ಶಿಥಿಲಾವಸ್ಥೆಯಲ್ಲಿ ಚನ್ನಪಟ್ಟಣದ ಶ್ರೀರಾಮ ದೇವಾಲಯ: ಸ್ವಪ್ರೇರಿತ ಕೇಸು ದಾಖಲಿಸಿದ ಉಪ ಲೋಕಾಯುಕ್ತ

ದೇವಾಲಯದ ಹೊರಗಿನ ಕಲ್ಲಿನ ಕಂಬದ ಬಲಭಾಗದಲ್ಲಿರುವ ಗೋಡೆ ಮತ್ತು ತಡೆಗೋಡೆಯ ಕಾಂಪೌಂಡ್ ಕುಸಿಯುವ ಹಂತದಲ್ಲಿದೆ, ಗರ್ಭಗುಡಿಯಲ್ಲಿರುವ ಕಲ್ಲಿನ ಗೋಡೆ ಜಾರುತ್ತಿದೆ.
ಶಿಥಿಲಾವಸ್ಥೆಯಲ್ಲಿ ಚನ್ನಪಟ್ಟಣದ ಶ್ರೀರಾಮ ದೇವಾಲಯ: ಸ್ವಪ್ರೇರಿತ ಕೇಸು ದಾಖಲಿಸಿದ ಉಪ ಲೋಕಾಯುಕ್ತ
Updated on

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರಿನಲ್ಲಿರುವ ಸಂರಕ್ಷಿತ ಸ್ಮಾರಕ ಶ್ರೀರಾಮ ದೇವಾಲಯ ಶಿಥಿಲಾವಸ್ಥೆಯಲ್ಲಿದ್ದು, ಇದನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ ಎನ್ ಫಣೀಂದ್ರ, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ, ಅವರ ಕರ್ತವ್ಯಲೋಪಕ್ಕೆ ವಿವರಣೆ ಕೋರಿದ್ದಾರೆ.

ಜುಲೈ 7 ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಉಪ ಆಯುಕ್ತ ಯಶವಂತ್ ವಿ ಗುರುಕರ್ ಮತ್ತು ಇತರ ಅಧಿಕಾರಿಗಳೊಂದಿಗೆ ಕೆರೆಗಳ ಮಾಲಿನ್ಯ ಮತ್ತು ಅತಿಕ್ರಮಣವನ್ನು ಪರಿಶೀಲಿಸಲು ಹೋಗುತ್ತಿದ್ದಾಗ ದೇವಾಲಯಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತರು ದೇವಾಲಯದ ಶೋಚನೀಯ ಸ್ಥಿತಿಯನ್ನು ಗಮನಿಸಿ ಈ ಕ್ರಮ ಕೈಗೊಂಡಿದ್ದಾರೆ.

ನಾಲ್ಕನೇ ಮತ್ತು ಐದು ಶತಮಾನಗಳ ಹಿಂದೆ ಗಂಗಾ ಸಾಮ್ರಾಜ್ಯವು ಕಣ್ವಾ ನದಿಯ ದಡದಲ್ಲಿ ನಿರ್ಮಿಸಿದ ಪ್ರಸಿದ್ಧ ದೇವಾಲಯಗಳಲ್ಲಿ ಇದೂ ಒಂದು. ಇದನ್ನು ಮೇ 5, 1987 ರಂದು ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾಯಿತು ಎಂದು ನ್ಯಾಯಮೂರ್ತಿ ಫಣೀಂದ್ರ ಹೇಳಿದರು.

ದೇವಾಲಯದ ಹೊರಗಿನ ಕಲ್ಲಿನ ಕಂಬದ ಬಲಭಾಗದಲ್ಲಿರುವ ಗೋಡೆ ಮತ್ತು ತಡೆಗೋಡೆಯ ಕಾಂಪೌಂಡ್ ಕುಸಿಯುವ ಹಂತದಲ್ಲಿದೆ, ಗರ್ಭಗುಡಿಯಲ್ಲಿರುವ ಕಲ್ಲಿನ ಗೋಡೆ ಜಾರುತ್ತಿದೆ, ದೇವಾಲಯದ ಗೋಡೆಗಳ ಒಳಗೆ ಬಿರುಕುಗಳು ಕಾಣಿಸಿಕೊಂಡಿವೆ - ಇವೆಲ್ಲವೂ ತಕ್ಷಣ ಗಮನ ಹರಿಸದಿದ್ದರೆ ದೊಡ್ಡ ವಿಪತ್ತಿಗೆ ಕಾರಣವಾಗಬಹುದು ಎಂದು ನ್ಯಾಯಮೂರ್ತಿ ಫಣೀಂದ್ರ ಹೇಳಿದರು.

ಮರಳು ಗಣಿಗಾರಿಕೆಗೆ ತೀವ್ರವಾಗಿ ಬಳಸಿಕೊಳ್ಳಲಾಗುತ್ತಿದ್ದ ನದಿಯ ಒಡ್ಡು ಸವೆತದಿಂದಾಗಿ ಆವರಣ ಗೋಡೆ ಕುಸಿದಿದೆ ಎಂದು ಸ್ಥಳದಲ್ಲಿದ್ದ ಪುರಾತತ್ವ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ತಾರಕೇಶ್ ಉಪ ಲೋಕಾಯುಕ್ತರಿಗೆ ತಿಳಿಸಿದರು. ಸಿಎನ್‌ಎನ್‌ಎಲ್‌ನ ಕಾರ್ಯನಿರ್ವಾಹಕ ಎಂಜಿನಿಯರ್ (EE) ಮೋಹನ್, ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಬಂದರೆ ತಡೆಗೋಡೆಯ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಉಪ ಲೋಕಾಯುಕ್ತರಿಗೆ ತಿಳಿಸಿದರು.

ಶಿಥಿಲಾವಸ್ಥೆಯಲ್ಲಿ ಚನ್ನಪಟ್ಟಣದ ಶ್ರೀರಾಮ ದೇವಾಲಯ: ಸ್ವಪ್ರೇರಿತ ಕೇಸು ದಾಖಲಿಸಿದ ಉಪ ಲೋಕಾಯುಕ್ತ
ನ್ಯಾಯದ ನಿರೀಕ್ಷೆಯಿಂದ, ನಾಗರಿಕರು ಲೋಕಾಯುಕ್ತ ಸಂಪರ್ಕಿಸುತ್ತಾರೆ: ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ (ಸಂದರ್ಶನ)

ಆದಾಗ್ಯೂ, ಈ ಸ್ಮಾರಕವನ್ನು ಪುರಾತತ್ವ, ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಸಿಎನ್‌ಎನ್‌ಎಲ್, ಕಂದಾಯ ಇಲಾಖೆ ನಿರ್ಲಕ್ಷಿಸಿದ್ದು, ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 2(10) ರ ಅಡಿಯಲ್ಲಿ ದುರ್ನಿವಹಣೆಯಾಗಿದೆ ಎಂದರು.

ಇಲಾಖೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಸ್ಮಾರಕವನ್ನು ರಕ್ಷಿಸಲು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು, ಅಧಿಕಾರಿಗಳಾದ ತಾರಕೇಶ್, ಮೋಹನ್ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ ಮುಜರಾಯಿ ಇಲಾಖೆಯ ತಹಶೀಲ್ದಾರ್ ಆಗಿರುವ ಮೊಹಮ್ಮದ್ ಜೀಶನ್ ಅಲಿ ಖಾನ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com