3 ತಿಂಗಳಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ 87 ಕಾನೂನುಬಾಹಿರ ಬಂಧನದ ದೂರು ದಾಖಲು

SHRC ಯ ಮಾಹಿತಿಯ ಪ್ರಕಾರ, 2025 ರಲ್ಲಿ 5,341 ಹೊಸ ಪ್ರಕರಣಗಳು ಮತ್ತು 271 ಸ್ವಯಂಪ್ರೇರಿತ ಪ್ರಕರಣಗಳು ದಾಖಲಾಗಿವೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬಂಧನದ ವಿರುದ್ಧ ಕಠಿಣ ನಿಯಮಗಳು ಜಾರಿಯಲ್ಲಿದ್ದರೂ, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಕೇವಲ ಮೂರು ತಿಂಗಳಲ್ಲಿ 'ಕಾನೂನುಬಾಹಿರ ಬಂಧನ'ದ 87 ದೂರುಗಳು ದಾಖಲಾಗಿವೆ.

ಈ ವರ್ಷ ರಾಜ್ಯ ಮಾನವ ಹಕ್ಕುಗಳ ಆಯೋಗ ದಾಖಲಿಸಿದ ಒಟ್ಟು 9,556 ಪ್ರಕರಣಗಳಲ್ಲಿ, ಶೇಕಡಾ 78 ಕ್ಕಿಂತ ಹೆಚ್ಚು ಪ್ರಕರಣಗಳು ಪೊಲೀಸ್ ಇಲಾಖೆ ಮತ್ತು ಅದರ ದೌರ್ಜನ್ಯದ ವಿರುದ್ಧವಾಗಿವೆ. SHRC ಯ ಮಾಹಿತಿಯ ಪ್ರಕಾರ, 2025 ರಲ್ಲಿ 5,341 ಹೊಸ ಪ್ರಕರಣಗಳು ಮತ್ತು 271 ಸ್ವಯಂಪ್ರೇರಿತ ಪ್ರಕರಣಗಳು ದಾಖಲಾಗಿವೆ. ಒಟ್ಟು 2024 ರಿಂದ ಬಾಕಿ ಇರುವ 3,944 ಪ್ರಕರಣಗಳು ಸೇರಿವೆ. ಒಟ್ಟು 6,664 ಪ್ರಕರಣಗಳಲ್ಲಿ ಮಾರ್ಚ್ 2025 ರ ವೇಳೆಗೆ 6,892 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, 2,892 ಪ್ರಕರಣಗಳು ಬಾಕಿ ಉಳಿದಿವೆ.

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಅತಿ ಹೆಚ್ಚು ದೂರುಗಳು ಬಂದಿವೆ. 2024 ರಲ್ಲಿ ಮಾತ್ರ, SHRC ಕಾನೂನುಬಾಹಿರ ಬಂಧನಕ್ಕೆ ಸಂಬಂಧಿಸಿದ 153 ಪ್ರಕರಣಗಳನ್ನು ದಾಖಲಿಸಿದೆ.

ದಿ ನ್ಯೂ ಇಂಡಿಯಮ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಆಯೋಗದ ಕಾರ್ಯಕಾರಿ ಅಧ್ಯಕ್ಷ ಟಿ. ಶಾಮ್ ಭಟ್, ಸಮಸ್ಯೆಗಳನ್ನು ಪರಿಹರಿಸಲು ಆಯೋಗವು ರಾಜ್ಯಾದ್ಯಂತ 21 ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ, ಆದ್ದರಿಂದ ದೂರುದಾರರು ಇನ್ನು ಮುಂದೆ ಬೆಂಗಳೂರಿಗೆ ಪ್ರಯಾಣಿಸಬೇಕಾಗಿಲ್ಲ. ಈ ವರ್ಷ, ಆಯೋಗವು ಸರ್ಕಾರವು ಸಂತ್ರಸ್ತರಿಗೆ 2.5 ಕೋಟಿ ರೂ.ಗಳಿಗಿಂತ ಹೆಚ್ಚಿನ ಪರಿಹಾರವನ್ನು ನೀಡಬೇಕು ಮತ್ತು ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿದೆ.

Representational image
ಪ್ರಿಯಕರನೊಂದಿಗೆ ಪತ್ನಿ ವಿವಾಹ: ಇನ್‌ಸ್ಟಾಗ್ರಾಮ್‌ ವಿಡಿಯೋ ನೋಡಿ ಪತಿ ಶಾಕ್; ದೂರು ದಾಖಲು

ಅಧಿಕಾರಿಗಳು ಹಾಸ್ಟೆಲ್‌ಗಳು, ಬಸ್ ನಿಲ್ದಾಣಗಳು, ಜಿಲ್ಲಾ ಕಾರಾಗೃಹಗಳು ಮತ್ತು ಸರ್ಕಾರಿ ಆಸ್ಪತ್ರೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು. ಯಾವುದೇ ಮಾನವ ಹಕ್ಕುಗಳ ಉಲ್ಲಂಘನೆಯನ್ನು ವರದಿ ಮಾಡಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.

ಬೆಂಗಳೂರು ಮೂಲದ ಕಾರ್ಯಕರ್ತ ಮತ್ತು ವಕೀಲ ವಿನಯ್ ಶ್ರೀನಿವಾಸ ಅವರು, ಕಾನೂನುಬಾಹಿರ ಬಂಧನದ ಸಾಮಾನ್ಯ ಸಂತ್ರಸ್ತರಲ್ಲಿ ವಲಸೆ ಕಾರ್ಮಿಕರು ಸೇರಿದ್ದಾರೆ ಎಂದು ಹೇಳಿದರು. ಅಂತಹ ಬಂಧನದ ವಿರುದ್ಧ ಕಠಿಣ ನಿಯಮಗಳಿದ್ದರೂ, ಅವುಗಳನ್ನು ಹೆಚ್ಚಾಗಿ ಪಾಲಿಸಲಾಗುತ್ತಿಲ್ಲ. ಹೆಚ್ಚಿನ ಜನರಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿದಿಲ್ಲ ಮತ್ತು ಪೊಲೀಸರ ವಿರುದ್ಧ ದೂರು ನೀಡಲು ಭಯಪಡುತ್ತಾರೆ.

ಇದಲ್ಲದೆ, ಯಾರನ್ನು ಸಂಪರ್ಕಿಸಬೇಕು ಅಥವಾ ಹೇಗೆ ಪ್ರಕರಣ ದಾಖಲಿಸಬೇಕು ಎಂದು ಅವರಿಗೆ ತಿಳಿದಿರುವುದಿಲ್ಲ ಎಂದು ಹೇಳಿದ್ದಾರೆ. ಹೆಚ್ಚಿನ ಸಂತ್ರಸ್ತರು ಬಡ ಅಥವಾ ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದವರಾಗಿರುವುದರಿಂದ ಮತ್ತು ಹೆಚ್ಚಾಗಿ ಹಣಕ್ಕಾಗಿ ಗುರಿಯಾಗಿರುವುದರಿಂದ, ಹಿರಿಯ ಪೊಲೀಸ್ ಅಧಿಕಾರಿಗಳು ಕೆಳ ಹಂತದ ಸಿಬ್ಬಂದಿಗಳ ಮೇಲೆ ಹೆಚ್ಚಿನ ಮೇಲ್ವಿಚಾರಣೆ ನಡೆಸಬೇಕಾಗಿದೆ ಎಂದು ಅವರು ಗಮನಸೆಳೆದರು.

ಯಾವುದೇ ಅಮಾಯಕ ವ್ಯಕ್ತಿಯನ್ನು ಬಂಧಿಸಿ ಹಣಕ್ಕಾಗಿ ಬೇಡಿಕೆ ಇಟ್ಟರೆ, ಜವಾಬ್ದಾರಿಯುತ ಅಧಿಕಾರಿಯನ್ನು ಶಿಕ್ಷಿಸಬೇಕು" ಎಂದು ನಗರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಸತ್ಯವನ್ನು ಬಹಿರಂಗಪಡಿಸಲು ಮತ್ತು ಅಪರಾಧವನ್ನು ಅರ್ಥಮಾಡಿಕೊಳ್ಳಲು ಪೊಲೀಸರು ಕಟ್ಟುನಿಟ್ಟಾಗಿ ಕಾನೂನು ಪ್ರಕಾರ ಹೋಗಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com