ಮೈಸೂರು: ಲಾಡ್ಜ್ನಲ್ಲಿ ಗೃಹಿಣಿ ಬರ್ಬರ ಹತ್ಯೆ; ಬಾಯಿಗೆ 'ಜಿಲೆಟಿನ್ ಕಡ್ಡಿ' ಇಟ್ಟು ಸ್ಪೋಟಿಸಿದ್ನಾ ಪ್ರಿಯಕರ!
ಮೈಸೂರು: ಮೈಸೂರಿನ ಸಾಲಿಗ್ರಾಮನ ಭೇರ್ಯ ಗ್ರಾಮದ ಲಾಡ್ಜ್ವೊಂದರಲ್ಲಿ 20 ವರ್ಷದ ವಿವಾಹಿತ ಮಹಿಳೆ ಬರ್ಬರವಾಗಿ ಹತ್ಯೆಯಾಗಿದ್ದು ಪ್ರಿಯಕರನೇ ಈ ದುಷ್ಕೃತ್ಯ ಎಸಗಿದ್ದಾನೆ.
ಆಕೆಯ ಜೊತೆ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ, ಆಕೆಯ ಬಾಯಿಗೆ ರಾಸಾಯನಿಕ ಪುಡಿಯನ್ನು ತುಂಬಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಆರೋಪಿ ಸಿದ್ದರಾಜುನನ್ನು ಬಂಧಿಸಲಾಗಿದ್ದು, ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಆಕೆಯ ಸಾವಿಗೆ ಕಾರಣವನ್ನು "ಮೊಬೈಲ್ ಸ್ಫೋಟ" ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಹುಣಸೂರು ತಾಲೂಕಿನ ಗೆರಸನಹಳ್ಳಿ ಗ್ರಾಮದ ನಿವಾಸಿ ದರ್ಶಿತ, ಕೇರಳದ ವ್ಯಕ್ತಿಯನ್ನು ಮದುವೆಯಾಗಿ ಸಿದ್ದರಾಜು ಜೊತೆ ಸಂಬಂಧ ಹೊಂದಿದ್ದಳು.
ಲಾಡ್ಜ್ನಲ್ಲಿದ್ದಾಗ, ಆಕೆಯ ಮತ್ತು ಸಿದ್ದರಾಜು ನಡುವೆ ತೀವ್ರ ವಾಗ್ವಾದ ನಡೆದು, ನಂತರ ಆತ ಆಕೆಯನ್ನು ಕೊಂದಿದ್ದಾನೆ. ಆರೋಪಿ ಆಕೆಯ ಸಾವಿಗೆ ಕಾರಣವನ್ನು ಮೊಬೈಲ್ ಫೋನ್ ಸ್ಫೋಟ ಎಂದು ಕಥೆಕಟ್ಟಿ ಕೊಲೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಆಕೆಯನ್ನು ಕೊಂದ ನಂತರ, ಮೊಬೈಲ್ ಫೋನ್ ಸ್ಫೋಟಗೊಂಡಿದೆ ಎಂದು ಕೂಗಿದ್ದಾನೆ. ಆದರೆ, ಸಿಬ್ಬಂದಿ ಬಂದಾಗ, ಕೋಣೆಯಲ್ಲಿ ಮೊಬೈಲ್ ಫೋನ್ ಇರಲಿಲ್ಲ.
ಆರೋಪಿಯನ್ನು ಸ್ಫೋಟಗೊಂಡ ಮೊಬೈಲ್ ಫೋನ್ ಬಗ್ಗೆ ಕೇಳಿದಾಗ, ಅದನ್ನು ಕಿಟಕಿಯಿಂದ ಹೊರಗೆ ಎಸೆದಿದ್ದಾಗಿ ಹೇಳಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಬ್ಬಂದಿ ಮೊಬೈಲ್ ಫೋನ್ ಅನ್ನು ಹುಡುಕಿದರು ಆದರೆ ಅದು ಸಿಗಲಿಲ್ಲ ಮತ್ತು ಅವರು ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿದರು ಎಂದು ಅವರು ಹೇಳಿದರು.
ತನಿಖೆಯ ಆಧಾರದ ಮೇಲೆ, ಆರೋಪಿ ಸಿದ್ಧರಾಜು ಅಪರಾಧವನ್ನು ಒಪ್ಪಿಕೊಂಡ ನಂತರ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೊಲೆಯ ಹಿಂದಿನ ಕಾರಣವನ್ನು ನಾವು ಮತ್ತಷ್ಟು ತನಿಖೆ ಮಾಡುತ್ತಿದ್ದೇವೆ.
ಅವಳನ್ನು ಕೊಲೆ ಮಾಡಲು ರಾಸಾಯನಿಕ ಪುಡಿ (ಜಿಲೆಟಿನ್ ಕಡ್ಡಿ ಇಟ್ಟು ಸ್ಫೋಟಿಸಿ ಕೊಂದಿರುವುದಾಗಿ ಶಂಖಿಸಲಾಗಿದೆ) ಸಂಯೋಜನೆಯನ್ನು ಬಳಸಿದ್ದಾನೆ, ಪ್ರಸ್ತುತ ಅದರ ಸ್ವರೂಪವನ್ನು ಖಚಿತಪಡಿಸಿಕೊಳ್ಳಲು ಎಫ್ಎಸ್ಎಲ್ (ವಿಧಿವಿಜ್ಞಾನ ತಜ್ಞರು) ತಂಡವು ಪರಿಶೀಲಿಸುತ್ತಿದೆ" ಎಂದು ಅವರು ಹೇಳಿದರು.
ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ