representational image
ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿನ ಶೇ. 23ಕ್ಕೂ ಹೆಚ್ಚು ಭೂ ದಾಖಲೆಗಳು ಮೃತ ಮಾಲೀಕರ ಹೆಸರಿನಲ್ಲಿ!

ಕಂದಾಯ ಇಲಾಖೆಯು 2.25 ಕೋಟಿ ಭೂಮಾಲೀಕರ ಆಧಾರ್ ಸಂಖ್ಯೆಯನ್ನು ಅವರ ಆರ್‌ಟಿಸಿಗಳೊಂದಿಗೆ ಜೋಡಿಸುವುದನ್ನು ಪೂರ್ಣಗೊಳಿಸಿದೆ.
Published on

ಬೆಂಗಳೂರು: ಭೂಮಿ ಹಕ್ಕುಗಳು, ಹಿಡುವಳಿ ಮತ್ತು ಬೆಳೆಗಳ ದಾಖಲೆ (ಆರ್‌ಟಿಸಿ) ಯೊಂದಿಗೆ ಆಧಾರ್ ಲಿಂಕ್ ಮಾಡುವ ಅಭಿಯಾನವನ್ನು ರಾಜ್ಯ ಸರ್ಕಾರ ಆರಂಭಿಸಿದೆ, ಇದೇ ವೇಳೆ ಭೂ ಮಾಲೀಕತ್ವಕ್ಕೆ ಸಂಬಂಧಿಸಿದ ಶೇ. 23% ಕ್ಕಿಂತ ಹೆಚ್ಚು ದಾಖಲೆಗಳು ಮೃತ ಮಾಲಿಕರ ಹೆಸರಿನಲ್ಲಿವೆ ಎಂದು ತಿಳಿದು ಬಂದಿದೆ.

ಮೇ ಅಂತ್ಯದ ವೇಳೆಗೆ ಸರ್ಕಾರವು ಪಿತ್ರಾರ್ಜಿತ ದಾಖಲೆ ಅಭಿಯಾನವನ್ನು ಪ್ರಾರಂಭಿಸುತ್ತದೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ, 4.20 ಕೋಟಿ ಭೂ ಮಾಲೀಕರು ಅವರ ಆಧಾರ್ ಸಂಖ್ಯೆಯನ್ನು RTC ಗಳೊಂದಿಗೆ ಲಿಂಕ್ ಮಾಡಬೇಕಾಗಿದೆ.

ಕಂದಾಯ ಇಲಾಖೆಯು 2.25 ಕೋಟಿ ಭೂಮಾಲೀಕರ ಆಧಾರ್ ಸಂಖ್ಯೆಯನ್ನು ಅವರ ಆರ್‌ಟಿಸಿಗಳೊಂದಿಗೆ ಜೋಡಿಸುವುದನ್ನು ಪೂರ್ಣಗೊಳಿಸಿದೆ. ಅವರಲ್ಲಿ 52.40 ಲಕ್ಷ ಮಾಲೀಕರು ಸಾವನ್ನಪ್ಪಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳಿದ್ದು, 5.61 ಲಕ್ಷ ಮಾಲೀಕರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ, ನಂತರದ ಸ್ಥಾನದಲ್ಲಿ 4.7 ಲಕ್ಷ ಮಾಲೀಕರೊಂದಿಗೆ ಬೆಳಗಾವಿ, 3.7 ಲಕ್ಷ ಮಂಡ್ಯ ಮತ್ತು ಕೊಡಗು ಮತ್ತು ಕೋಲಾರದಲ್ಲಿ ತಲಾ 2.8 ಲಕ್ಷ ದಾಖಲೆಗಳು ಸತ್ತ ಮಾಲೀಕರ ಹೆಸರಲ್ಲಿಯೇ ಮುಂದುವರಿಯುತ್ತಿವೆ.

representational image
ಭೂ ದಾಖಲೆ, ಆಡಿಟ್: ಕಂದಾಯ ಇಲಾಖೆಯಿಂದ ಹೊಸ ಸಾಪ್ಟ್ ವೇರ್ ಅಭಿವೃದ್ಧಿ!

4.2 ಕೋಟಿ ಮಾಲೀಕರ ಆಧಾರ್ ಸಂಖ್ಯೆಯನ್ನು ಆರ್‌ಟಿಸಿಯೊಂದಿಗೆ ಲಿಂಕ್ ಮಾಡಿದರೆ ಸತ್ತ ಭೂ ಮಾಲೀಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಭೂಮಾಲೀಕನ ಮರಣದ ನಂತರ, ಭೂಮಿಯನ್ನು ಅವನ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ವರ್ಗಾಯಿಸಬೇಕು. ಸರ್ಕಾರ ಗ್ರಾಮ ಅದಾಲತ್‌ಗಳನ್ನು ಆರಂಭಿಸಿದ್ದು, ನ್ಯಾಯಾಲಯದಲ್ಲಿ ಇಲ್ಲದ ಪ್ರಕರಣಗಳನ್ನು ಕಂದಾಯ ಇಲಾಖೆಯ ನಿಯೋಜಿತ ಅಧಿಕಾರಿ ವಿಲೇವಾರಿ ಮಾಡುತ್ತಾರೆ.

ಹಕ್ಕುಗಳ ದಾಖಲೆ, ಹಿಡುವಳಿ ಮತ್ತು ಬೆಳೆಗಳು ಇನ್ನೂ ಸತ್ತ ವ್ಯಕ್ತಿಗಳ ಹೆಸರಿನಲ್ಲಿರುವುದರಿಂದ (ಹೆಚ್ಚಾಗಿ ಪೋಷಕರು), ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಪರಿಹಾರ ಅಥವಾ ಬ್ಯಾಂಕ್‌ಗಳಿಂದ ಸಾಲ ಸೇರಿದಂತೆ ಅನೇಕ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com