ಬೆಳಗಾವಿಯಲ್ಲಿ ಹೂಡಿಕೆದಾರರಿಗೆ ವಂಚನೆ: ಮೂವರ ವಿರುದ್ಧ ಕೇಸ್ ದಾಖಲಿಸಿದ ಇಡಿ

ಜಾರಿ ನಿರ್ದೇಶನಾಲಯದ ಮಂಗಳೂರು ಉಪ ವಲಯ ಕಚೇರಿಯು PMLA, 2002 ರ ಅಡಿಯಲ್ಲಿ ಈ ಮೂವರು ವಿರುದ್ಧ ಕೇಸ್ ದಾಖಲಿಸಿರುವುದಾಗಿ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.
ED
ಸಾಂದರ್ಭಿಕ ಚಿತ್ರ
Updated on

ಮಂಗಳೂರು: ಬೆಳಗಾವಿಯಲ್ಲಿ ಹಲವು ಹೂಡಿಕೆದಾರರನ್ನು ವಂಚಿಸಿದ ಆರೋಪದ ಮೇಲೆ ಯಲ್ಲಪ್ಪ ಶಾಮ್ ಮಂಗುಟ್ಕರ್, ಶಿವಾನಂದ್ ದಾದು ಕುಂಭಾರ್ ಮತ್ತು ತಾನಾಜಿ ಶಾಮ್ ಮಂಗುಟ್ಕರ್ ವಿರುದ್ಧ ಜಾರಿ ನಿರ್ದೇಶನಾಲಯ(ED) ಡಿಸೆಂಬರ್ 16 ರಂದು ಮಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಪ್ರಾಸಿಕ್ಯೂಷನ್ ದೂರು (PC) ದಾಖಲಿಸಿದೆ.

ಜಾರಿ ನಿರ್ದೇಶನಾಲಯದ ಮಂಗಳೂರು ಉಪ ವಲಯ ಕಚೇರಿಯು PMLA, 2002 ರ ಅಡಿಯಲ್ಲಿ ಈ ಮೂವರು ವಿರುದ್ಧ ಕೇಸ್ ದಾಖಲಿಸಿರುವುದಾಗಿ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಳಗಾವಿ ನಗರದ ಸೈಬರ್ ಅಪರಾಧ, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯಲ್ಲಿ ಹಿಂದಿನ ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 406 ಮತ್ತು 420 ರ ಅಡಿಯಲ್ಲಿ ಕುಂಭಾರ್ ಮತ್ತು ಮಂಗುಟ್ಕರ್ ವಿರುದ್ಧ ಇಡಿ ತನಿಖೆ ಆರಂಭಿಸಿದೆ ಎಂದು ತಿಳಿಸಿದೆ.

ED
Fraud Case: 17,000 ಕೋಟಿ ರೂ ಬ್ಯಾಂಕ್ ಸಾಲ ವಂಚನೆ ಪ್ರಕರಣ; ಇಡಿ ಮುಂದೆ ವಿಚಾರಣೆಗೆ ಅನಿಲ್ ಅಂಬಾನಿ ಹಾಜರು!

"ಪ್ರಮುಖ ಆರೋಪಿಗಳಾದ ಯಲ್ಲಪ್ಪ ಶಾಮ್ ಮಂಗುಟ್ಕರ್ ಮತ್ತು ಶಿವಾನಂದ್ ದಾದು ಕುಂಭಾರ್, ತಾನಾಜಿ ಶಾಮ್ ಮಂಗುಟ್ಕರ್ ಅವರ ಸಹಾಯದಿಂದ, ಬೆಳಗಾವಿ ಮೂಲದ ಹಲವು ಹೂಡಿಕೆದಾರರಿಂದ ಸುಮಾರು 31.09 ಕೋಟಿ ರೂ. ಸಂಗ್ರಹಿಸಿರುವುದು ಇಡಿ ತನಿಖೆಯಿಂದ ತಿಳಿದುಬಂದಿದೆ.

ಕುಂಬಾರ್ ಅವರ ಉಕ್ಕು ಮತ್ತು ಸಿಮೆಂಟ್ ವ್ಯವಹಾರದಲ್ಲಿ ಈ ಹಣವನ್ನು ಬಳಸಿಕೊಳ್ಳಲು, ತಿಂಗಳಿಗೆ ಶೇ. 8 ವರೆಗೆ ಬಡ್ಡಿದರದ ಭರವಸೆ ನೀಡಿ, ಆರೋಪಿಗಳು ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿದ್ದಾರೆ ಎಂದು" ಇಡಿ ಹೇಳಿದೆ.

"ಆರೋಪಿಗಳು ಹೆಚ್ಚಾಗಿ ನಗದು ವಿಧಾನದ ಮೂಲಕ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಆರೋಪಿಗಳು ಭರವಸೆ ನೀಡಿದ ಬಡ್ಡಿ ಮತ್ತು ಬಂಡವಾಳವನ್ನು ಮರುಪಾವತಿಸದೆ ಹೂಡಿಕೆದಾರರನ್ನು ವಂಚಿಸಿದ್ದಾರೆ. ಆರೋಪಿಗಳು ತಮ್ಮ ಬ್ಯಾಂಕ್ ಖಾತೆಗಳ ಮೂಲಕ ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಹೆಚ್ಚಾಗಿ ವೈಯಕ್ತಿಕ ಉದ್ದೇಶಗಳಿಗಾಗಿ ಬಳಸಿಕೊಂಡಿದ್ದಾರೆ ಎಂದು ಇಡಿ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com