ರಾಜ್ಯದಲ್ಲಿ ಬೆಲೆ ಏರಿಕೆ ಸರದಿ: ಬಜೆಟ್ ನಂತರ ನಂದಿನಿ ಹಾಲಿನ ದರ ಲೀಟರ್‌ಗೆ 5 ರೂ ಹೆಚ್ಚಳ ಸಾಧ್ಯತೆ!

ಮಾರ್ಚ್ 7ರಂದು ರಾಜ್ಯ ಬಜೆಟ್ ಮಂಡನೆಯಾದ ಬೆನ್ನಲ್ಲೇ ಲೀಟರ್ ನಂದಿನಿ ಹಾಲಿನ ದರ 5 ರೂ.ಏರಿಕೆಯಾಗಲಿದೆ. ಹಾಲಿನ ಪ್ರಮಾಣವನ್ನು ಸಹ ಹಾಲಿ ಇರುವ 1,050 ಮಿಲಿಯಿಂದ ಒಂದು ಲೀಟರ್‌ಗೆ ಇಳಿಸಲಾಗುವುದು.
Nandini Milk
ನಂದಿನಿ ಹಾಲು
Updated on

ಬೆಂಗಳೂರು: ಈಗಾಗಲೇ ದಿನಬಳಕೆ ವಸ್ತುಗಳ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಕೈ ಸುಡಲಿದೆ. ಮಾರ್ಚ್‌ನಲ್ಲಿ ಚಹಾ, ಕಾಫಿ, ಮೊಸರು ಮತ್ತು ಇತರ ಹಾಲಿನ ಪದಾರ್ಥಗಳ ಬೆಲೆ ಏರಿಕೆಯಾಗಲಿದೆ.

ಮಾರ್ಚ್ 7ರಂದು ರಾಜ್ಯ ಬಜೆಟ್ ಮಂಡನೆಯಾದ ಬೆನ್ನಲ್ಲೇ ಲೀಟರ್ ನಂದಿನಿ ಹಾಲಿನ ದರ 5 ರೂ.ಏರಿಕೆಯಾಗಲಿದೆ. ಹಾಲಿನ ಪ್ರಮಾಣವನ್ನು ಸಹ ಹಾಲಿ ಇರುವ 1,050 ಮಿಲಿಯಿಂದ ಒಂದು ಲೀಟರ್‌ಗೆ ಇಳಿಸಲಾಗುವುದು. ಇದರೊಂದಿಗೆ ಒಂದು ಲೀಟರ್ ನಂದಿನಿ ಟೋನ್ಡ್ ಹಾಲಿನ ಬೆಲೆ 47 ರೂ.ಗೆ ಏರಿಕೆಯಾಗಲಿದೆ.

ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಕಳೆದ ಮೂರು ವರ್ಷಗಳಲ್ಲಿ ಮಾಡಿರುವ ಅತಿ ಹೆಚ್ಚು ದೊಡ್ಡ ಬೆಲೆ ಏರಿಕೆ ಇದಾಗಿದೆ. ಈ ಹಿಂದೆ 2022ರಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನು ಲೀಟರ್‌ಗೆ 3 ರೂ.ಏರಿಸಲಾಗಿತ್ತು. 2024 ರಲ್ಲಿ, ಕೆಎಂಎಫ್ ಹಾಲಿನ ದರವನ್ನು ಪ್ರತಿ ಪ್ಯಾಕೆಟ್‌ಗೆ ರೂ 2 ಹೆಚ್ಚಿಸಿತು ಮತ್ತು ಪ್ರತಿ ಪ್ಯಾಕೆಟ್‌ನ ಪ್ರಮಾಣವನ್ನು 50 ಮಿಲಿ ಹೆಚ್ಚಿಸಿತು.

ಆದಾಗ್ಯೂ, 2024 ರಲ್ಲಿ ಪೂರೈಕೆಯಾಗುವ ಹಾಲಿನ ಪ್ರಮಾಣವೂ ಹೆಚ್ಚಾಗಿರುವುದರಿಂದ ಬೆಲೆ ಏರಿಕೆಯಾಗಿರಲಿಲ್ಲ ಎಂದು ಕೆಎಂಎಫ್ ಮುಂದುವರಿಸಿತ್ತು.

ಕಾಫಿ ಬ್ರೂವರ್ಸ್ ಅಸೋಸಿಯೇಷನ್ ​​​​ಮಾರ್ಚ್ ವೇಳೆಗೆ ಕಾಫಿ ಪುಡಿಯ ಬೆಲೆಯನ್ನು ಕೆಜಿಗೆ 200 ರೂಪಾಯಿಗಳಷ್ಟು ಹೆಚ್ಚಿಸುವುದಾಗಿ ಘೋಷಿಸಿದ ನಂತರ ಹಾಲಿನ ಬೆಲೆ ಏರಿಕೆ ನಾಗರಿಕರಿಗೆ ಮತ್ತೊಂದು ಹೊಡೆತವಾಗಿದೆ. ಬಿಎಂಟಿಸಿ ಬಸ್‌ಗಳು ಮತ್ತು ನಮ್ಮ ಮೆಟ್ರೋದ ಟಿಕೆಟ್ ದರವನ್ನು ಸಹ ಹೆಚ್ಚಿಸಲಾಗಿದೆ.

Nandini Milk
ಮೆಟ್ರೋ ದರ ಏರಿಕೆ ನಡುವೆ ಬೆಂಗಳೂರಿಗರ ಜೇಬು ಸುಡಲಿದೆ ಫಿಲ್ಟರ್ ಕಾಫಿ!

ರಾಜ್ಯ ಸರ್ಕಾರವೂ ನೀರಿನ ದರ ಹೆಚ್ಚಿಸುವ ಕೆಲಸ ಮಾಡುತ್ತಿದೆ. ಮುಂಬರುವ ಹಣಕಾಸು ವರ್ಷಕ್ಕೆ ವಿದ್ಯುತ್ ದರವನ್ನು 67 ಪೈಸೆ ಹೆಚ್ಚಿಸುವಂತೆ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) ಕರ್ನಾಟಕ ವಿದ್ಯುಚ್ಛಕ್ತಿ ಆಯೋಗಕ್ಕೆ ಮನವಿ ಸಲ್ಲಿಸಿವೆ.

ರೈತರು 5/ಲೀಟರ್ ಹೆಚ್ಚಳಕ್ಕೆ ಒತ್ತಾಯಿಸಿದ್ದಾರೆ. ಇನ್ನು ಅಂತಿಮ ನಿರ್ಧಾರ ಮುಖ್ಯಮಂತ್ರಿಯವರದ್ದು. ರಾಜ್ಯ ಬಜೆಟ್ ನಂತರ ಇದು ಜಾರಿಗೆ ಬರಲಿದೆ ಎಂದು KMFವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಈ ಹಿಂದೆ ನಾವು ದಿನಕ್ಕೆ 85-89 ಲಕ್ಷ ಲೀಟರ್ ಸಂಗ್ರಹಿಸುತ್ತಿದ್ದೆವು. ಈಗ ದಿನಕ್ಕೆ 99 ಲಕ್ಷ ಲೀಟರ್ ಮತ್ತು ಅದಕ್ಕಿಂತ ಹೆಚ್ಚಿಗೆಯಾಗಿದೆ. ಈಗ ನಾವು ದಿನಕ್ಕೆ 79-81 ಲಕ್ಷ ಲೀಟರ್ ಪಡೆಯುತ್ತಿದ್ದೇವೆ, ಆದ್ದರಿಂದ ಗ್ರಾಹಕರಿಗೆ ಸರಬರಾಜು ಮಾಡುವ ಹೆಚ್ಚುವರಿ ಹಾಲು ನಿಲ್ಲಿಸಲಾಗುತ್ತದೆ ಎಂದು ಶಿವಸ್ವಾಮಿ ಹೇಳಿದರು, ಇತರ ರಾಜ್ಯಗಳಿಗೆ ಹೋಲಿಸಿದರೇ ಕರ್ನಾಟಕದಲ್ಲಿ ಹಾಲಿನ ದರವು ಇತರ ರಾಜ್ಯಗಳಲ್ಲಿ ಆನ್‌ಲೈನ್‌ನಲ್ಲಿ ಮಾರಾಟವಾಗುವುದಕ್ಕಿಂತ ಕಡಿಮೆ ಇರುತ್ತದೆ.

ತಾತ್ತ್ವಿಕವಾಗಿ, ಹೆಚ್ಚಿದ ವೆಚ್ಚವು ರೈತರಿಗೆ ಹೋಗಬೇಕು, ಆದರೆ ಇತ್ತೀಚಿನ ದಿನಗಳಲ್ಲಿ, ನೌಕರರ ಒಕ್ಕೂಟವು 7 ನೇ ವೇತನ ಆಯೋಗದ ವೇತನ ಮತ್ತು ಪಿಂಚಣಿ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಬೇಡಿಕೆ ಮುಂದಿರಿಸಿದ್ದಾರೆ. ಹೀಗಾಗಿ ಎಲ್ಲವನ್ನೂ ಲೆಕ್ಕ ಹಾಕಬೇಕು' ಎಂದು ಕೆಎಂಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com