ಕಲಬುರಗಿಯಲ್ಲಿ ದರ್ಶನ್ ಗ್ಯಾಂಗ್ ಹೋಲುವ ಪ್ರಕರಣ: ತ್ರಿಕೋನ ಪ್ರೇಮಕತೆ ಕೊಲೆಯಲ್ಲಿ ಅಂತ್ಯ; ಮೂವರ ಬಂಧನ

ಮಾರ್ಚ್‌ನಲ್ಲಿ ರಾಯಚೂರು ಜಿಲ್ಲೆಯ ಶಕ್ತಿನಗರ ಬಳಿಯ ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು, ಈ ಸಂಬಂಧ ರಾಯಚೂರು ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದರು.
love triangle behind Kalaburagi murder plot
ಕಲಬುರಗಿಯಲ್ಲಿ ದರ್ಶನ್ ಗ್ಯಾಂಗ್ ಹೋಲುವ ಪ್ರಕರಣ
Updated on

ಕಲಬುರಗಿ: ಕಲಬುರಗಿಯಲ್ಲಿ ರೇಣುಕಸ್ವಾಮಿ ಕೊಲೆಯನ್ನು ಹೋಲುವ ಪ್ರಕರಣ ಬೆಳಕಿಗೆ ಬಂದಿದ್ದು, ಮೂವರನ್ನು ಬಂಧಿಸಲಾಗಿದೆ.

ಕಲಬುರಗಿ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್‌ಡಿ ಮಾತನಾಡಿ, ಮಾರ್ಚ್‌ನಲ್ಲಿ ರಾಯಚೂರು ಜಿಲ್ಲೆಯ ಶಕ್ತಿನಗರ ಬಳಿಯ ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು, ಈ ಸಂಬಂಧ ರಾಯಚೂರು ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದರು.

ಸುರೇಖಾ ಎಂಬ ಮಹಿಳೆ ತನ್ನ ಪತಿ ರಾಘವೇಂದ್ರ ಎರಡು ತಿಂಗಳಿನಿಂದ ಕಾಣೆಯಾಗಿದ್ದಾನೆ ಎಂದು ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ, ಇನ್ಸ್‌ಪೆಕ್ಟರ್ ಶಕೀಲ್ ಅಂಗಡಿ ತನಿಖೆ ಆರಂಭಿಸಿದರು. ರಾಘವೇಂದ್ರ ಅಶ್ವಿನಿ ಅಲಿಯಾಸ್ ತನು ಜೊತೆ ಲಿವ್-ಇನ್ ಸಂಬಂಧದಲ್ಲಿದ್ದ ಎಂದು ತಿಳಿದು ಬಂದಿದೆ.

ನಂತರ ಆಕೆ ರಾಘವೇಂದ್ರನನ್ನು ತೊರೆದು ಗುರುರಾಜ್ ಜೊತೆ ಸಂಬಂಧ ಬೆಳೆಸಿದಳು. ಈ ವಿಷಯ ರಾಘವೇಂದ್ರನಿಗೆ ತಿಳಿದಾಗ, ಅಶ್ವಿನಿಗೆ ಮತ್ತೆ ತನ್ನ ಬಳಿಗೆ ಮರಳುವಂತೆ ಕಿರುಕುಳ ನೀಡಲು ಪ್ರಾರಂಭಿಸಿದನು.

love triangle behind Kalaburagi murder plot
Darshan ಪ್ರಕರಣದಿಂದ ಪ್ರೇರಿತ: ಮಾಜಿ ಗೆಳತಿಗೆ ಅಶ್ಲೀಲ ಸಂದೇಶ ಕಳಿಸಿದ ವ್ಯಕ್ತಿ ಅಪಹರಣ, ಭೀಕರ ಹಲ್ಲೆ!

ಅಶ್ವಿನಿ ಗುರುರಾಜ್‌ಗೆ ಈ ವಿಷಯ ತಿಳಿಸಿದ್ದಾಳೆ. ನಂತರ ಅವನು ತನ್ನ ಸ್ನೇಹಿತ ಲಕ್ಷ್ಮಿಕಾಂತ್ ಜೊತೆ ಸೇರಿ ಪ್ಲಾನ್ ರೂಪಿಸಿದ್ದ. ಮಾರ್ಚ್ 12 ರಂದು, ಅಶ್ವಿನಿ ರಾಘವೇಂದ್ರನನ್ನು ಕಲಬುರಗಿಯ ಸೂಪರ್ ಮಾರ್ಕೆಟ್ ಬಳಿ ಭೇಟಿಯಾಗಲು ಆಹ್ವಾನಿಸಿದಳು. ಅವನು ಸ್ಥಳಕ್ಕೆ ಬಂದಾಗ, ಮೂವರೂ ಅವನನ್ನು ಅಪಹರಿಸಿ ಕೃಷ್ಣ ನಗರದ ಬಳಿಯ ಸ್ಮಶಾನಕ್ಕೆ ಕರೆದೊಯ್ದರು. ಅಲ್ಲಿ ಅವರು ಅವನ ಮೇಲೆ ಹಲ್ಲೆ ನಡೆಸಿ ಅವನ ಗುಪ್ತಾಂಗಗಳಿಗೆ ಹೊಡೆದು ಕೊಂದಿದ್ದರು ಎಂದು ಮಾಹಿತಿ ನೀಡಿದ್ದಾರೆ.

ನಂತರ ಅವರು ಶವವನ್ನು ರಾಯಚೂರು ಜಿಲ್ಲೆಯ ಶಕ್ತಿನಗರಕ್ಕೆ ತೆಗೆದುಕೊಂಡು ಹೋಗಿ ಕೃಷ್ಣಾ ನದಿಗೆ ಎಸೆದರು. ಪೊಲೀಸರು ಮೂವರು ಆರೋಪಿಗಳನ್ನು ಕಲಬುರಗಿ ನಗರಕ್ಕೆ ಪತ್ತೆಹಚ್ಚಿ ಬಂಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com