ಬೆಂಗಳೂರು: ಪತ್ನಿಯ ಜೊತೆ ಸಲುಗೆ; ಚಾಕುವಿನಿಂದ ಇರಿದು ಸ್ನೇಹಿತನ ಕೊಲೆ

ಚಿತ್ರದುರ್ಗ ಮೂಲದ ಕಿಶೋರ್ ಮೃತ ವ್ಯಕ್ತಿ. ಕೆಜಿಎಫ್ ಮೂಲದ ಸತೀಶ್ ರೆಡ್ಡಿ ಬಂಧಿತ ಆರೋಪಿ. ಮೃತ ವ್ಯಕ್ತಿ ಮತ್ತು ಆರೋಪಿ ಇಬ್ಬರೂ ಆಪ್ತ ಸ್ನೇಹಿತರಾಗಿದ್ದರು.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಜೊತೆಗೆ ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಮನೆಯ ಬಳಿಯೇ ಕಾದು ಗೆಳೆಯನಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ವರ್ತೂರು ಬಳಿಯ ಕೊಡತಿಯಲ್ಲಿ ನಡೆದಿದೆ.

ಚಿತ್ರದುರ್ಗ ಮೂಲದ ಕಿಶೋರ್ ಮೃತ ವ್ಯಕ್ತಿ. ಕೆಜಿಎಫ್ ಮೂಲದ ಸತೀಶ್ ರೆಡ್ಡಿ ಬಂಧಿತ ಆರೋಪಿ. ಮೃತ ವ್ಯಕ್ತಿ ಮತ್ತು ಆರೋಪಿ ಇಬ್ಬರೂ ಆಪ್ತ ಸ್ನೇಹಿತರಾಗಿದ್ದರು.

ಕಿಶೋರ್ ಸಂತೋಷ್ ರೆಡ್ಡಿ ಪತ್ನಿಗೆ ಆಪ್ತರಾಗಿದ್ದರು ಮತ್ತು ನಿಯಮಿತವಾಗಿ ಅವರ ಮನೆಗೆ ಭೇಟಿ ನೀಡುತ್ತಿದ್ದರು ಎಂದು ವರದಿಯಾಗಿದೆ. ರೆಡ್ಡಿ ಕಿಶೋರ್ ನನ್ನು ತನ್ನ ಮನೆಗೆ ಬರದಂತೆ ಎಚ್ಚರಿಸಿದ್ದರು. ಸಂತೋಷ್ ಪತ್ನಿ ಕೊಡತಿಯಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಮಕ್ಕಳು ಮತ್ತು ತಾಯಿಯೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ಕಿಶೋರ್ ಆಕೆಯನ್ನು ನೋಡಲು ನಿಯಮಿತವಾಗಿ ಬರುತ್ತಿದ್ದ. ಮನೆ ಮಾಲೀಕರಿಗೆ ಅವನನ್ನು ತನ್ನ ಸಹೋದರ ಎಂದು ಪರಿಚಯಿಸಿದ್ದರು.

ಶುಕ್ರವಾರ ಸಂಜೆ 7.30 ರ ಸುಮಾರಿಗೆ ಸಂತೋಷ್ ರೆಡ್ಡಿ ಚಾಕುವಿನಿಂದ ಬಂದು ತನ್ನ ಪತ್ನಿಯ ಮನೆಯ ಬಳಿ ಹೊಂಚು ಹಾಕಿದ್ದ. ಕಿಶೋರ್ ಬಂದಾಗ, ಜಗಳವಾಡಿ, ಆತನಿಗೆ ಹಲವು ಬಾರಿ ಇರಿದ. ನಂತರ ರೆಡ್ಡಿ ಅಪರಾಧ ನಡೆದ ಸ್ಥಳದಲ್ಲಿಯೇ ಕುಳಿತು ತಪ್ಪಿಸಿಕೊಳ್ಳಲು ಯಾವುದೇ ಪ್ರಯತ್ನ ಮಾಡಲಿಲ್ಲ. ದಾರಿಹೋಕರೊಬ್ಬರು ತಕ್ಷಣ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರು. ಪೊಲೀಸರು ಅಪರಾಧ ನಡೆದ ಸ್ಥಳದಿಂದ ಆರೋಪಿಯನ್ನು ಕರೆದೊಯ್ದರು. ಆರೋಪಿ ಸಂತೋಷ್ ಪತ್ನಿ ಕಿಶೋರ್ ನನ್ನ ಆಸ್ಪತ್ರೆಗೆ ದಾಖಲಿಸಿದ್ದಳು.

Representational image
ಬೆಂಗಳೂರು: ಪತ್ನಿಯ ಮೇಲೆ ಹಲ್ಲೆ, ಆಕೆಯ ಪ್ರಿಯಕರನ ಕೊಲೆ; ಮೂವರ ಬಂಧನ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com