KSRTC ಸಿಬ್ಬಂದಿಗಳ ಸ್ವಾಭಾವಿಕ ಮರಣ: ಪರಿಹಾರ ಹಣ ದುಪ್ಪಟ್ಟು ನಿಗದಿ; ಸೆಪ್ಟೆಂಬರ್ 1 ರಿಂದ ಜಾರಿ

ಸೆಪ್ಟೆಂಬರ್ 1 ರಿಂದ, ಮೃತ ಸಿಬ್ಬಂದಿ ಕುಟುಂಬಗಳು 20 ಲಕ್ಷ ರೂ.ಗಳನ್ನು ಪಡೆಯಲಿದ್ದಾರೆ. KSRTC ಈಗಾಗಲೇ ಆಕಸ್ಮಿಕ ಸಾವುಗಳಿಗೆ ಒದಗಿಸುವ 1 ಕೋಟಿ ನೀಡುತ್ತಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಅಪಘಾತಗಳನ್ನು ಹೊರತುಪಡಿಸಿ ಇತರ ಕಾರಣಗಳಿಂದ ಸಾವನ್ನಪ್ಪುವ ನೌಕರರ ಕುಟುಂಬಸ್ಥರಿಗೆ ನೀಡಲಾಗುವ ಪರಿಹಾರ ಹಣವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದ್ವಿಗುಣಗೊಳಿಸಿದೆ.

ಸೆಪ್ಟೆಂಬರ್ 1 ರಿಂದ, ಮೃತ ಸಿಬ್ಬಂದಿ ಕುಟುಂಬಗಳು 20 ಲಕ್ಷ ರೂ.ಗಳನ್ನು ಪಡೆಯಲಿದ್ದಾರೆ. ನಿಗಮದ ಪರಿಷ್ಕೃತ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿಯಲ್ಲಿ 14 ಲಕ್ಷ ರೂ.ಗಳು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿಂದ 6 ಲಕ್ಷ ರೂ. ಹಣವನ್ನು ಪರಿಹಾರವಾಗಿ ನೀಡಲಾಗುತ್ತದೆ. KSRTC ಈಗಾಗಲೇ ಆಕಸ್ಮಿಕ ಸಾವುಗಳಿಗೆ ಒದಗಿಸುವ 1 ಕೋಟಿ ರೂ.ಗಳ ವಿಮಾ ರಕ್ಷಣೆಯ ಜೊತೆಗೆ, ಸರ್ಕಾರಿ ಸ್ವಾಮ್ಯದ ನಿಗಮಗಳಲ್ಲಿ ನೌಕರರ ಕಲ್ಯಾಣಕ್ಕಾಗಿ ಹೊಸ ಮಾನದಂಡ ರೂಪಿಸಿದೆ.

ಅಕ್ಟೋಬರ್ 2023 ರಲ್ಲಿ, ಹೃದಯಾಘಾತ ಮತ್ತು ಮೂತ್ರಪಿಂಡ ವೈಫಲ್ಯದಿಂದ ಕ್ಯಾನ್ಸರ್ ವರೆಗೆ ಆಕಸ್ಮಿಕವಲ್ಲದ ಸಾವುಗಳಿಗೆ ಪರಿಹಾರವನ್ನು 3 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಲಾಯಿತು. ಅಂದಿನಿಂದ, 157 ಕುಟುಂಬಗಳಿಗೆ ಪರಿಹಾರ ಸಿಕ್ಕಿದೆ. ಈಗ, 20 ಲಕ್ಷ ರೂ.ಗಳಿಗೆ ಏರಿಕೆಯಾಗಿರುವುದು KSRTC ಕಾರ್ಮಿಕರಿಗೆ "ಐತಿಹಾಸಿಕ ಕ್ಷಣ" ಎಂದು ಹೇಳಲಾಗುತ್ತಿದೆ.

ನಮ್ಮ ಕೆಎಸ್‌ಆರ್‌ಟಿಸಿಯಲ್ಲಿ 33,000 ಸಿಬ್ಬಂದಿ ಇದ್ದಾರೆ ಮತ್ತು ಪ್ರತಿ ವರ್ಷ 35 ರಿಂದ 50 ಅಪಘಾತರಹಿತ ಸಾವುಗಳು ಸಂಭವಿಸುತ್ತವೆ. ಈ ಹಿಂದೆ ಕಾರ್ಮಿಕ ಆಯುಕ್ತರಾಗಿ ಸೇವೆ ಸಲ್ಲಿಸಿರುವುದರಿಂದ, ಕುಟುಂಬಗಳು ಅನುಭವಿಸುವ ನೋವು ನನಗೆ ತಿಳಿದಿದೆ. ಈ ಪರಿಷ್ಕರಣೆಯು ಅವರಿಗೆ ಘನತೆ ಮತ್ತು ಭದ್ರತೆ ಒದಗಿಸುತ್ತದೆ. ಈ ನಿರ್ಧಾರ ನೌಕರರ ಕಲ್ಯಾಣ ಕ್ರಮವೆಂದು ಪ್ರಶಂಸಿಸಲಾಗುತ್ತಿದೆ, ಇದರಿಂದಾಗಿ ನೌಕರರ ಕುಟುಂಬ ಸಮಸ್ಯೆಯಲ್ಲಿ ಸಿಲುಕಲು ಬಿಡುವುದಿಲ್ಲ ಎಂದು ಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಸೈದ್ ತಿಳಿಸಿದ್ದಾರೆ.

Representational image
KSRTC ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗರಿ: 504 ಕೋಟಿ ಮಹಿಳಾ ಮಣಿಗಳ ಪ್ರಯಾಣ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com