ಉತ್ತರ ಕನ್ನಡ: ಕೊಲೆ ರಹಸ್ಯ ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದ 'ಕಾರ್ತಿಕ ಹಬ್ಬ'; ಕಳ್ಳತನದ ಹಣದಲ್ಲಿ ಊರಿಗೆಲ್ಲ ಬಾಡೂಟ!

ಔತಣಕೂಟ ಆಯೋಜಿಸಿದ್ದ ಅಭಿಜಿತ್ ಮಡಿವಾಳ ಎಂಬಾತ, ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ವೃದ್ಧೆಯೊಬ್ಬಳನ್ನು ಕೊಲೆಗೈದು 20 ಸಾವಿರ ರೂಪಾಯಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿ ಎಂಬುದು ಬೆಳಕಿಗೆ ಬಂದಿದೆ.
Representational image
ಸಾಂದರ್ಭಿಕ ಚಿತ್ರ
Updated on

ಸಿದ್ದಾಪುರ(ಉತ್ತರ ಕನ್ನಡ): ಹಿಂದೂ ಕ್ಯಾಲೆಂಡರ್ ಪ್ರಕಾರ ಕಾರ್ತಿಕ ಮಾಸವನ್ನು ಮಂಗಳಕರ ತಿಂಗಳು ಎಂದು ಹೇಳಲಾಗುತ್ತದೆ. ಹಬ್ಬದ ಪ್ರಯುಕ್ತ ವ್ಯಕ್ತಿಯೊಬ್ಬರು ಆಯೋಜಿಸಿದ್ದ ಔತಣವು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕೊಲೆ ರಹಸ್ಯವನ್ನು ಭೇದಿಸಲು ಸಹಾಯ ಮಾಡಿದೆ.

ಔತಣಕೂಟ ಆಯೋಜಿಸಿದ್ದ ಅಭಿಜಿತ್ ಮಡಿವಾಳ ಎಂಬಾತ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ವೃದ್ಧೆಯೊಬ್ಬಳನ್ನು ಕೊಲೆಗೈದು 20 ಸಾವಿರ ರೂಪಾಯಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿ ಎಂಬುದು ಬೆಳಕಿಗೆ ಬಂದಿದೆ.

ಡಿಸೆಂಬರ್ 25, 2024 ರಂದು, ಸಿದ್ದಾಪುರ ಪೊಲೀಸರು ಮನೆಯಲ್ಲಿ ಮಹಿಳೆಯೊಬ್ಬರನ್ನು ಒಳಗಿನಿಂದ ಬೀಗ ಹಾಕಿ ಕೊಲೆ ಮಾಡಿರುವುದನ್ನು ಪತ್ತೆ ಮಾಡಿದರು. ಒಂಟಿಯಾಗಿ ವಾಸಿಸುತ್ತಿದ್ದ 72 ವರ್ಷದ ಗೀತಾ ಹುಂಡೇಕರ ಎಂಬುವರೇ ಕೊಲೆಯಾದ ಮಹಿಳೆ. ಇವರ ಪತಿ ಹಲವು ವರ್ಷಗಳ ಹಿಂದೆ ತೀರಿಕೊಂಡಿದ್ದು, ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗಿ ದೂರದ ಊರುಗಳಲ್ಲಿ ವಾಸವಾಗಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿಗಳು ಸ್ನಾನಗೃಹದ ಮೇಲ್ಛಾವಣಿಯ ಹೆಂಚುಗಳನ್ನು ತೆಗೆದು ಮನೆಗೆ ಪ್ರವೇಶಿಸಿ ಆಕೆಯನ್ನು ಕೊಲೆ ಮಾಡಿದ್ದರು. ನಂತರ ಹಿಂದಿನ ದಿನ ಗೀತಾ ಸಂಗ್ರಹಿಸಿದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದರು. ಮನೆಯ ಒಳಗಿನಿಂದ ಬೀಗ ಹಾಕಿದ್ದನ್ನು ಅಕ್ಕಪಕ್ಕದ ಮನೆಯವರು ಗಮನಿಸಿದಾಗ ಆಕೆಯ ಮನೆ ಬಾಗಿಲಲ್ಲಿ ಇಟ್ಟಿದ್ದ ಹಾಲಿನ ಬಾಟಲಿ ಹಾಗೆ ಇತ್ತು. ಇದನ್ನು ಗಮನಿಸಿದ ನೆರೆಹೊರೆಯವರು ಆಕೆಯ ಸಂಬಂಧಿಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.

Representational image
1.22 ಕೋಟಿ ರೂ ಮೌಲ್ಯದ ಚಿನ್ನಾಭರಣ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಸಿದ್ದಾಪುರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ ಸುಳಿವುಗಳನ್ನು ಹುಡುಕುತ್ತಿದ್ದರು.ಕೊಲೆಯಾದ ಮಹಿಳೆಗೆ ಯಾವುದೇ ಶತ್ರುಗಳಿಲ್ಲ ಮತ್ತು ಅವಳು ಸ್ವಾಭಿಮಾನ ಹೊಂದಿರುವ ಮಹಿಳೆ ಎಂದು ನಾವು ತಿಳಿದಿದ್ದೇವೆ. ಆಕೆ ಖಾಸಗಿ ಬ್ಯಾಂಕ್‌ನಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಳು. ಸಣ್ಣ ವ್ಯಾಪಾರಸ್ಥರಿಂದ ಪ್ರತಿದಿನ ಸಂಜೆ ವೇಳೆಗೆ 20,000 ರೂ.ಗಳನ್ನು ಸಂಗ್ರಹಿಸಿ ಅದನ್ನು ಬ್ಯಾಂಕ್‌ಗೆ ಜಮಾ ಮಾಡುವ ಮೊದಲು ಮರುದಿನದವರೆಗೆ ತನ್ನ ಬಳಿ ಇಟ್ಟುಕೊಂಡಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದರು.

ಸಿದ್ದಾಪುರದಲ್ಲಿ ಕಳೆದ 10 ವರ್ಷಗಳಲ್ಲಿ ನಡೆದ ಎಲ್ಲ ಕಳ್ಳತನ ಪ್ರಕರಣಗಳನ್ನು ಮತ್ತು ಹೆಂಚು ತೆಗೆದು ಮನೆಯೋಳಗೆ ಇಳಿದು ಕಳ್ಳತನ ಮಾಡಿದವರ್ಯಾರು ಎಂದು ಕಳ್ಳತನ ಪ್ರಕರಣಗಳನ್ನು ಹುಡುಕಲಾಯಿತು. ಆಗ ಕೊಂಡ್ಲಿಯ ಅಭಿಜಿತ್‌ನ ಹೆಸರು ಕಂಡುಬಂದಿತ್ತು. ಆತ 2015 ರಿಂದ 2022 ರ ನಡುವೆ ಸಿದ್ದಾಪುರದಲ್ಲಿ ಒಟ್ಟು ನಾಲ್ಕು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಎರಡು ಪ್ರಕರಣಗಳಲ್ಲಿ ಆತನಿಗೆ ಶಿಕ್ಷೆಯೂ ಆಗಿತ್ತು.

ಆತನ ಬಗ್ಗೆ ಊರಿಗೆ ಹೋಗಿ ವಿಚಾರಿಸಿದಾಗ ಅವರಿಗೆ ಮಹತ್ವದ ಮಾಹಿತಿ ಸಿಕ್ಕಿತ್ತು. ಆತನಿಗೆ ಯಾವುದೇ ಆದಾಯದ ಮೂಲ ಇರಲಿಲ್ಲ. ಆದರೆ, ಇತ್ತೀಚಗೆ ಗ್ರಾಮದಲ್ಲಿ ನಡೆದ ಕಾರ್ತಿಕ ಹಬ್ಬದಲ್ಲಿ ಊರಿನವರಿಗೆಲ್ಲ ಭರ್ಜರಿ ಬಾಡೂಟ ಹಾಕಿದ್ದ. ಆ ಸುದ್ದಿ ಗೋತ್ತಾಗಿ ಪೊಲೀಸ್ ಅವರನ್ನು ಕರೆತಂದು ವಿಚಾರಣೆ ನಡೆಸಿದಾಗ ಗೆಳೆಯನಿಂದ ಸಾಲ ಪಡೆದಿರುವುದಾಗಿ ದಿಕ್ಕು ತಪ್ಪಿಸಿದ.

ಪೊಲೀಸರು ಸ್ನೇಹಿತನನ್ನು ಕರೆಸಿದಾಗ, ಅವನು ತನ್ನೊಂದಿಗೆ ಯಾವುದೇ ವ್ಯವಹಾರವನ್ನು ಹೊಂದಿಲ್ಲ ಮತ್ತು ಅವನು ಅವನಿಗೆ ಯಾವುದೇ ಹಣವನ್ನು ನೀಡಿಲ್ಲ ಎಂದು ಹೇಳಿದನು. ಕೊನೆಗೆ ಗೀತಾಳನ್ನು ಕೊಲೆ ಮಾಡಿ 20,680 ರೂ.ಗಳನ್ನು ತೆಗೆದುಕೊಂಡು ಹೋಗಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದು, ಅದರಲ್ಲಿ 19,280 ರೂ.ಗಳನ್ನು ಮಾಂಸಾಹಾರಿ ಔತಣಕ್ಕೆ ಖರ್ಚು ಮಾಡಿದ್ದರು.

ಕೆಲವು ಚಿನ್ನಾಭರಣಗಳನ್ನು ಕದ್ದು ಅದರಲ್ಲಿ ಒಂದು ಭಾಗವನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದನ್ನು ಆರೋಪಿಗಳು ಒಪ್ಪಿಕೊಂಡರು, ಕೆಲವನ್ನು ಚಿನ್ನದ ಸಾಲದ ಕಂಪನಿಯಲ್ಲಿ ಗಿರವಿ ಇಟ್ಟಿದ್ದರು. ಉತ್ತರ ಕನ್ನಡ ಎಸ್ಪಿ ನಾರಾಯಣ್ ತನಿಖಾ ತಂಡದ ಪ್ರಯತ್ನವನ್ನು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com