ಮಂದಿ ಜಾತಿ ಮತ್ತು ಉಪಜಾತಿ ಎಂದರೂ ನಾವು ಅದನ್ನು ಪರಿಗಣಿಸಿದ್ದೇವೆ. ವಾದ ಮಾಡಲು, ಅದನ್ನು ಸರಿಪಡಿಸಲು ನಾವು ಯಾರೂ ಅಲ್ಲ. ಮೀನುಗಾರ ಸಮುದಾಯ ತಮ್ಮನ್ನು ಗಂಗಾಮತಸ್ಥ, ಬೆಸ್ತ, ಕೋಲಿ, ಮೊಗವೀರ ಮತ್ತು ಇತರ ಜಾತಿಗಳ ಅಡಿಯಲ್ಲಿ ತಮ್ಮನ್ನು ಪಟ್ಟಿ ಮಾಡಲಾಗಿದೆ ಎಂದು ಹೇಳುತ್ತಾರೆ. ಜನರು ಹೇಳಿದನ್ನು ನಾವು ದಾಖಲಿಸಿದ್ದೇವೆಂದು ಹೇಳಿದರು.

2015ರ ನಂತರ ಜನಿಸಿದವರನ್ನು ಸಮೀಕ್ಷೆಯಿಂದ ಹೊರಗಿಡಲಾಗಿದೆ ಎಂಬುದರ ಕುರಿತು ಮಾತನಾಡಿ. ಅಲ್ಲಿನ ವರ್ಷದವರೆದೆ ಜನಿಸಿದ ಎಲ್ಲರನ್ನೂ ಸಮೀಕ್ಷಾ ವರದಿಯಲ್ಲಿ ಸೇರಿಸಲಾಗಿದೆ. ಅತ್ಯಂತ ಹಿಂದುಳಿದವರನ್ನು ಗುರುತಿಸುವುದು ಮತ್ತು ಅವರಿಗೆ ಸಾಮಾಜಿಕ ನ್ಯಾಯ ಸಿಗುವಂತೆ ಮಾಡುವುದು ಈ ವರದಿಯ ಏಕೈಕ ಉದ್ದೇಶವಾಗಿದೆ. ನಾವು ಆಯೋಗದ ಮಾಜಿ ಅಧ್ಯಕ್ಷರನ್ನು ಸಂಪರ್ಕಿಸಿದ್ದೆವು. ಅರ್ಹ ಸಂಸ್ಥೆಗಳಿಂದ ನಮ್ಮ ಪ್ರಶ್ನಾವಳಿಯನ್ನು ಪರಿಶೀಲಿಸಿದ್ದೇವೆ. ಇದು ಕೇವಲ ವರದಿಯಲ್ಲ. ಸಮಾನ ಆಡಳಿತಕ್ಕಿರುವ ಒಂದು ನೀಲನಕ್ಷೆ ಎಂದು ಹೇಳಿದ್ದಾರೆ.

H Kantharaj
ಹಿಂದೂಗಳಂತೆ ಮುಸ್ಲಿಮರಲ್ಲಿ 93 ಜಾತಿ, ಉಪ ಜಾತಿಗಳಿವೆ: ಹಿಂದುಳಿದ ವರ್ಗಗಳ ಆಯೋಗದ ಮುಖ್ಯಸ್ಥ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com