ಬೆಳಗಾವಿ: ಮಗನ ಮೇಲಿನ ದ್ವೇಷಕ್ಕೆ ತಾಯಿಯ ಬರ್ಬರ ಹತ್ಯೆ

ಮೂಲಗಳ ಪ್ರಕಾರ, 2018 ರಿಂದ ಎರಡು ಕುಟುಂಬಗಳ ನಡುವಿನ ವೈಷಮ್ಯ ಮುಂದುವರಿದಿತ್ತು. ಎರಡು ಕುಟುಂಬಗಳ ನಡುವೆ ಗಲಾಟೆಯಾಗಿದ್ದರಿಂದ ಕುಟುಂಬದವರು ಊರು ಬಿಟ್ಟಿದ್ದರು.
Representational image
ಸಾಂದರ್ಭಿಕ ಚಿತ್ರ
Updated on

ಬೆಳಗಾವಿ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ‌ಮಹಿಳೆಯೋರ್ವರನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲಹಾಳ್ ಗ್ರಾಮದಲ್ಲಿ ನಡೆದಿದೆ.

ಕಲಹಾಳ್ ಗ್ರಾಮದ ಶೇಖವ್ವ ಮಾದರ್(45) ಕೊಲೆಯಾದ ಮಹಿಳೆಯಾಗಿದ್ದಾರೆ. ಅದೇ ಗ್ರಾಮದ ನಿವಾಸಿ ಮಂಜುನಾಥ ಮಾದರ್ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಮೂಲಗಳ ಪ್ರಕಾರ, 2018 ರಿಂದ ಎರಡು ಕುಟುಂಬಗಳ ನಡುವಿನ ವೈಷಮ್ಯ ಮುಂದುವರಿದಿತ್ತು. ಎರಡು ಕುಟುಂಬಗಳ ನಡುವೆ ಗಲಾಟೆಯಾಗಿದ್ದರಿಂದ ಕುಟುಂಬದವರು ಊರು ಬಿಟ್ಟಿದ್ದರು. ಆದರೆ ತಿಂಗಳಿಗೊಮ್ಮೆ ಪಡಿತರ ತರಲು‌ ಶೇಖವ್ವಾ ಊರಿಗೆ ಬರುತ್ತಿದ್ದರು.

ಮಂಜುನಾಥ ಅವರ ಸಹೋದರಿ ಬಾಗಲಕೋಟೆಯ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಾಗ ಉಲ್ಬಣವಾಗಿದೆ. ಆದಾಗ್ಯೂ, ಶೇಖವ್ವ ಅವರ ಮಗ ತಾನು ವಧುವನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡು ವರನಿಗೆ ಸಂದೇಶ ಕಳುಹಿಸಿದ್ದ, ಇದರಿಂದಾಗಿ ನಿಶ್ಚಿತಾರ್ಥವನ್ನು ರದ್ದುಗೊಳಿಸಲಾಯಿತು, ಇದು ಮಂಜುನಾಥನನ್ನು ಕೆರಳಿಸಿತು.

ಘಟನೆ ನಡೆದ ದಿನ ಶೇಖವ್ವ ಪಡಿತರ ಸಾಮಗ್ರಿಗಳನ್ನು ಸಂಗ್ರಹಿಸಲು ಕಲಹಲ್‌ಗೆ ಹೋಗಿದ್ದರು. ಅವಕಾಶವನ್ನು ಸದುಪಯೋಗಪಡಿಸಿಕೊಂಡ ಮಂಜುನಾಥ್ ಆಕೆಯ ಮೇಲೆ ಕೊಡಲಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ತಲೆಗೆ ಹೊಡೆದಿದ್ದಾನೆ. ಕೊಲೆಯ ನಂತರ, ಸುರೇಬನ್ ಪೊಲೀಸರು ಮಂಜುನಾಥ್‌ನನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

Representational image
ಬೆಂಗಳೂರು: ಪತ್ನಿಯ ಜೊತೆ ಸಲುಗೆ; ಚಾಕುವಿನಿಂದ ಇರಿದು ಸ್ನೇಹಿತನ ಕೊಲೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com