File photo
ಸಂಗ್ರಹ ಚಿತ್ರ

RTI ಕಾಯ್ದೆಯನ್ನು ವಿಶ್ವವಿದ್ಯಾಲಯಗಳ ಪಠ್ಯಕ್ರಮದ ಭಾಗವಾಗಿಸಿ: ರಾಜ್ಯ ಸರ್ಕಾರಕ್ಕೆ ಕರ್ನಾಟಕ ಮಾಹಿತಿ ಆಯೋಗ ಶಿಫಾರಸು

ಯುವಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸರ್ಕಾರಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಸುಧಾರಿಸುವುದು ಈ ಕ್ರಮದ ಉದ್ದೇಶವಾಗಿದೆ.
Published on

ಬೆಂಗಳೂರು: ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆರ್‌ಟಿಐ ಸಂಬಂಧಿತ ಪಠ್ಯಕ್ರಮವನ್ನು ಪರಿಚಯಿಸುವುದು ಸೇರಿದಂತೆ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯ ಅನುಷ್ಠಾನವನ್ನು ಬಲಪಡಿಸಲು ಹಲವಾರು ಕ್ರಮಗಳ ಕುರಿತು ಕರ್ನಾಟಕ ಮಾಹಿತಿ ಆಯೋಗವು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಯುವಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸರ್ಕಾರಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಸುಧಾರಿಸುವುದು ಈ ಕ್ರಮದ ಉದ್ದೇಶವಾಗಿದೆ.

ಜುಲೈ 14 ರಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅಧ್ಯಕ್ಷತೆಯಲ್ಲಿ ಆರ್‌ಟಿಐ ಕುರಿತ ಉನ್ನತ ಮಟ್ಟದ ಸಭೆ ನಡೆಯಲಿದೆ.

ಸಭೆಗೂ ಮುನ್ನ ರಾಜ್ಯ ಮಾಹಿತಿ ಆಯುಕ್ತರು ಇತ್ತೀಚೆಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಶಿಫಾರಸುಗಳ ವಿವರವಾದ ಪಟ್ಟಿಯನ್ನು ಸಲ್ಲಿಸಿದರು.

File photo
112 ಸಂಖ್ಯೆಗೆ ಅನಾಮಧೇಯವಾಗಿ ತುರ್ತು ಕರೆ ಮಾಡಬಹುದು: RTI ಪ್ರಶ್ನೆಗೆ ಪೊಲೀಸರ ಮಾಹಿತಿ

ಆಯೋಗವು ಆರ್‌ಟಿಐ ಕಾಯ್ದೆಯನ್ನು ವಿಶ್ವವಿದ್ಯಾಲಯದ ಪಠ್ಯಕ್ರಮ ಮತ್ತು ಕೆಪಿಎಸ್‌ಸಿ, ಕೆಇಎ ಮತ್ತು ಇತರ ನೇಮಕಾತಿ ಸಂಸ್ಥೆಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಂಯೋಜಿಸುವುದನ್ನು ಪ್ರಸ್ತಾಪಿಸಿದೆ.

ಸರ್ಕಾರಿ ವಲಯದಲ್ಲಿ ಬಡ್ತಿ ಮತ್ತು ವೇತನ ವಿಮರ್ಶೆಗಳಿಗೆ ಆರ್‌ಟಿಐ ಸಂಬಂಧಿತ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದನ್ನು ಮಾನದಂಡವನ್ನಾಗಿ ಮಾಡುವಂತೆ ಆಯೋಗವು ಶಿಫಾರಸು ಮಾಡಿದೆ.

ಆಡಳಿತ ತರಬೇತಿ ಸಂಸ್ಥೆ (ಮೈಸೂರು), ಜಿಲ್ಲಾ ತರಬೇತಿ ಸಂಸ್ಥೆಗಳು ಮತ್ತು ಹಣಕಾಸು ನೀತಿ ಸಂಸ್ಥೆ (ಬೆಂಗಳೂರು) ನಂತಹ ಸಂಸ್ಥೆಗಳಲ್ಲಿ ಆರ್‌ಟಿಐ ತರಬೇತಿಯ ಅಗತ್ಯವನ್ನು ಆಯೋಗವು ಇದೇ ವೇಳೆ ಎತ್ತಿ ತೋರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com