ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯಲ್ಲಿ ಕಾನೂನು ನ್ಯೂನತೆಗಳು: ತಜ್ಞರ ಅಭಿಪ್ರಾಯ

ಕೆಲವು ತಜ್ಞರು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MoEFCC) ಪತ್ರ ಬರೆದು, ಎಸ್ ಡಬ್ಲ್ಯುಎಲ್ ಬಿಯ ನಿರ್ಧಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿದ ಇತ್ತೀಚಿನ ಆದೇಶಗಳನ್ನು ಉಲ್ಲೇಖಿಸಿದ್ದಾರೆ.
ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯಲ್ಲಿ ಕಾನೂನು ನ್ಯೂನತೆಗಳು: ತಜ್ಞರ ಅಭಿಪ್ರಾಯ
Updated on

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಗೆ ಬರುವ ಪಶ್ಚಿಮ ಘಟ್ಟದಲ್ಲಿರುವ ಲಯನ್ ಟೈಲ್ಡ್ ಮಕಾಕ್ ಅಭಯಾರಣ್ಯದೊಳಗೆ ಶರಾವತಿಯಿಂದ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅನುಮತಿ ನೀಡುವ ರಾಜ್ಯ ವನ್ಯಜೀವಿ ಮಂಡಳಿಯ (SWLB) ಇತ್ತೀಚಿನ ನಿರ್ಧಾರವನ್ನು ಸಂರಕ್ಷಣಾವಾದಿಗಳು ಮತ್ತು ವನ್ಯಜೀವಿ ತಜ್ಞರು ವಿರೋಧಿಸಿದ್ದಾರೆ.

ಕೆಲವು ತಜ್ಞರು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MoEFCC) ಪತ್ರ ಬರೆದು, ಎಸ್ ಡಬ್ಲ್ಯುಎಲ್ ಬಿಯ ನಿರ್ಧಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿದ ಇತ್ತೀಚಿನ ಆದೇಶಗಳನ್ನು ಉಲ್ಲೇಖಿಸಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಸೆಕ್ಷನ್ 8, ವನ್ಯಜೀವಿಗಳು ಮತ್ತು ಅವುಗಳ ಆವಾಸಸ್ಥಾನದ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು ವನ್ಯಜೀವಿ ಮಂಡಳಿಯ ಕರ್ತವ್ಯವಾಗಿರಬೇಕು ಎಂದು ಆದೇಶಿಸುತ್ತದೆ ಎಂದು ವೈಲ್ಡ್‌ಲೈಫ್ ಫಸ್ಟ್‌ನ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಡಬ್ಲ್ಯುಎಲ್ ಪಿಎಯ ಸೆಕ್ಷನ್ 29, ವನ್ಯಜೀವಿಗಳ ಸುಧಾರಣೆ ಮತ್ತು ಉತ್ತಮ ನಿರ್ವಹಣೆಯನ್ನು ಹೊರತುಪಡಿಸಿ, ವನ್ಯಜೀವಿಗಳ ನಾಶ, ಹಾನಿ ಅಥವಾ ಆವಾಸಸ್ಥಾನದ ದಿಕ್ಕು ತಪ್ಪಿಸುವುದು ಅಥವಾ ಅಭಯಾರಣ್ಯದ ಒಳಗೆ ಅಥವಾ ಹೊರಗೆ ನೀರಿನ ಹರಿವನ್ನು ನಿಲ್ಲಿಸುವುದು ಅಥವಾ ಹೆಚ್ಚಿಸುವುದು ಮಾಡಬಾರದು ಎಂದು ನಿರ್ದಿಷ್ಟಪಡಿಸುತ್ತದೆ.

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯಲ್ಲಿ ಕಾನೂನು ನ್ಯೂನತೆಗಳು: ತಜ್ಞರ ಅಭಿಪ್ರಾಯ
ಪರಿಸರಕ್ಕೆ ಧಕ್ಕೆಯಾಗದಂತೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿ: ಕೆ ಜೆ ಜಾರ್ಜ್ ಭರವಸೆ

ಮುಖ್ಯ ವನ್ಯಜೀವಿ ವಾರ್ಡನ್ (CWLW) WLPA ಯ ಸೆಕ್ಷನ್ 4 ರ ಅಡಿಯಲ್ಲಿ ನೇಮಕಗೊಂಡ ಶಾಸನಬದ್ಧ ಪ್ರಾಧಿಕಾರವಾಗಿದೆ. ಸೆಕ್ಷನ್ 33 ರ ಅಡಿಯಲ್ಲಿ ಅಭಯಾರಣ್ಯದಲ್ಲಿ ಕಾಡು ಪ್ರಾಣಿಗಳಿಗೆ ರಕ್ಷಣೆ ಮತ್ತು ಅಭಯಾರಣ್ಯದ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು ಅವರ ಕರ್ತವ್ಯ. ಆದರೆ ಪಂಪ್ಡ್ ಸ್ಟೋರೇಜ್ ಯೋಜನೆಯು ಬ್ಲಾಸ್ಟಿಂಗ್, ಡ್ರಿಲ್ಲಿಂಗ್, ರಸ್ತೆ ನಿರ್ಮಾಣ ಇತ್ಯಾದಿಗಳನ್ನು ಒಳಗೊಂಡಿರುವುದರಿಂದ ಭೂಕುಸಿತ, ವನ್ಯಜೀವಿ ಆವಾಸಸ್ಥಾನದ ವಿಘಟನೆ ಮತ್ತು ಹಲವಾರು ಸಾವಿರ ಮರಗಳನ್ನು ಕಡಿಯಲು ಕಾರಣವಾಗಬಹುದು. ಇದರಿಂದ ಅಭಯಾರಣ್ಯದಲ್ಲಿ ಕಾಡು ಪ್ರಾಣಿಗಳಿಗೆ ರಕ್ಷಣೆ ಮತ್ತು ಅಭಯಾರಣ್ಯದ ಸಂರಕ್ಷಣೆಯನ್ನು ಖಚಿತಪಡಿಸುವ ಸೆಕ್ಷನ್ 33 ರ ಅನುಸರಣೆಗೆ ಅನುಗುಣವಾಗಿಲ್ಲ ಎಂದು ವೈಲ್ಡ್‌ಲೈಫ್ ಫಸ್ಟ್ ಹೇಳುತ್ತದೆ.

ಯೋಜನಾ ಪ್ರಸ್ತಾವನೆಯಲ್ಲಿ ವಿದ್ಯುತ್ ಪ್ರಸರಣ ಮಾರ್ಗಗಳು/ ಅಸ್ತಿತ್ವದಲ್ಲಿರುವ ಮಾರ್ಗಗಳನ್ನು ಮೇಲ್ದರ್ಜೆಗೇರಿಸುವುದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದಲ್ಲದೆ, 12,000 ಕ್ಕೂ ಹೆಚ್ಚು ಮರಗಳನ್ನು ಕಡಿಯುವ ಮೂಲಕ ಅಭಯಾರಣ್ಯದೊಳಗೆ 12.3 ಕಿ.ಮೀ ರಸ್ತೆಯನ್ನು ನಿರ್ಮಿಸುವ ಪ್ರಸ್ತಾಪವು ಸುಪ್ರೀಂ ಕೋರ್ಟ್ ಆದೇಶಗಳಿಗೆ ವಿರುದ್ಧವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com